ಪಂಚಲಿಂಗೇಶ್ವರ ಗುಹೆ ಸೇರಿದಂತೆ ಗುಡೇಕೋಟೆ ಗ್ರಾಮದ ಪಾಳೆಗಾರರ ನಿರ್ಮಾಣ ಮಾಡಿರುವ ಐತಿಹಾಸಿಕ ಗುಡ್ಡದ ಮೇಲಿನ ಉಗ್ರಾಣ, ತಣ್ಣೀರ ಬಾವಿ, ಹೋಕುಳಿ ಕಲ್ಯಾಣಿ ನೋಡುವುದರ ಜೊತೆಗೆ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳಬಹುದು. ಗ್ರಾಮದ ಹೊರ ವಲಯದಲ್ಲಿರುವ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತುಕೊಂಡಿರುವ ವಿಶಿಷ್ಟವಾದ ವಿಗ್ರಹವನ್ನು ನೋಡಬಹುದು. ಕೂಡ್ಲಿಗಿ, ಬಳ್ಳಾರಿ, ಮೊಳಕಾಲ್ಮೂರು ಕಡೆಯಿಂದ ಗುಡೇಕೋಟೆಗೆ ಬರಬಹುದು. ಬರುವಾಗ ಊಟ, ತಿಂಡಿ ತಂದರೆ ಉತ್ತಮ.