<p><strong>ಹೊಸಪೇಟೆ (ವಿಜಯನಗರ)</strong>: ಹಂಪಿ ವಿಜಯನಗರ ಬುದ್ಧವಿಹಾರ ನಿರ್ಮಾಣ ಟ್ರಸ್ಟ್ನಿಂದ ಸೋಮವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಇತ್ತೀಚೆಗೆ ನಿಧನರಾದ ಕವಿ ಸಿದ್ಧಲಿಂಗಯ್ಯನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಜಿ. ಕನಕೇಶಮೂರ್ತಿ ಮಾತನಾಡಿ, ‘ಕುವೆಂಪು ನಂತರ ಸಾಹಿತ್ಯ ಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿ, ಯುವಪೀಳಿಗೆಯನ್ನು ನಿದ್ದೆಯಿಂದ ಹೊರಗೆ ತಂದವರು ಸಿದ್ಧಲಿಂಗಯ್ಯನವರು. ಸಿದ್ಧಲಿಂಗಯ್ಯನವರ ಬರಹದಿಂದ ಸಾಹಿತ್ಯದಲ್ಲಿ ದೊಡ್ಡ ಪಲ್ಲಟವಾಯಿತು’ ಎಂದು ಹೇಳಿದರು.</p>.<p>‘ಇಕ್ರಲಾ, ಹೊಡಿರಲಾ ಸೇರಿದಂತೆ ಅವರ ಇತರೆ ಪದ್ಯ, ಕ್ರಾಂತಿಗೀತೆಗಳು ಹೋರಾಟಗಾರರಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ಮೂಡಿಸಿದವು. ಅವರ ಪ್ರತಿಯೊಂದು ಕಾವ್ಯಗಳಲ್ಲಿ ತಳಸಮುದಾಯದವರ ನೋವು ಇಣುಕುತ್ತದೆ. ಹೋರಾಟಕ್ಕೆ ಹುರಿದುಂಬಿಸುತ್ತದೆ’ ಎಂದರು.</p>.<p>ಟ್ರಸ್ಟ್ ಅಧ್ಯಕ್ಷ ಎನ್. ಚಿನ್ನಸ್ವಾಮಿ ಸೋಸಲೆ ಮಾತನಾಡಿ, ‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರಿಂದ ಸಾಮಾಜಿಕ ಕ್ರಾಂತಿಯಾದರೆ, 21ನೇ ಶತಮಾನದಲ್ಲಿ ಅದಕ್ಕೆ ಮುನ್ನುಡಿ ಬರೆದವರು ಡಾ.ಬಿ. ಆರ್. ಅಂಬೇಡ್ಕರ್. ಅಂತಹ ಕ್ರಾಂತಿಯಲ್ಲಿ ಹೊರಹೊಮ್ಮಿದವರ ಪೈಕಿ ಸಿದ್ಧಲಿಂಗಯ್ಯನವರು ಕೂಡ ಒಬ್ಬರು’ ಎಂದು ಹೇಳಿದರು.</p>.<p>‘ಸಿದ್ಧಲಿಂಗಯ್ಯನವರಿಗೆ ಸಿಕ್ಕ ಅವಕಾಶಗಳಿಂದಲೇ ಪರಿಶಿಷ್ಟರ ಕಲ್ಯಾಣಕ್ಕೆ ಶ್ರಮಿಸಿದರು. ಅದರ ಮೂಲಕ ತಳಸಮುದಾಯದವರಲ್ಲಿ ಬದಲಾವಣೆಗೆ ಶ್ರಮಿಸಿದರು’ ಎಂದರು.</p>.<p>ಹಿರಿಯ ಪತ್ರಕರ್ತ ಶಶಿಕಾಂತ ಎಸ್. ಶೆಂಬೆಳ್ಳಿ ಮಾತನಾಡಿ, ‘ಸಿದ್ಧಲಿಂಗಯ್ಯನವರನ್ನು ದಲಿತ ಕವಿ ಎಂದು ಕರೆಯುವುದರ ಮೂಲಕ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ. ಅವರ ಸಾಹಿತ್ಯದಿಂದ ಸಮಾಜದಲ್ಲಿ ದೊಡ್ಡ ಪಲ್ಲಟಗಳಾಗಿವೆ. ಅವರು ಸಮಾಜದ, ಜಗದ ಕವಿ’ ಎಂದು ಹೇಳಿದರು.</p>.<p>ಟ್ರಸ್ಟ್ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ, ಕವಯತ್ರಿ ಅಂಜಲಿ ಬೆಳಗಲ್, ಸಿದ್ಧಲಿಂಗಯ್ಯನವರ ಶಿಷ್ಯೆ ನಾಗವೇಣಿ ಸೋಸಲೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ)</strong>: ಹಂಪಿ ವಿಜಯನಗರ ಬುದ್ಧವಿಹಾರ ನಿರ್ಮಾಣ ಟ್ರಸ್ಟ್ನಿಂದ ಸೋಮವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಇತ್ತೀಚೆಗೆ ನಿಧನರಾದ ಕವಿ ಸಿದ್ಧಲಿಂಗಯ್ಯನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.</p>.<p>ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಜಿ. ಕನಕೇಶಮೂರ್ತಿ ಮಾತನಾಡಿ, ‘ಕುವೆಂಪು ನಂತರ ಸಾಹಿತ್ಯ ಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿ, ಯುವಪೀಳಿಗೆಯನ್ನು ನಿದ್ದೆಯಿಂದ ಹೊರಗೆ ತಂದವರು ಸಿದ್ಧಲಿಂಗಯ್ಯನವರು. ಸಿದ್ಧಲಿಂಗಯ್ಯನವರ ಬರಹದಿಂದ ಸಾಹಿತ್ಯದಲ್ಲಿ ದೊಡ್ಡ ಪಲ್ಲಟವಾಯಿತು’ ಎಂದು ಹೇಳಿದರು.</p>.<p>‘ಇಕ್ರಲಾ, ಹೊಡಿರಲಾ ಸೇರಿದಂತೆ ಅವರ ಇತರೆ ಪದ್ಯ, ಕ್ರಾಂತಿಗೀತೆಗಳು ಹೋರಾಟಗಾರರಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ಮೂಡಿಸಿದವು. ಅವರ ಪ್ರತಿಯೊಂದು ಕಾವ್ಯಗಳಲ್ಲಿ ತಳಸಮುದಾಯದವರ ನೋವು ಇಣುಕುತ್ತದೆ. ಹೋರಾಟಕ್ಕೆ ಹುರಿದುಂಬಿಸುತ್ತದೆ’ ಎಂದರು.</p>.<p>ಟ್ರಸ್ಟ್ ಅಧ್ಯಕ್ಷ ಎನ್. ಚಿನ್ನಸ್ವಾಮಿ ಸೋಸಲೆ ಮಾತನಾಡಿ, ‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರಿಂದ ಸಾಮಾಜಿಕ ಕ್ರಾಂತಿಯಾದರೆ, 21ನೇ ಶತಮಾನದಲ್ಲಿ ಅದಕ್ಕೆ ಮುನ್ನುಡಿ ಬರೆದವರು ಡಾ.ಬಿ. ಆರ್. ಅಂಬೇಡ್ಕರ್. ಅಂತಹ ಕ್ರಾಂತಿಯಲ್ಲಿ ಹೊರಹೊಮ್ಮಿದವರ ಪೈಕಿ ಸಿದ್ಧಲಿಂಗಯ್ಯನವರು ಕೂಡ ಒಬ್ಬರು’ ಎಂದು ಹೇಳಿದರು.</p>.<p>‘ಸಿದ್ಧಲಿಂಗಯ್ಯನವರಿಗೆ ಸಿಕ್ಕ ಅವಕಾಶಗಳಿಂದಲೇ ಪರಿಶಿಷ್ಟರ ಕಲ್ಯಾಣಕ್ಕೆ ಶ್ರಮಿಸಿದರು. ಅದರ ಮೂಲಕ ತಳಸಮುದಾಯದವರಲ್ಲಿ ಬದಲಾವಣೆಗೆ ಶ್ರಮಿಸಿದರು’ ಎಂದರು.</p>.<p>ಹಿರಿಯ ಪತ್ರಕರ್ತ ಶಶಿಕಾಂತ ಎಸ್. ಶೆಂಬೆಳ್ಳಿ ಮಾತನಾಡಿ, ‘ಸಿದ್ಧಲಿಂಗಯ್ಯನವರನ್ನು ದಲಿತ ಕವಿ ಎಂದು ಕರೆಯುವುದರ ಮೂಲಕ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ. ಅವರ ಸಾಹಿತ್ಯದಿಂದ ಸಮಾಜದಲ್ಲಿ ದೊಡ್ಡ ಪಲ್ಲಟಗಳಾಗಿವೆ. ಅವರು ಸಮಾಜದ, ಜಗದ ಕವಿ’ ಎಂದು ಹೇಳಿದರು.</p>.<p>ಟ್ರಸ್ಟ್ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ, ಕವಯತ್ರಿ ಅಂಜಲಿ ಬೆಳಗಲ್, ಸಿದ್ಧಲಿಂಗಯ್ಯನವರ ಶಿಷ್ಯೆ ನಾಗವೇಣಿ ಸೋಸಲೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>