<p><strong>ಅರಸೀಕೆರೆ</strong>: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸಿ ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗುವಂತೆ ಹರಕೆಯನ್ನು ಹೊತ್ತಿದ್ದ ಅಭಿಮಾನಿಯೊಬ್ಬರು 12 ಕಿಮೀ ದೀಡು ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.</p><p>ಹೋಬಳಿಯ ಹಿರೇಮೆಗಳಗೆರೆ ಗ್ರಾಮದ ಜಿ.ಡಿ ಮಲ್ಲೇಶಪ್ಪ (60) ಹರಕೆ ತೀರಿಸಿದ ಅಭಿಮಾನಿ.</p><p>ಹಿರೇಮೆಗಳಗೆರೆ ಗ್ರಾಮದ ಹೃದಯ ಭಾಗದಲ್ಲಿನ ಉಚ್ಚಂಗೆಮ್ಮ ದೇವಿ ದೇವಸ್ಥಾನದಿಂದ ಬೇವಿನಹಳ್ಳಿ ತಾಂಡ, ಯು.ಬೇವಿನಹಳ್ಳಿ ಗ್ರಾಮದ ಮೂಲಕ ಉಚ್ಚಂಗಿದುರ್ಗ ಗ್ರಾಮದ ಉಚ್ಚಂಗೆಮ್ಮ ಪಾದಗಟ್ಟೆ ದೇವಸ್ಥಾನದವರೆಗೆ 12 ಕಿಮೀ ದೀಡು ನಮಸ್ಕಾರ ಹಾಕಿದರು. </p><p>ಬೆಳಿಗ್ಗೆ 8 ಗಂಟೆ ಸುಮಾರಿಗೆ ಗ್ರಾಮಸ್ಥರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿದರೆ, ಸಾರ್ವಜನಿಕರು ಮೋದಿ ಪರ ಘೋಷಣೆ ಕೂಗಿ ಪ್ರೋತ್ಸಾಹಿಸಿದರು. </p><p>'ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಜಿ ಅವರು ಗೆಲುವು ಪಡೆದು ಅವರ ನೇತೃತ್ವದ ಸರ್ಕಾರ ರಚನೆ ಆಗಬೇಕು ಎಂದು ಉಚ್ಚಂಗೆಮ್ಮ ದೇವಿಗೆ ಹರಕೆ ಕಟ್ಟಿಕೊಂಡಿದ್ದೆ. ನನ್ನ ಬೇಡಿಕೆ ಫಲಿಸಿದ್ದರಿಂದ ಹರಕೆ ತೀರಿಸುತ್ತಿರುವೆ' ಎಂದು' ಜಿ.ಡಿ ಮಲ್ಲೇಶಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ</strong>: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸಿ ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗುವಂತೆ ಹರಕೆಯನ್ನು ಹೊತ್ತಿದ್ದ ಅಭಿಮಾನಿಯೊಬ್ಬರು 12 ಕಿಮೀ ದೀಡು ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.</p><p>ಹೋಬಳಿಯ ಹಿರೇಮೆಗಳಗೆರೆ ಗ್ರಾಮದ ಜಿ.ಡಿ ಮಲ್ಲೇಶಪ್ಪ (60) ಹರಕೆ ತೀರಿಸಿದ ಅಭಿಮಾನಿ.</p><p>ಹಿರೇಮೆಗಳಗೆರೆ ಗ್ರಾಮದ ಹೃದಯ ಭಾಗದಲ್ಲಿನ ಉಚ್ಚಂಗೆಮ್ಮ ದೇವಿ ದೇವಸ್ಥಾನದಿಂದ ಬೇವಿನಹಳ್ಳಿ ತಾಂಡ, ಯು.ಬೇವಿನಹಳ್ಳಿ ಗ್ರಾಮದ ಮೂಲಕ ಉಚ್ಚಂಗಿದುರ್ಗ ಗ್ರಾಮದ ಉಚ್ಚಂಗೆಮ್ಮ ಪಾದಗಟ್ಟೆ ದೇವಸ್ಥಾನದವರೆಗೆ 12 ಕಿಮೀ ದೀಡು ನಮಸ್ಕಾರ ಹಾಕಿದರು. </p><p>ಬೆಳಿಗ್ಗೆ 8 ಗಂಟೆ ಸುಮಾರಿಗೆ ಗ್ರಾಮಸ್ಥರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿದರೆ, ಸಾರ್ವಜನಿಕರು ಮೋದಿ ಪರ ಘೋಷಣೆ ಕೂಗಿ ಪ್ರೋತ್ಸಾಹಿಸಿದರು. </p><p>'ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಜಿ ಅವರು ಗೆಲುವು ಪಡೆದು ಅವರ ನೇತೃತ್ವದ ಸರ್ಕಾರ ರಚನೆ ಆಗಬೇಕು ಎಂದು ಉಚ್ಚಂಗೆಮ್ಮ ದೇವಿಗೆ ಹರಕೆ ಕಟ್ಟಿಕೊಂಡಿದ್ದೆ. ನನ್ನ ಬೇಡಿಕೆ ಫಲಿಸಿದ್ದರಿಂದ ಹರಕೆ ತೀರಿಸುತ್ತಿರುವೆ' ಎಂದು' ಜಿ.ಡಿ ಮಲ್ಲೇಶಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>