<p><strong>ಮರಿಯಮ್ಮನಹಳ್ಳಿ:</strong> ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ನ ಅವಘಡದಿಂದಾಗಿ ಹಿನ್ನೀರು ಬಳಸಿಕೊಂಡು ನಿರ್ಮಿಸಿದ ಏತನೀರಾವರಿ ಯೋಜನೆಯ ನೀರನ್ನೇ ನಂಬಿದ ನೂರಾರು ರೈತರಲ್ಲಿ ಈಗ ಆತಂಕ ಮನೆ ಮಾಡಿದೆ.</p>.<p>ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಹರಿದು ಹೋಗುತ್ತಿರುವುದರಿಂದ, ವ್ಯಾಸನಕೆರೆ, ಡಣಾಯಕನಕೆರೆ ಹಾಗೂ ನಂದಿಬಂಡಿ ಏತನೀರಾವರಿ ಯೋಜನೆಯ ವ್ಯಾಪ್ತಿಯ ರೈತರು ಚಿಂತೆಗೀಡಾಗಿದ್ದಾರೆ.</p>.<p>ತುಂಗಭದ್ರಾ ಅಣೆಕಟ್ಟೆಯ ನೀರಿನ ಮಟ್ಟ 1,620 ಅಡಿ ತಲುಪಿದಾಗ ಈ ಏತ ನೀರಾವರಿ ಯೋಜನೆಗಳ ಬಾವಿಗೆ ನೀರು ಹರಿದು ಬರುತ್ತದೆ. ಏಳೆಂಟು ತಿಂಗಳು ಜಮೀನಿಗೆ ನೀರು ಹರಿಯುವುದರಿಂದ ರೈತರು ಎರಡು ಬೆಳೆ ಬೆಳೆಯುತ್ತಾರೆ.</p>.<p>ಆದರೆ ಕ್ರಸ್ಟ್ಗೇಟ್ ದುರಸ್ತಿ ಮಾಡಲು ಸದ್ಯ 20 ಅಡಿಯಷ್ಟು ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಈ ಯೋಜನೆಯನ್ನೇ ನಂಬಿದ ರೈತರು ಆತಂಕಗೊಂಡಿದ್ದಾರೆ. ಜೊತೆಗೆ ಈ ಬಾರಿ ಮಳೆಯೂ ಸರಿಯಾಗಿ ಬಾರದೆ ಕೈಕೊಟ್ಟಿರುವುದುರಿಂದ ಅವರ ಆತಂಕ ಮತ್ತಷ್ಟು ಹೆಚ್ಚಾಗಿದೆ.</p>.<p>ಕಳೆದ ವರ್ಷ ಜಲಾಶಯ ತುಂಬಿರದ ಕಾರಣದ ಎರಡ್ಮೂರು ತಿಂಗಳು ಮಾತ್ರ ಜಮೀನುಗಳಿಗೆ ನೀರು ಹರಿದಿತ್ತು. ಈ ಬಾರಿ ಬೇಗನೆ ತುಂಬಿದ್ದರಿಂದ ನೀರು ಹರಿಸಲು ಆರಂಭಿಸಲಾಗಿತ್ತು. ರೈತರು ಸಂತಸದಿಂದಲೇ ಭತ್ತ ನಾಟಿ ಸೇರಿದಂತೆ ಮುಸಕಿನ ಜೋಳ, ಕಬ್ಬು ಶೇಂಗಾ, ಅಲಸಂದಿ ಬಿತ್ತನೆಯಲ್ಲಿ ತೊಡಗಿದ್ದರು.</p>.<p>ಆದರೆ ವಾರದೊಳಗೆ ಜಲಾಶಯದ ನೀರಿನ ಮಟ್ಟ ಕಡಿಯಾಗುವುದರಿಂದ ಯೋಜನೆಗೆ ನೀರು ಹರಿದು ಬರುವುದು ನಿಲ್ಲುತ್ತದೆ. ಇದರಿಂದ ರೈತರು ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ ಎನ್ನುತ್ತಾರೆ ವ್ಯಾಸನಕೆರೆ ರೈತರಾದ ಹುಗ್ಗಿ ಬಸವರಾಜ ಮತ್ತು ಅಯ್ಯನಹಳ್ಳಿಯ ಮಾಬುಸಾಬು.</p>.<p>ವ್ಯಾಸನಕೆರೆ ಏತ ನೀರಾವರಿ ಯೋಜನೆಯ ಮೊದಲನೆ ಹಾಗೂ ಎರಡನೇ ಹಂತ ಸುಮಾರು 3 ಸಾವಿರ ಎಕರೆಗೆ ನೀರುಣಿಸಿದರೆ, ಏತ ನೀರಾವರಿ ಮೂಲಕ ಡಣಾಯಕನಕೆರೆಗೆ ನೀರು ತುಂಬಿಸಲಾಗುತ್ತಿದ್ದು, ಸುಮಾರು 2 ಸಾವಿರ ಎಕರೆಗೂ ಹೆಚ್ಚು ಜಮೀನಿಗೆ ಈ ನೀರು ಸಿಗುತ್ತದೆ.</p>.<p>ಬರಿದಾಗಿದ್ದ ಕೆರೆಯಲ್ಲಿ ಈ ಬಾರಿ ಸಾಕಷ್ಟು ನೀರು ಸಂಗ್ರಹವಾಗಲಿದೆ ಎಂದು ನಂಬಿದ್ದ ಆಯಕಟ್ಟಿನ ಪ್ರದೇಶದ ರೈತರಲ್ಲಿ ಸಂತಸ ಹೆಚ್ಚಾಗಿತ್ತು. ಆದರೆ ಈ ಅವಘಡದಿಂದಾಗಿ ಮುಂದೆ ಕೆರೆಗೆ ನೀರು ಹರಿದು ಬರುವುದು ಅನುಮಾನ ಮೂಡಿಸಿದೆ.</p>.<p>ಜಿಲ್ಲೆಯ ಎರಡು ಉಪವಿಭಾಗಗಳಲ್ಲಿ ಬರುವ 30ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ವ್ಯಾಪ್ತಿಯ ರೈತರಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು.</p>.<div><blockquote>ಭತ್ತ ನಾಟಿ ಮಾಡಿದ್ದೇವೆ. ಆದರೆ ಈ ಅವಾಂತರದಿಂದಾಗಿ ನೀರಿನ ಮಟ್ಟ ಕಡಿಮೆಯಾಗುವದರಿಂದ ನೀರು ಹರಿದು ಬರುವ ಬಗ್ಗೆ ಅನುಮಾನವಿದೆ.</blockquote><span class="attribution">ಹುಗ್ಗಿ ಬಸವರಾಜ, ವೆಂಕಟಾಪುರ ಗ್ರಾಮದ ರೈತ</span></div>.<div><blockquote>ಈ ಏತ ನೀರಾವರಿ ಯೋಜನೆಯನ್ನೇ ನಂಬಿ ಬಿತ್ತಿಬೆಳೆದ ವ್ಯಾಪ್ತಿಯ ನೂರಾರು ರೈತರಲ್ಲಿ ಈಗಾಗಲೇ ಆತಂಕ ಮೂಡಿದೆ ಬೇಗ ಗೇಟ್ ಅಳವಡಿಸಿ ನೀರು ತುಂಬಲಿ.</blockquote><span class="attribution"> ಅಯ್ಯನಹಳ್ಳಿ ಮಾಬು ಸಾಹೇಬ್, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮರಿಯಮ್ಮನಹಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರಿಯಮ್ಮನಹಳ್ಳಿ:</strong> ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ನ ಅವಘಡದಿಂದಾಗಿ ಹಿನ್ನೀರು ಬಳಸಿಕೊಂಡು ನಿರ್ಮಿಸಿದ ಏತನೀರಾವರಿ ಯೋಜನೆಯ ನೀರನ್ನೇ ನಂಬಿದ ನೂರಾರು ರೈತರಲ್ಲಿ ಈಗ ಆತಂಕ ಮನೆ ಮಾಡಿದೆ.</p>.<p>ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಹರಿದು ಹೋಗುತ್ತಿರುವುದರಿಂದ, ವ್ಯಾಸನಕೆರೆ, ಡಣಾಯಕನಕೆರೆ ಹಾಗೂ ನಂದಿಬಂಡಿ ಏತನೀರಾವರಿ ಯೋಜನೆಯ ವ್ಯಾಪ್ತಿಯ ರೈತರು ಚಿಂತೆಗೀಡಾಗಿದ್ದಾರೆ.</p>.<p>ತುಂಗಭದ್ರಾ ಅಣೆಕಟ್ಟೆಯ ನೀರಿನ ಮಟ್ಟ 1,620 ಅಡಿ ತಲುಪಿದಾಗ ಈ ಏತ ನೀರಾವರಿ ಯೋಜನೆಗಳ ಬಾವಿಗೆ ನೀರು ಹರಿದು ಬರುತ್ತದೆ. ಏಳೆಂಟು ತಿಂಗಳು ಜಮೀನಿಗೆ ನೀರು ಹರಿಯುವುದರಿಂದ ರೈತರು ಎರಡು ಬೆಳೆ ಬೆಳೆಯುತ್ತಾರೆ.</p>.<p>ಆದರೆ ಕ್ರಸ್ಟ್ಗೇಟ್ ದುರಸ್ತಿ ಮಾಡಲು ಸದ್ಯ 20 ಅಡಿಯಷ್ಟು ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಈ ಯೋಜನೆಯನ್ನೇ ನಂಬಿದ ರೈತರು ಆತಂಕಗೊಂಡಿದ್ದಾರೆ. ಜೊತೆಗೆ ಈ ಬಾರಿ ಮಳೆಯೂ ಸರಿಯಾಗಿ ಬಾರದೆ ಕೈಕೊಟ್ಟಿರುವುದುರಿಂದ ಅವರ ಆತಂಕ ಮತ್ತಷ್ಟು ಹೆಚ್ಚಾಗಿದೆ.</p>.<p>ಕಳೆದ ವರ್ಷ ಜಲಾಶಯ ತುಂಬಿರದ ಕಾರಣದ ಎರಡ್ಮೂರು ತಿಂಗಳು ಮಾತ್ರ ಜಮೀನುಗಳಿಗೆ ನೀರು ಹರಿದಿತ್ತು. ಈ ಬಾರಿ ಬೇಗನೆ ತುಂಬಿದ್ದರಿಂದ ನೀರು ಹರಿಸಲು ಆರಂಭಿಸಲಾಗಿತ್ತು. ರೈತರು ಸಂತಸದಿಂದಲೇ ಭತ್ತ ನಾಟಿ ಸೇರಿದಂತೆ ಮುಸಕಿನ ಜೋಳ, ಕಬ್ಬು ಶೇಂಗಾ, ಅಲಸಂದಿ ಬಿತ್ತನೆಯಲ್ಲಿ ತೊಡಗಿದ್ದರು.</p>.<p>ಆದರೆ ವಾರದೊಳಗೆ ಜಲಾಶಯದ ನೀರಿನ ಮಟ್ಟ ಕಡಿಯಾಗುವುದರಿಂದ ಯೋಜನೆಗೆ ನೀರು ಹರಿದು ಬರುವುದು ನಿಲ್ಲುತ್ತದೆ. ಇದರಿಂದ ರೈತರು ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ ಎನ್ನುತ್ತಾರೆ ವ್ಯಾಸನಕೆರೆ ರೈತರಾದ ಹುಗ್ಗಿ ಬಸವರಾಜ ಮತ್ತು ಅಯ್ಯನಹಳ್ಳಿಯ ಮಾಬುಸಾಬು.</p>.<p>ವ್ಯಾಸನಕೆರೆ ಏತ ನೀರಾವರಿ ಯೋಜನೆಯ ಮೊದಲನೆ ಹಾಗೂ ಎರಡನೇ ಹಂತ ಸುಮಾರು 3 ಸಾವಿರ ಎಕರೆಗೆ ನೀರುಣಿಸಿದರೆ, ಏತ ನೀರಾವರಿ ಮೂಲಕ ಡಣಾಯಕನಕೆರೆಗೆ ನೀರು ತುಂಬಿಸಲಾಗುತ್ತಿದ್ದು, ಸುಮಾರು 2 ಸಾವಿರ ಎಕರೆಗೂ ಹೆಚ್ಚು ಜಮೀನಿಗೆ ಈ ನೀರು ಸಿಗುತ್ತದೆ.</p>.<p>ಬರಿದಾಗಿದ್ದ ಕೆರೆಯಲ್ಲಿ ಈ ಬಾರಿ ಸಾಕಷ್ಟು ನೀರು ಸಂಗ್ರಹವಾಗಲಿದೆ ಎಂದು ನಂಬಿದ್ದ ಆಯಕಟ್ಟಿನ ಪ್ರದೇಶದ ರೈತರಲ್ಲಿ ಸಂತಸ ಹೆಚ್ಚಾಗಿತ್ತು. ಆದರೆ ಈ ಅವಘಡದಿಂದಾಗಿ ಮುಂದೆ ಕೆರೆಗೆ ನೀರು ಹರಿದು ಬರುವುದು ಅನುಮಾನ ಮೂಡಿಸಿದೆ.</p>.<p>ಜಿಲ್ಲೆಯ ಎರಡು ಉಪವಿಭಾಗಗಳಲ್ಲಿ ಬರುವ 30ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ವ್ಯಾಪ್ತಿಯ ರೈತರಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು.</p>.<div><blockquote>ಭತ್ತ ನಾಟಿ ಮಾಡಿದ್ದೇವೆ. ಆದರೆ ಈ ಅವಾಂತರದಿಂದಾಗಿ ನೀರಿನ ಮಟ್ಟ ಕಡಿಮೆಯಾಗುವದರಿಂದ ನೀರು ಹರಿದು ಬರುವ ಬಗ್ಗೆ ಅನುಮಾನವಿದೆ.</blockquote><span class="attribution">ಹುಗ್ಗಿ ಬಸವರಾಜ, ವೆಂಕಟಾಪುರ ಗ್ರಾಮದ ರೈತ</span></div>.<div><blockquote>ಈ ಏತ ನೀರಾವರಿ ಯೋಜನೆಯನ್ನೇ ನಂಬಿ ಬಿತ್ತಿಬೆಳೆದ ವ್ಯಾಪ್ತಿಯ ನೂರಾರು ರೈತರಲ್ಲಿ ಈಗಾಗಲೇ ಆತಂಕ ಮೂಡಿದೆ ಬೇಗ ಗೇಟ್ ಅಳವಡಿಸಿ ನೀರು ತುಂಬಲಿ.</blockquote><span class="attribution"> ಅಯ್ಯನಹಳ್ಳಿ ಮಾಬು ಸಾಹೇಬ್, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮರಿಯಮ್ಮನಹಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>