ಬಹುತೇಕ ವಿದ್ಯಾರ್ಥಿಗಳು ಎನ್ಸಿಸಿ ಎನ್ಎಸ್ಎಸ್ ಸ್ವಯಂಸೇವಕರು ಆಟೋ ಟ್ಯಾಕ್ಸಿ ಚಾಲಕರ ಸಂಘಗಳ ಮುಖಂಡರ ಸಹಿತ ನೂರಾರು ಮಂದಿ ಗಾಂಧಿ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟರು. ಕೇಂದ್ರ ಬಸ್ ನಿಲ್ದಾಣ ಪುನೀತ್ ರಾಜಕುಮಾರ ವೃತ್ತ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ವಿಜಯನಗರ ಕಾಲೇಜು ಮುಂಭಾಗದಿಂದ ಹಾದು ಹೋದ ಜಾಥಾ ಜಿಲ್ಲಾ ಒಳಾಂಗಣ ಕ್ರೀಡಾಂಗಣದವರೆಗೆ ನಡೆಯಿತು.