ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷೆ ಶಕ್ತಿಯಾದರೆ ಬದುಕು ಹಸನು’

Last Updated 22 ಫೆಬ್ರುವರಿ 2021, 15:06 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ಭಾಷೆ ಶಕ್ತಿ ಮಾಡಿಕೊಂಡಾಗ ಬದುಕು ಹಸನಾಗುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಹೇಳಿದರು.

ಇಲ್ಲಿನ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆ.ಎಲ್.ಇ ದತ್ತಿ ನಿಧಿಯ ಲೋಕ ತಾಯಿನುಡಿ ದಿನಾಚರಣೆ, ವಾರದ ಮಾತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪ್ರತಿಯೊಬ್ಬ ಕನ್ನಡಿಗರೂ ಭಾಷಾಭಿಮಾನ, ಭಾಷಾ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಕನ್ನಡವನ್ನು ಅನ್ನದ ಭಾಷೆ, ಬದುಕಿನ ಭಾಷೆಯಾಗಿ ಮಾರ್ಪಡಿಸಿಕೊಳ್ಳಲು ಸಾಧ್ಯ’ ಎಂದರು.

ಪ್ರಾಧ್ಯಾಪಕ ಮಲ್ಲಿಕಾರ್ಜುನ ಮೇಟಿ, ‘ಕನ್ನಡ ಭಾಷೆಯನ್ನು ನಾವು ಕೇವಲ ಗೀಳಾಗಿಸಿಕೊಂಡಿದ್ದೇವೆ. ಆರಾಧನೆ, ನಿರಾಕರಣೆ ಎನ್ನುವ ಮೂಲಕ ಕನ್ನಡವನ್ನು ಕೈ ಬಿಟ್ಟರೆ ಬದುಕು ಬಲು ಕಷ್ಟ.ಕನ್ನಡವನ್ನು ಬಿಟ್ಟರೆ ಏನನ್ನೂ ಸಹ ಸಾಧಿಸಲಾಗುವುದಿಲ್ಲ ಎನ್ನುವ ಹುಸಿ ಪ್ರೀತಿಯನ್ನು ತೋರಿಸುತ್ತಿದ್ದೇವೆ’ ಎಂದರು.

ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಿ. ಪಾಂಡುರಂಗ ಬಾಬು, ಪ್ರಾಧ್ಯಾಪಕರಾದ ಅಶೋಕಕುಮಾರ ರಂಜೇರೆ, ಪಿ. ಮಹಾದೇವಯ್ಯ, ಸಿಂಡಿಕೇಟ್ ಸದಸ್ಯರಾದ ಸಮಿಉಲ್ಲಾ ಖಾನ್, ಪ್ರೊ. ಎಚ್.ಎಸ್. ರಘುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT