<p>‘ಇದು ಭಾಗ್ಯ, ಇದು ಭಾಗ್ಯವಯ್ಯಾ’ ಎಂದು ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು.</p>.<p>‘ಎಂಥಾ ಭಾಗ್ಯ… ಯಾರಿಗೆ ಭಾಗ್ಯ’ ನನಗೆ ಅಚ್ಚರಿಯಾಯಿತು. </p>.<p>‘ಸಿದ್ದು ಅಂಕಲ್ಲಿಗೆ ಸಿಎಂ ಕುರ್ಚಿ ಭಾಗ್ಯ ಇನ್ನೂ ಮೂರು ವರ್ಷಕ್ಕೆ ಪಕ್ಕಾ ಆಗೈತಿ. ಉಳಿದವರಿಗೂ ಅವರವರ ಕುರ್ಚಿ ಭಾಗ್ಯ ಮುಂದುವರೀತೈತೆ. ಮಂತ್ರಿಮಹೋದಯರ ಅಧಿಕಾರ ಭಾಗ್ಯವೇ ಶ್ರೀಸಾಮಾನ್ಯರ ಸೌಭಾಗ್ಯವಯ್ಯಾ!’ ಬೆಕ್ಕಣ್ಣ ಕಣಿ ನುಡಿಯಿತು.</p>.<p>‘ಅಲ್ಲಲೇ… ದೇವನಹಳ್ಳಿ- ಚನ್ನರಾಯಪಟ್ಟಣದಲ್ಲಿ 1,777 ಎಕರೆ ಭೂಸ್ವಾಧೀನಕ್ಕೆ ಮುಂದಾಗ್ಯಾರೆ. ರೈತರ ಅನ್ನ ಕಸಿದುಕೊಂಡರೆ, ಅವರಿಗೆಲ್ಲಿಯ ಭಾಗ್ಯ’ ಎಂದೆ ಸಿಟ್ಟಿನಿಂದ. </p>.<p>‘ಪಾಟೀಲ ಅಂಕಲ್ಲು ಅವರ ಸ್ವಂತಕ್ಕೆ ಮಾಡಾಕೆ ಹತ್ತಿಲ್ಲ! ಅಷ್ಟ್ ದೊಡ್ ಏರೊಸ್ಪೇಸ್ ಪಾರ್ಕ್ ಮಾಡಿದರೆ ರಾಜ್ಯಕ್ಕೆ ಬಂಡವಾಳ ಬರತೈತೆ… ಕೈಗಾರಿಕಾ ಪ್ರಗತಿ ಆಗತೈತೆ… ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುತಿರುಗಿ ನೋಡತೈತೆ’ ಬೆಕ್ಕಣ್ಣ ಕನಸುಗಣ್ಣಿನಿಂದ ವಿವರಿಸಿತು.</p>.<p>‘ಅದು ಛಲೋ ಫಲವತ್ತಾಗಿರೋ ಭೂಮಿ. ರೈತರು ತರಕಾರಿ, ಹಣ್ಣುಹಂಪಲು, ಹೂವು ಬೆಳೀತಾರೆ ಅಲ್ಲಿ… ಏರೊಸ್ಪೇಸ್ ಬಂಜರು ನೆಲದಾಗೆ ಮಾಡಬೇಕು’.</p>.<p>‘ರೈತರಿಗೆ ಪರಿಹಾರ ಕೊಡ್ತಾರೇಳು’.</p>.<p>‘ಕೋಟಿಗಟ್ಟಲೆ ಬೆಲೆಬಾಳೋ ಜಮೀನಿಗೆ ಬರೇ ಎಂಬತ್ತು ಲಕ್ಷ ಕೊಡ್ತಾರಂತೆ. ಹತ್ತಾರು ಸಲ ಅಲೆದಾಡಿಸಿ ಅರ್ಧಂಬರ್ಧ ಕೊಡತಾರೆ, ಅದ್ರಾಗೂ ಬ್ರೋಕರ್ಗಳಿಗೆ ಲಂಚ ಕೊಡಬೇಕು’ ಎಂದೆ ಬೇಸರದಿಂದ. </p>.<p>‘ಎಲ್ಲಾನೂ ಒಕ್ಕಣ್ಣಿನಿಂದ ನೋಡಬ್ಯಾಡ! ಇಮಾನ ಕಂಪನಿಗಳಿಂದ ಉದ್ಯೋಗಾವಕಾಶ, ಕೈಗಾರಿಕಾ ಪ್ರಗತಿ, ತಾಂತ್ರಿಕ ಅಭಿವೃದ್ಧಿ, ಬಂಡವಾಳದ ಹರಿವು ಹೆಚ್ಚಾಗತೈತಿ’.</p>.<p>‘ರೈತರಿಗೇನು ಭಾಗ್ಯ ಸಿಗತೈತೆ?’</p>.<p>‘ಅವರಿಗೂ ಏರೊಸ್ಪೇಸ್ ಕಂಪನಿಗಳಲ್ಲಿ ಚಪರಾಸಿ ಕೆಲಸ, ಹೌಸ್ಕೀಪಿಂಗ್ ಕೆಲಸ, ಸೆಕ್ಯುರಿಟಿ ಕೆಲಸ ಕೊಡತಾರಲ್ಲ... ಇನ್ನೇನು ಬೇಕು?’</p>.<p>‘ಮಂಗ್ಯಾನಂಥವನೇ... ಹೊಲಕ್ಕೆ ಮಾಲೀಕರಾಗಿರಾಗಿದ್ದವರು ಚಪರಾಸಿ ಆಗಬೇಕನಲೇ? ಫಲವತ್ತಾದ ಭೂಮಿಯನ್ನ ಕಾರ್ಪೊರೇಟ್ ಕುಳಗಳಿಗೆ ಕೊಟ್ಟು, ಮಂತ್ರಿಗಳು ಆಮೇಲೆ ಹೊಟ್ಟಿಗೇನು ತಿಂತಾರಂತೆ?’ ನಾನು ಗುರ್ ಎಂದೆ. ಬೆಕ್ಕಣ್ಣ ಬಾಲ ಮುದುರಿ ಗಪ್ಪಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇದು ಭಾಗ್ಯ, ಇದು ಭಾಗ್ಯವಯ್ಯಾ’ ಎಂದು ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು.</p>.<p>‘ಎಂಥಾ ಭಾಗ್ಯ… ಯಾರಿಗೆ ಭಾಗ್ಯ’ ನನಗೆ ಅಚ್ಚರಿಯಾಯಿತು. </p>.<p>‘ಸಿದ್ದು ಅಂಕಲ್ಲಿಗೆ ಸಿಎಂ ಕುರ್ಚಿ ಭಾಗ್ಯ ಇನ್ನೂ ಮೂರು ವರ್ಷಕ್ಕೆ ಪಕ್ಕಾ ಆಗೈತಿ. ಉಳಿದವರಿಗೂ ಅವರವರ ಕುರ್ಚಿ ಭಾಗ್ಯ ಮುಂದುವರೀತೈತೆ. ಮಂತ್ರಿಮಹೋದಯರ ಅಧಿಕಾರ ಭಾಗ್ಯವೇ ಶ್ರೀಸಾಮಾನ್ಯರ ಸೌಭಾಗ್ಯವಯ್ಯಾ!’ ಬೆಕ್ಕಣ್ಣ ಕಣಿ ನುಡಿಯಿತು.</p>.<p>‘ಅಲ್ಲಲೇ… ದೇವನಹಳ್ಳಿ- ಚನ್ನರಾಯಪಟ್ಟಣದಲ್ಲಿ 1,777 ಎಕರೆ ಭೂಸ್ವಾಧೀನಕ್ಕೆ ಮುಂದಾಗ್ಯಾರೆ. ರೈತರ ಅನ್ನ ಕಸಿದುಕೊಂಡರೆ, ಅವರಿಗೆಲ್ಲಿಯ ಭಾಗ್ಯ’ ಎಂದೆ ಸಿಟ್ಟಿನಿಂದ. </p>.<p>‘ಪಾಟೀಲ ಅಂಕಲ್ಲು ಅವರ ಸ್ವಂತಕ್ಕೆ ಮಾಡಾಕೆ ಹತ್ತಿಲ್ಲ! ಅಷ್ಟ್ ದೊಡ್ ಏರೊಸ್ಪೇಸ್ ಪಾರ್ಕ್ ಮಾಡಿದರೆ ರಾಜ್ಯಕ್ಕೆ ಬಂಡವಾಳ ಬರತೈತೆ… ಕೈಗಾರಿಕಾ ಪ್ರಗತಿ ಆಗತೈತೆ… ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುತಿರುಗಿ ನೋಡತೈತೆ’ ಬೆಕ್ಕಣ್ಣ ಕನಸುಗಣ್ಣಿನಿಂದ ವಿವರಿಸಿತು.</p>.<p>‘ಅದು ಛಲೋ ಫಲವತ್ತಾಗಿರೋ ಭೂಮಿ. ರೈತರು ತರಕಾರಿ, ಹಣ್ಣುಹಂಪಲು, ಹೂವು ಬೆಳೀತಾರೆ ಅಲ್ಲಿ… ಏರೊಸ್ಪೇಸ್ ಬಂಜರು ನೆಲದಾಗೆ ಮಾಡಬೇಕು’.</p>.<p>‘ರೈತರಿಗೆ ಪರಿಹಾರ ಕೊಡ್ತಾರೇಳು’.</p>.<p>‘ಕೋಟಿಗಟ್ಟಲೆ ಬೆಲೆಬಾಳೋ ಜಮೀನಿಗೆ ಬರೇ ಎಂಬತ್ತು ಲಕ್ಷ ಕೊಡ್ತಾರಂತೆ. ಹತ್ತಾರು ಸಲ ಅಲೆದಾಡಿಸಿ ಅರ್ಧಂಬರ್ಧ ಕೊಡತಾರೆ, ಅದ್ರಾಗೂ ಬ್ರೋಕರ್ಗಳಿಗೆ ಲಂಚ ಕೊಡಬೇಕು’ ಎಂದೆ ಬೇಸರದಿಂದ. </p>.<p>‘ಎಲ್ಲಾನೂ ಒಕ್ಕಣ್ಣಿನಿಂದ ನೋಡಬ್ಯಾಡ! ಇಮಾನ ಕಂಪನಿಗಳಿಂದ ಉದ್ಯೋಗಾವಕಾಶ, ಕೈಗಾರಿಕಾ ಪ್ರಗತಿ, ತಾಂತ್ರಿಕ ಅಭಿವೃದ್ಧಿ, ಬಂಡವಾಳದ ಹರಿವು ಹೆಚ್ಚಾಗತೈತಿ’.</p>.<p>‘ರೈತರಿಗೇನು ಭಾಗ್ಯ ಸಿಗತೈತೆ?’</p>.<p>‘ಅವರಿಗೂ ಏರೊಸ್ಪೇಸ್ ಕಂಪನಿಗಳಲ್ಲಿ ಚಪರಾಸಿ ಕೆಲಸ, ಹೌಸ್ಕೀಪಿಂಗ್ ಕೆಲಸ, ಸೆಕ್ಯುರಿಟಿ ಕೆಲಸ ಕೊಡತಾರಲ್ಲ... ಇನ್ನೇನು ಬೇಕು?’</p>.<p>‘ಮಂಗ್ಯಾನಂಥವನೇ... ಹೊಲಕ್ಕೆ ಮಾಲೀಕರಾಗಿರಾಗಿದ್ದವರು ಚಪರಾಸಿ ಆಗಬೇಕನಲೇ? ಫಲವತ್ತಾದ ಭೂಮಿಯನ್ನ ಕಾರ್ಪೊರೇಟ್ ಕುಳಗಳಿಗೆ ಕೊಟ್ಟು, ಮಂತ್ರಿಗಳು ಆಮೇಲೆ ಹೊಟ್ಟಿಗೇನು ತಿಂತಾರಂತೆ?’ ನಾನು ಗುರ್ ಎಂದೆ. ಬೆಕ್ಕಣ್ಣ ಬಾಲ ಮುದುರಿ ಗಪ್ಪಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>