<p><strong>ಹೊಸಪೇಟೆ:</strong> ‘ಸಂಸತ್ ಕಲಾಪದ ಸಂದರ್ಭದಲ್ಲಿ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಎನ್ಎಚ್ 50 ಮತ್ತು 67ರ ಹಲವು ಪ್ರಸ್ತಾವಗಳಿಗೆ ಒಪ್ಪಿಗೆ ಪಡೆಯಲಾಗಿದೆ’ ಎಂದು ಸಂಸದ ಇ.ತುಕಾರಾಂ ಹೇಳಿದರು.</p>.<p>ಕಮಲಾಪುರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾರಿಗನೂರು, ಜಿಂದಾಲ್, ಕೆಪಿಸಿ, ಬಳ್ಳಾರಿಯ ಮೋತಿ ಫ್ಲೈಓವರ್ಗಳಿಗೆ ಒಪ್ಪಿಗೆ ಸಿಕ್ಕಿದೆ. ಕೂಡ್ಲಿಗಿ ತಾಲ್ಲೂಕಿನ ಕ್ಯಾಸಿನಕೇರಿ, ಕೆಲವು ಸರ್ವಿಸ್ ರಸ್ತೆಗಳು, ಒಳಚರಂಡಿ, ಕಾನಹೊಸಳ್ಳಿಗಳಲ್ಲಿನ ಅಪಘಾತ ವಲಯಗಳಲ್ಲಿ ಹೆದ್ದಾರಿ ಸುಧಾರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದರು.</p>.<p>‘ಹಣಕಾಸಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ <br />ಉಲ್ಲೇಖಿಸಿದ್ದೇನೆ, ಜಿಎಸ್ಟಿ ಪಾಲಿನ ಬಗ್ಗೆ ಕೇಳಿದ್ದೇನೆ. ನನ್ನ ಮಾತಿಗೆ ಕೆಲವೊಂದು ಫಲ ಸಹ ಸಿಕ್ಕಿದೆ. ಜಲಜೀವನ್ ಮಿಷನ್ನಲ್ಲಿ ಉಪಯೋಗ ಪ್ರಮಾಣಪತ್ರ ನೀಡಿದ ಬಳಿಕ ಬಾಕಿ ಇರುವ ₹13,005 ಕೋಟಿ ಬಿಡುಗಡ ಮಾಡುವ ಭರವಸೆ ಸಹ ಸಿಕ್ಕಿದೆ ಎಂದು ಸಂಸದರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ‘ಸಂಸತ್ ಕಲಾಪದ ಸಂದರ್ಭದಲ್ಲಿ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಎನ್ಎಚ್ 50 ಮತ್ತು 67ರ ಹಲವು ಪ್ರಸ್ತಾವಗಳಿಗೆ ಒಪ್ಪಿಗೆ ಪಡೆಯಲಾಗಿದೆ’ ಎಂದು ಸಂಸದ ಇ.ತುಕಾರಾಂ ಹೇಳಿದರು.</p>.<p>ಕಮಲಾಪುರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾರಿಗನೂರು, ಜಿಂದಾಲ್, ಕೆಪಿಸಿ, ಬಳ್ಳಾರಿಯ ಮೋತಿ ಫ್ಲೈಓವರ್ಗಳಿಗೆ ಒಪ್ಪಿಗೆ ಸಿಕ್ಕಿದೆ. ಕೂಡ್ಲಿಗಿ ತಾಲ್ಲೂಕಿನ ಕ್ಯಾಸಿನಕೇರಿ, ಕೆಲವು ಸರ್ವಿಸ್ ರಸ್ತೆಗಳು, ಒಳಚರಂಡಿ, ಕಾನಹೊಸಳ್ಳಿಗಳಲ್ಲಿನ ಅಪಘಾತ ವಲಯಗಳಲ್ಲಿ ಹೆದ್ದಾರಿ ಸುಧಾರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದರು.</p>.<p>‘ಹಣಕಾಸಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ <br />ಉಲ್ಲೇಖಿಸಿದ್ದೇನೆ, ಜಿಎಸ್ಟಿ ಪಾಲಿನ ಬಗ್ಗೆ ಕೇಳಿದ್ದೇನೆ. ನನ್ನ ಮಾತಿಗೆ ಕೆಲವೊಂದು ಫಲ ಸಹ ಸಿಕ್ಕಿದೆ. ಜಲಜೀವನ್ ಮಿಷನ್ನಲ್ಲಿ ಉಪಯೋಗ ಪ್ರಮಾಣಪತ್ರ ನೀಡಿದ ಬಳಿಕ ಬಾಕಿ ಇರುವ ₹13,005 ಕೋಟಿ ಬಿಡುಗಡ ಮಾಡುವ ಭರವಸೆ ಸಹ ಸಿಕ್ಕಿದೆ ಎಂದು ಸಂಸದರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>