<p><strong>ಹೊಸಪೇಟೆ:</strong> 'ಎಲ್ಲಾ ವೃತ್ತಿಗಳಿಗಿಂತ ವಿಶ್ವ ಮಾನ್ಯ ವೃತ್ತಿ ಎಂದರೆ ಅದುವೇ ಶಿಕ್ಷಣ ವೃತ್ತಿ, ಬೋಧನಾ ವೃತ್ತಿಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವ ಅಗತ್ಯ ಇದೆ’ ಎಂದು ಹಿರಿಯ ಸಮಾಜ ಸೇವಕ ಕೋರಿಶೆಟ್ಟರ್ ಲಿಂಗಪ್ಪ ಹೇಳಿದರು.</p>.<p>ಇಲ್ಲಿನ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ಬಿಬಿಎನ್ ಬಿ.ಇಡಿ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಮತ್ತು ಸಂಕಲ್ಪ ಎಂಬ ವಿಶೇಷ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.</p>.<p>‘ಪಠ್ಯ ಮತ್ತು ಪಠ್ಯೇತರ ವಿಷಯಗಳ ಮೂಲಕ ಉತ್ತಮ ಶಿಕ್ಷಕರನ್ನು ನಿರ್ಮಾಣ ಮಾಡುತ್ತಿರುವ ಈ ಕಾಲೇಜಿನ ಕಾರ್ಯ ಅತ್ಯಂತ ಶ್ಲಾಘನೀಯ’ ಎಂದರು. ಮುಖಂಡ ಕೆ.ಬಿ.ಶ್ರೀನಿವಾಸ್, ಕೆ.ಎಂ.ಪಾರ್ವತಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಗುಡೆಕೋಟೆ ನಾಗರಾಜ ಮಾತನಾಡಿದರು.</p>.<p>ವಿದ್ಯಾರ್ಥಿ ಸಂಘದ ಸಂಚಾಲಕ ಪಿ.ಎಂ.ಸಿದ್ದಲಿಂಗಸ್ವಾಮಿ ವಾರ್ಷಿಕ ವರದಿ ಓದಿದರು. 2023- 24ನೇ ಸಾಲಿನ ಶ್ರೇಣಿ ವಿಜೇತರಿಗೆ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ₹5000 ಬಹುಮಾನ ನೀಡಲಾಯಿತು.</p>.<p>ಆಧ್ಯಾಪಕರಾದ ವಿಶ್ವನಾಥ ಗೌಡ, ಕೆ.ಎಂ.ಮಲ್ಲಿಕಾ, ಶೋಭಾ, ಸತೀಶ್ ಸೂರಿಮಠ. ಇಟಗಿ ಮಲ್ಲಿಕಾರ್ಜುನ, ಬಿದರಕುಂದಿ ಮಲ್ಲಿಕಾರ್ಜುನ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> 'ಎಲ್ಲಾ ವೃತ್ತಿಗಳಿಗಿಂತ ವಿಶ್ವ ಮಾನ್ಯ ವೃತ್ತಿ ಎಂದರೆ ಅದುವೇ ಶಿಕ್ಷಣ ವೃತ್ತಿ, ಬೋಧನಾ ವೃತ್ತಿಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವ ಅಗತ್ಯ ಇದೆ’ ಎಂದು ಹಿರಿಯ ಸಮಾಜ ಸೇವಕ ಕೋರಿಶೆಟ್ಟರ್ ಲಿಂಗಪ್ಪ ಹೇಳಿದರು.</p>.<p>ಇಲ್ಲಿನ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ಬಿಬಿಎನ್ ಬಿ.ಇಡಿ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಮತ್ತು ಸಂಕಲ್ಪ ಎಂಬ ವಿಶೇಷ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.</p>.<p>‘ಪಠ್ಯ ಮತ್ತು ಪಠ್ಯೇತರ ವಿಷಯಗಳ ಮೂಲಕ ಉತ್ತಮ ಶಿಕ್ಷಕರನ್ನು ನಿರ್ಮಾಣ ಮಾಡುತ್ತಿರುವ ಈ ಕಾಲೇಜಿನ ಕಾರ್ಯ ಅತ್ಯಂತ ಶ್ಲಾಘನೀಯ’ ಎಂದರು. ಮುಖಂಡ ಕೆ.ಬಿ.ಶ್ರೀನಿವಾಸ್, ಕೆ.ಎಂ.ಪಾರ್ವತಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಗುಡೆಕೋಟೆ ನಾಗರಾಜ ಮಾತನಾಡಿದರು.</p>.<p>ವಿದ್ಯಾರ್ಥಿ ಸಂಘದ ಸಂಚಾಲಕ ಪಿ.ಎಂ.ಸಿದ್ದಲಿಂಗಸ್ವಾಮಿ ವಾರ್ಷಿಕ ವರದಿ ಓದಿದರು. 2023- 24ನೇ ಸಾಲಿನ ಶ್ರೇಣಿ ವಿಜೇತರಿಗೆ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ₹5000 ಬಹುಮಾನ ನೀಡಲಾಯಿತು.</p>.<p>ಆಧ್ಯಾಪಕರಾದ ವಿಶ್ವನಾಥ ಗೌಡ, ಕೆ.ಎಂ.ಮಲ್ಲಿಕಾ, ಶೋಭಾ, ಸತೀಶ್ ಸೂರಿಮಠ. ಇಟಗಿ ಮಲ್ಲಿಕಾರ್ಜುನ, ಬಿದರಕುಂದಿ ಮಲ್ಲಿಕಾರ್ಜುನ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>