ಹರಪನಹಳ್ಳಿ: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಮೇವು ಮಾರಾಟ ಮಾಡುವ ರೈತರು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ ಜ್ಯೋತಿ ಅವರನ್ನು ಸಂಪರ್ಕಿಸುವಂತೆ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ತಿಳಿಸಿದ್ದಾರೆ.
ಭತ್ತ, ರಾಗಿ ಮೇವು ಇದ್ದು, ಮಾರಾಟ ಮಾಡಲು ಇಚ್ಚಿಸುವ ರೈತರಿಂದ 1 ಟನ್ಗೆ ಸಾಗಣೆ ವೆಚ್ಚ ಸೇರಿ ₹6,000 ದರ ನಿಗಧಿಪಡಿಸಲಾಗಿದೆ. ಆಸಕ್ತರು ಮೊ: 9449027220 ಸಂಪರ್ಕಿಸಿ ಮೇವು ಮಾರಾಟ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.