ಹೊಸಪೇಟೆ (ವಿಜಯನಗರ): ಪತ್ನಿಯ ಶೀಲ ಶಂಕಿಸಿದ ಗಂಡ ಆಕೆಯ ಹೊಟ್ಟೆಗೆ ಕಬ್ಬಿಣದ ಹಾರೆ ತಿವಿದು, ಚಾಕುವಿನಿಂದ ಕುತ್ತಿಗೆ ಕೊಯ್ದು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರದಾಪುರದಲ್ಲಿ ಭಾನುವಾರ ನಡೆದಿದೆ.
ಬಂಗಿ ಲಕ್ಷ್ಮಿ (31) ಮೃತ ಮಹಿಳೆ. ದುಷ್ಕೃತ್ಯ ಎಸಗಿದ ಬಂಗಿ ಮಲ್ಲಪ್ಪನನ್ನು ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೃತ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.