ವಾಜಪೇಯಿ ಉದ್ಯಾನದಲ್ಲಿ ಜಿಂಕೆ ವನ, ಹುಲಿ ಹಾಗೂ ಸಿಂಹ ಸಫಾರಿ ಮತ್ತು ಮೃಗಾಲಯ ಹೀಗೆ ಮೂರು ವಲಯಗಳಿವೆ. ಆದರೆ, ಜಿಂಕೆ ವನದ ಮೇಲೆ ಚಿರತೆಗಳ ಕೆಂಗಣ್ಣು ಬಿದ್ದಿದ್ದು ಮೇಲಿಂದ ಮೇಲೆ ಅಲ್ಲಿ ದಾಳಿ ನಡೆಸಿ, ಬೇಟೆಯಾಡುತ್ತಿವೆ. ಜಿಂಕೆ, ಕೃಷ್ಣಮೃಗ ಹಾಗೂ ಹೈನಾಗಳಿದ್ದು, ಸತತ ಚಿರತೆ ದಾಳಿಗೆ ಅವುಗಳಲ್ಲಿ ಭಯ ಮೂಡಿದೆ. ಚಿರತೆ ದಾಳಿ ನಿಯಂತ್ರಿಸಲು ಉದ್ಯಾನದಿಂದ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.