ಬೆಂಗಳೂರಿನ ಉತ್ತರಹಳ್ಳಿ ರಂಗಕಹಳೆ ತಂಡದ 30 ಕ್ಕೂ ಹೆಚ್ಚು ಕಲಾವಿದರಿಂದ ಬೊಮ್ಮನಹಳ್ಳಿ ಕಿಂದರಿ ಜೋಗಿ ನೃತ್ಯ ಪ್ರೇಕ್ಷಕರ ಮನಸೂರೆಗೊಳಿಸಿತು. ಹಾವೇರಿಯ ಶರಣಪ್ಪ ವಡಿಗೇರ ಏರುಧ್ವನಿಯಲ್ಲಿ 'ಎಳ್ಳು ಜೀರಿಗೆ ಬೆಳೆದ ಭೂತಾಯಿ’, ನೆಚ್ಚಿ ಕುಂತಿದೆ ಸುಳ್ಳ, ಯಾರ ಹೊಲ, ಯಾರ ಮನೆಯೋ' , 'ಗಿಲಗಿಲೇರಿ ನಾರಿ, ನಾಗಲೋಕದ ನಾರಿ' ತತ್ವಪದಗಳು ಕೊರೆವ ಚಳಿ ಮರೆಸಿದವು.