<p><strong>ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ):</strong> ಮಲ್ಲಿಗೆ ಮೊಗ್ಗು ದಿಢೀರ್ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಗಾರರು ಇರುವ ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ ಮೊಗ್ಗನ್ನು ಉಚಿತವಾಗಿ ಹಂಚಿದರು.</p><p>ಪ್ರತಿ ವರ್ಷ ಮೊಹರಂ ಹಬ್ಬದ ಮುನ್ನ ರೈತರಿಗೆ ಕೈತುಂಬಾ ಲಾಭ ದೊರೆಯುತ್ತಿತ್ತು, ಈ ಬಾರಿ ಮಾರಾಟ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಟಾವು ಮಾಡಿದ ಮಲ್ಲಿಗೆಯನ್ನು ಉಚಿತವಾಗಿ ಬಸ್ ಸೇರಿದಂತೆ ಈ ರಸ್ತೆಯಲ್ಲಿ ಸಂಚರಿಸಿದ ವಾಹನಗಳ ಪ್ರಯಾಣಿಕರಿಗೆ ಪ್ರತಿಯೊಬ್ಬರಿಗೂ ಅರ್ಧ ಕೆ.ಜಿಯಷ್ಟು ಹಂಚಿದರು. ಮೊಗ್ಗು ಕಿತ್ತ ಕೂಲಿ ಮೊತ್ತದ ನಷ್ಟವನ್ನು ಲೆಕ್ಕಿಸದೇ ಅವರು ಉಚಿತವಾಗಿ ಹಂಚಿದ್ದು, ಪ್ರಯಾಣಿಕರನ್ನು ಸಂತಸ ಪಡಿಸಿದರು.</p><p>ತಾಲ್ಲೂಕಿನ ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ 162 ಜನ ರೈತರು 350 ಎಕರೆ ಪ್ರದೇಶದಲ್ಲಿ ಹಡಗಲಿ ಮಲ್ಲಿಗೆ (ಸುವಾಸನೆ ಮಲ್ಲಿಗೆ), ದುಂಡುಮಲ್ಲಿಗೆ ಬೆಳೆದಿದ್ದಾರೆ. ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಪ್ರತಿ ಕೆ.ಜಿಗೆ ₹350 ರಿಂದ ₹400 ರ ವರೆಗೂ ಉತ್ತಮ ಬೆಲೆ ದೊರೆಯುತ್ತಿತ್ತು. ಈ ಬಾರಿ ಹೊಸಪೇಟೆ ಮತ್ತು ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಕೆ.ಜಿ. ಗೆ ₹100, ಸಂಜೆ ಕೇವಲ ₹60 ರಂತೆ ಮಾರಾಟವಾಗುತ್ತಿದೆ. ರೈತರು ಕೀಳುವ ಮೊಗ್ಗಿಗೆ ಪ್ರತಿ ಕೆ.ಜಿ. ₹100 ಕೂಲಿ ಕೊಡಬೇಕು, ಜತೆಗೆ ಸಾಗಣೆ ವೆಚ್ಚದ ಜತೆಗೆ ಖರೀದಿದಾರರಿಗೆ ಕಮಿಷನ್ ನೀಡಬೇಕು. ಈ ಸಂದರ್ಭದಲ್ಲಿ ಮಾರಾಟ ಮಾಡಿದ ರೈತರೆಲ್ಲಾ ಕೆ.ಜಿ.ಗೆ ₹ 60 ನಷ್ಟವನ್ನು ಭರಿಸಲೇಬೇಕು.</p><p>ಇದರಿಂದಾಗಿ ಮಲ್ಲಿಗೆ ಬೆಳೆದ ಗ್ರಾಮದ ರೈತರು ನಷ್ಟ ಭರಿಸಲಾರದೇ ಪಿಂಜಾರ್ ಹೆಗ್ಡಾಳ್ ಮಾರ್ಗವಾಗಿ ಹೊಸಪೇಟೆ ಮತ್ತು ದಾವಣಗೆರೆ ಕಡೆಗೆ ತೆರಳುವ ಬಸ್ ಪ್ರಯಾಣಿಕರಿಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳಲ್ಲಿ 2 ಕ್ವಿಂಟಾಲ್ನಷ್ಟು ಮಲ್ಲಿಗೆ ಮೊಗ್ಗು ತುಂಬಿ ತುಂಬಿ ಕಳಿಸಿದರು. ಈ ತಿಂಗಳಲ್ಲಿ ನಷ್ಟವಾಗಿದ್ದರೂ ಮುಂದಿನ ತಿಂಗಳು ಶ್ರಾವಣದಲ್ಲಿ ಲಾಭದ ನಿರೀಕ್ಷೆ ಹೊಂದಿದ್ದಾರೆ. ಆದರೆ ಅಷ್ಟೊತ್ತಿಗೆ ಇಳುವರಿ ಕಡಿಮೆ ಆಗುವ ಆತಂಕವೂ ರೈತರಲ್ಲಿದೆ.</p>.<div><blockquote>ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಮಲ್ಲಿಗೆ ಕೈ ಹಿಡಿಯುತ್ತಿತ್ತು, ಈ ಬಾರಿ ಕಾಕಡಾ ಮಾರುಕಟ್ಟೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಹಡಗಲಿ ಮಲ್ಲಿಗೆಗೆ ಬೆಲೆ ಕುಸಿದಿದ್ದು, ರೈತರಿಗೆ ಅಪಾರ ನಷ್ಟವಾಗಿದೆ. </blockquote><span class="attribution">–ಜೆ.ಎಂ.ಪ್ರಜಾಸಿಂಹ ವೀರಸಂಗಯ್ಯ, ಮಲ್ಲಿಗೆ ಬೆಳೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ):</strong> ಮಲ್ಲಿಗೆ ಮೊಗ್ಗು ದಿಢೀರ್ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಗಾರರು ಇರುವ ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ ಮೊಗ್ಗನ್ನು ಉಚಿತವಾಗಿ ಹಂಚಿದರು.</p><p>ಪ್ರತಿ ವರ್ಷ ಮೊಹರಂ ಹಬ್ಬದ ಮುನ್ನ ರೈತರಿಗೆ ಕೈತುಂಬಾ ಲಾಭ ದೊರೆಯುತ್ತಿತ್ತು, ಈ ಬಾರಿ ಮಾರಾಟ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಟಾವು ಮಾಡಿದ ಮಲ್ಲಿಗೆಯನ್ನು ಉಚಿತವಾಗಿ ಬಸ್ ಸೇರಿದಂತೆ ಈ ರಸ್ತೆಯಲ್ಲಿ ಸಂಚರಿಸಿದ ವಾಹನಗಳ ಪ್ರಯಾಣಿಕರಿಗೆ ಪ್ರತಿಯೊಬ್ಬರಿಗೂ ಅರ್ಧ ಕೆ.ಜಿಯಷ್ಟು ಹಂಚಿದರು. ಮೊಗ್ಗು ಕಿತ್ತ ಕೂಲಿ ಮೊತ್ತದ ನಷ್ಟವನ್ನು ಲೆಕ್ಕಿಸದೇ ಅವರು ಉಚಿತವಾಗಿ ಹಂಚಿದ್ದು, ಪ್ರಯಾಣಿಕರನ್ನು ಸಂತಸ ಪಡಿಸಿದರು.</p><p>ತಾಲ್ಲೂಕಿನ ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ 162 ಜನ ರೈತರು 350 ಎಕರೆ ಪ್ರದೇಶದಲ್ಲಿ ಹಡಗಲಿ ಮಲ್ಲಿಗೆ (ಸುವಾಸನೆ ಮಲ್ಲಿಗೆ), ದುಂಡುಮಲ್ಲಿಗೆ ಬೆಳೆದಿದ್ದಾರೆ. ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಪ್ರತಿ ಕೆ.ಜಿಗೆ ₹350 ರಿಂದ ₹400 ರ ವರೆಗೂ ಉತ್ತಮ ಬೆಲೆ ದೊರೆಯುತ್ತಿತ್ತು. ಈ ಬಾರಿ ಹೊಸಪೇಟೆ ಮತ್ತು ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಕೆ.ಜಿ. ಗೆ ₹100, ಸಂಜೆ ಕೇವಲ ₹60 ರಂತೆ ಮಾರಾಟವಾಗುತ್ತಿದೆ. ರೈತರು ಕೀಳುವ ಮೊಗ್ಗಿಗೆ ಪ್ರತಿ ಕೆ.ಜಿ. ₹100 ಕೂಲಿ ಕೊಡಬೇಕು, ಜತೆಗೆ ಸಾಗಣೆ ವೆಚ್ಚದ ಜತೆಗೆ ಖರೀದಿದಾರರಿಗೆ ಕಮಿಷನ್ ನೀಡಬೇಕು. ಈ ಸಂದರ್ಭದಲ್ಲಿ ಮಾರಾಟ ಮಾಡಿದ ರೈತರೆಲ್ಲಾ ಕೆ.ಜಿ.ಗೆ ₹ 60 ನಷ್ಟವನ್ನು ಭರಿಸಲೇಬೇಕು.</p><p>ಇದರಿಂದಾಗಿ ಮಲ್ಲಿಗೆ ಬೆಳೆದ ಗ್ರಾಮದ ರೈತರು ನಷ್ಟ ಭರಿಸಲಾರದೇ ಪಿಂಜಾರ್ ಹೆಗ್ಡಾಳ್ ಮಾರ್ಗವಾಗಿ ಹೊಸಪೇಟೆ ಮತ್ತು ದಾವಣಗೆರೆ ಕಡೆಗೆ ತೆರಳುವ ಬಸ್ ಪ್ರಯಾಣಿಕರಿಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳಲ್ಲಿ 2 ಕ್ವಿಂಟಾಲ್ನಷ್ಟು ಮಲ್ಲಿಗೆ ಮೊಗ್ಗು ತುಂಬಿ ತುಂಬಿ ಕಳಿಸಿದರು. ಈ ತಿಂಗಳಲ್ಲಿ ನಷ್ಟವಾಗಿದ್ದರೂ ಮುಂದಿನ ತಿಂಗಳು ಶ್ರಾವಣದಲ್ಲಿ ಲಾಭದ ನಿರೀಕ್ಷೆ ಹೊಂದಿದ್ದಾರೆ. ಆದರೆ ಅಷ್ಟೊತ್ತಿಗೆ ಇಳುವರಿ ಕಡಿಮೆ ಆಗುವ ಆತಂಕವೂ ರೈತರಲ್ಲಿದೆ.</p>.<div><blockquote>ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಮಲ್ಲಿಗೆ ಕೈ ಹಿಡಿಯುತ್ತಿತ್ತು, ಈ ಬಾರಿ ಕಾಕಡಾ ಮಾರುಕಟ್ಟೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಹಡಗಲಿ ಮಲ್ಲಿಗೆಗೆ ಬೆಲೆ ಕುಸಿದಿದ್ದು, ರೈತರಿಗೆ ಅಪಾರ ನಷ್ಟವಾಗಿದೆ. </blockquote><span class="attribution">–ಜೆ.ಎಂ.ಪ್ರಜಾಸಿಂಹ ವೀರಸಂಗಯ್ಯ, ಮಲ್ಲಿಗೆ ಬೆಳೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>