<p><strong>ಹೂವಿನಹಡಗಲಿ: </strong>ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಅಭಿವೃದ್ಧಿ ಅಧಿಕಾರಿಯ ಫೋರ್ಜರಿ ಸಹಿಯ ಚೆಕ್ ನೀಡಿ, ಬ್ಯಾಂಕ್ನಲ್ಲಿ ₹1.99 ಲಕ್ಷ ಡ್ರಾ ಮಾಡಿಕೊಂಡಿರುವ ಮತ್ತೊಂದು ಹಣ ದುರ್ಬಳಕೆ ಪ್ರಕರಣ ನಡೆಡಿದೆ.</p>.<p>ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೋಗಿ ಶಾಖೆಯಲ್ಲಿರುವ ನಂದಿಹಳ್ಳಿ ಗ್ರಾಮ ಪಂಚಾಯಿತಿ 14 ಮತ್ತು 15ನೇ ಹಣಕಾಸು ಯೋಜನೆಯ ಖಾತೆಯಿಂದ ಏಪ್ರಿಲ್ 3ರಂದು ₹1.99 ಲಕ್ಷ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಧರ್ಮಸಾಗರ ಶಾಖೆಯ ಕೆ. ಶಂಕ್ರಪ್ಪ ಎಂಬುವವರ ಖಾತೆಗೆ ಜಮೆ ಮಾಡಿ ಹಣ ತೆಗೆಯಲಾಗಿದೆ.</p>.<p>ಹಣಕಾಸು ವಹಿವಾಟು ಪರಿಶೀಲನೆ ವೇಳೆ, ಪಂಚಾಯಿತಿ ಅಧ್ಯಕ್ಷೆ ಶೈನಾಜ್ ಬೀ, ಪಿಡಿಒ ಎಂ. ಪ್ರಕಾಶ್ ಅವರ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಿರುವುದು ಗೊತ್ತಾಗಿದೆ.</p>.<p>ಪಿಡಿಒ ಎಂ. ಪ್ರಕಾಶ್ ಅವರು ಜೂನ್ 24ರಂದು ಪಟ್ಟಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿ, ನಕಲಿ ಸಹಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.</p>.<p>ಕಳೆದ ವರ್ಷ ಗ್ರಾಮ ವಿಕಾಸ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ₹25 ಲಕ್ಷ ಹಣವನ್ನು ಇದೇ ರೀತಿ ನಕಲಿ ಸಹಿ ಮಾಡಿ ಪಂಚಾಯಿತಿ ಹಣ ದೋಚಲಾಗಿತ್ತು. ಈ ಕುರಿತಾಗಿಯೂ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ದಶಕದಿಂದ ನಂದಿಹಳ್ಳಿ ಗ್ರಾಮ ಪಂಚಾಯಿತಿಗೆ ಹಣ ದುರ್ಬಳಕೆ, ಅವ್ಯವಹಾರಗಳ ಕಳಂಕ ಮೆತ್ತಿಕೊಂಡಿದೆ. ಮೃತರ ಹೆಸರಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ನರೇಗಾ ಯೋಜನೆ ಹಣ ದುರ್ಬಳಕೆ ಮಾಡಿಕೊಂಡಿದ್ದ ಈ ಗ್ರಾ.ಪಂನ ಹಿಂದಿನ ಆಡಳಿತ ಮಂಡಳಿಯ ಏಳು ಸದಸ್ಯರು ಸದಸ್ಯತ್ವ ರದ್ದತಿ ಶಿಕ್ಷೆಗೆ ಗುರಿಯಾಗಿದ್ದರು. ಪಂಚಾಯಿತಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಈಗ ಮತ್ತೊಂದು ಹಣ ದುರ್ಬಳಕೆ ಪ್ರಕರಣದ ಕುರಿತಂತೆ ದೂರು ಸಲ್ಲಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ: </strong>ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಅಭಿವೃದ್ಧಿ ಅಧಿಕಾರಿಯ ಫೋರ್ಜರಿ ಸಹಿಯ ಚೆಕ್ ನೀಡಿ, ಬ್ಯಾಂಕ್ನಲ್ಲಿ ₹1.99 ಲಕ್ಷ ಡ್ರಾ ಮಾಡಿಕೊಂಡಿರುವ ಮತ್ತೊಂದು ಹಣ ದುರ್ಬಳಕೆ ಪ್ರಕರಣ ನಡೆಡಿದೆ.</p>.<p>ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೋಗಿ ಶಾಖೆಯಲ್ಲಿರುವ ನಂದಿಹಳ್ಳಿ ಗ್ರಾಮ ಪಂಚಾಯಿತಿ 14 ಮತ್ತು 15ನೇ ಹಣಕಾಸು ಯೋಜನೆಯ ಖಾತೆಯಿಂದ ಏಪ್ರಿಲ್ 3ರಂದು ₹1.99 ಲಕ್ಷ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಧರ್ಮಸಾಗರ ಶಾಖೆಯ ಕೆ. ಶಂಕ್ರಪ್ಪ ಎಂಬುವವರ ಖಾತೆಗೆ ಜಮೆ ಮಾಡಿ ಹಣ ತೆಗೆಯಲಾಗಿದೆ.</p>.<p>ಹಣಕಾಸು ವಹಿವಾಟು ಪರಿಶೀಲನೆ ವೇಳೆ, ಪಂಚಾಯಿತಿ ಅಧ್ಯಕ್ಷೆ ಶೈನಾಜ್ ಬೀ, ಪಿಡಿಒ ಎಂ. ಪ್ರಕಾಶ್ ಅವರ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಿರುವುದು ಗೊತ್ತಾಗಿದೆ.</p>.<p>ಪಿಡಿಒ ಎಂ. ಪ್ರಕಾಶ್ ಅವರು ಜೂನ್ 24ರಂದು ಪಟ್ಟಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿ, ನಕಲಿ ಸಹಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.</p>.<p>ಕಳೆದ ವರ್ಷ ಗ್ರಾಮ ವಿಕಾಸ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ₹25 ಲಕ್ಷ ಹಣವನ್ನು ಇದೇ ರೀತಿ ನಕಲಿ ಸಹಿ ಮಾಡಿ ಪಂಚಾಯಿತಿ ಹಣ ದೋಚಲಾಗಿತ್ತು. ಈ ಕುರಿತಾಗಿಯೂ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ದಶಕದಿಂದ ನಂದಿಹಳ್ಳಿ ಗ್ರಾಮ ಪಂಚಾಯಿತಿಗೆ ಹಣ ದುರ್ಬಳಕೆ, ಅವ್ಯವಹಾರಗಳ ಕಳಂಕ ಮೆತ್ತಿಕೊಂಡಿದೆ. ಮೃತರ ಹೆಸರಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ನರೇಗಾ ಯೋಜನೆ ಹಣ ದುರ್ಬಳಕೆ ಮಾಡಿಕೊಂಡಿದ್ದ ಈ ಗ್ರಾ.ಪಂನ ಹಿಂದಿನ ಆಡಳಿತ ಮಂಡಳಿಯ ಏಳು ಸದಸ್ಯರು ಸದಸ್ಯತ್ವ ರದ್ದತಿ ಶಿಕ್ಷೆಗೆ ಗುರಿಯಾಗಿದ್ದರು. ಪಂಚಾಯಿತಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಈಗ ಮತ್ತೊಂದು ಹಣ ದುರ್ಬಳಕೆ ಪ್ರಕರಣದ ಕುರಿತಂತೆ ದೂರು ಸಲ್ಲಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>