<p>ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕಾದೇವಿಯರ (ಗಿರಿಜೆ) ವಿವಾಹ ನಿಶ್ಚಿತಾರ್ಥ ‘ಫಲಪೂಜಾ’ ರೂಪದಲ್ಲಿ ಗುರುವಾರ ಮಧ್ಯರಾತ್ರಿ ಹಂಪಿಯ ಕೋದಂಡರಾಮ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.</p>.<p>ಸಾವಿರಾರು ಭಕ್ತರು ಪಾಲ್ಗೊಂಡಿದ್ದ ಈ ಧಾರ್ಮಿಕ ವಿಧಿವಿಧಾನದಲ್ಲಿ ವರನ ಕಡೆಯಿಂದ ವಿರೂಪಾಕ್ಷ ದೇವಸ್ಥಾನದ ಅರ್ಚಕರು ಹಾಗೂ ವಧುವಿನ ಕಡೆಯಿಂದ ಕೋದಂಡರಾಮ ದೇವಸ್ಥಾನದ ಅರ್ಚಕರು ಪಾಲ್ಗೊಂಡು ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.</p>.<p>ಈ ನಿಶ್ಚಿತಾರ್ಥಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಹಂಪಿಯ ಪುಷ್ಕರಿಣಿಯಲ್ಲಿ ಪಂಪಾಪತಿ–ಗಿರಿಜೆಯರ ತೆಪ್ಪೋತ್ಸವ ನಡೆದಿತ್ತು. ಹಿಂದೂ ಕುಟುಂಬಗಳಲ್ಲಿ ಇರುವ ವಿವಾಹ ನಿಶ್ಚಿತಾರ್ಥ ಕ್ರಮದಲ್ಲೇ ಇಲ್ಲೂ ದೇವರಿಗೆ ನಿಶ್ಚಿತಾರ್ಥವನ್ನು ಹಲವು ಧಾರ್ಮಿಕ ವಿಧಿವಿಧಾನಗಳು, ಹೋಮಗಳ ಮೂಲಕ ನೆರವೇರಿಸಲಾಯಿತು.</p>.<p>ಏ.21ರಂದು ವಿವಾಹ: ಚೈತ್ರ ಮಾಸ ಶುಕ್ಲಪಕ್ಷ ತ್ರಯೋದಶಿಯ ದಿನ ಅಂದರೆ ಮುಂದಿನ ಏಪ್ರಿಲ್ 21ರಂದು ವಿರೂಪಾಕ್ಷ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣ ನಡೆಯಲಿದ್ದು, ಮರುದಿನ ಕಡುವಿನ ಕಾಳಗ ನಡೆಯಲಿದೆ. ವಿವಾಹದ ಎರಡನೇ ದಿನ ಅಂದರೆ ಚೈತ್ರ ಶುದ್ಧ ಪೌರ್ಣಿಮೆಯ ದಿನ (ಏಪ್ರಿಲ್ 23) ನವದಂಪತಿಯ ಮೆರವಣಿಗೆ ರೂಪದಲ್ಲಿ ಜೋಡಿ ರಥೋತ್ಸವ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕಾದೇವಿಯರ (ಗಿರಿಜೆ) ವಿವಾಹ ನಿಶ್ಚಿತಾರ್ಥ ‘ಫಲಪೂಜಾ’ ರೂಪದಲ್ಲಿ ಗುರುವಾರ ಮಧ್ಯರಾತ್ರಿ ಹಂಪಿಯ ಕೋದಂಡರಾಮ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.</p>.<p>ಸಾವಿರಾರು ಭಕ್ತರು ಪಾಲ್ಗೊಂಡಿದ್ದ ಈ ಧಾರ್ಮಿಕ ವಿಧಿವಿಧಾನದಲ್ಲಿ ವರನ ಕಡೆಯಿಂದ ವಿರೂಪಾಕ್ಷ ದೇವಸ್ಥಾನದ ಅರ್ಚಕರು ಹಾಗೂ ವಧುವಿನ ಕಡೆಯಿಂದ ಕೋದಂಡರಾಮ ದೇವಸ್ಥಾನದ ಅರ್ಚಕರು ಪಾಲ್ಗೊಂಡು ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.</p>.<p>ಈ ನಿಶ್ಚಿತಾರ್ಥಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಹಂಪಿಯ ಪುಷ್ಕರಿಣಿಯಲ್ಲಿ ಪಂಪಾಪತಿ–ಗಿರಿಜೆಯರ ತೆಪ್ಪೋತ್ಸವ ನಡೆದಿತ್ತು. ಹಿಂದೂ ಕುಟುಂಬಗಳಲ್ಲಿ ಇರುವ ವಿವಾಹ ನಿಶ್ಚಿತಾರ್ಥ ಕ್ರಮದಲ್ಲೇ ಇಲ್ಲೂ ದೇವರಿಗೆ ನಿಶ್ಚಿತಾರ್ಥವನ್ನು ಹಲವು ಧಾರ್ಮಿಕ ವಿಧಿವಿಧಾನಗಳು, ಹೋಮಗಳ ಮೂಲಕ ನೆರವೇರಿಸಲಾಯಿತು.</p>.<p>ಏ.21ರಂದು ವಿವಾಹ: ಚೈತ್ರ ಮಾಸ ಶುಕ್ಲಪಕ್ಷ ತ್ರಯೋದಶಿಯ ದಿನ ಅಂದರೆ ಮುಂದಿನ ಏಪ್ರಿಲ್ 21ರಂದು ವಿರೂಪಾಕ್ಷ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣ ನಡೆಯಲಿದ್ದು, ಮರುದಿನ ಕಡುವಿನ ಕಾಳಗ ನಡೆಯಲಿದೆ. ವಿವಾಹದ ಎರಡನೇ ದಿನ ಅಂದರೆ ಚೈತ್ರ ಶುದ್ಧ ಪೌರ್ಣಿಮೆಯ ದಿನ (ಏಪ್ರಿಲ್ 23) ನವದಂಪತಿಯ ಮೆರವಣಿಗೆ ರೂಪದಲ್ಲಿ ಜೋಡಿ ರಥೋತ್ಸವ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>