<p><strong>ಹೊಸಪೇಟೆ (ವಿಜಯನಗರ):</strong> ‘ಈಚಿನ ದಿನಗಳಲ್ಲಿ ಯುವಜನತೆ ಹೃದಯಾಘಾತಕ್ಕೆ ಒಳಗಾಗಿ ಸಾಯುವ ಪ್ರಸಂಗ ಹೆಚ್ಚಾಗುತ್ತಿದ್ದು, ನಗರದಲ್ಲಿ ಹೃದಯ ಚಿಕಿತ್ಸೆಯತ್ತ ರೋಟರಿ ಹೆಚ್ಚಿನ ಗಮನ ಹರಿಸಲಿದೆ, ವೊಕಾರ್ಡ್ ಅಥವಾ ನಾರಾಯಣ ಹೃದಯಾಲಯದ ತಜ್ಞರನ್ನು ಕರೆಸಿ ತಪಾಸಣೆ ನಡೆಸಲು ಪ್ರಯತ್ನ ಮಾಡಲಿದ್ದೇವೆ’ ಎಂದು ನೂತನ ಅಧ್ಯಕ್ಷ ಕೆ.ಎಸ್.ದಾದಾಪೀರ್ ಹೇಳಿದರು.</p>.<p>ಶನಿವಾರ ಸಂಜೆ ಇಲ್ಲಿನ ಮಲ್ಲಿಗೆ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವ ರೋಟರಿ ಪದಗ್ರಹಣ ಸಮಾರಂಭದ ಪ್ರಯುಕ್ತ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.</p>.<p>‘ತಜ್ಞ ವೈದ್ಯರು ಸಿಗದ ಕಾರಣಕ್ಕೆ ಈ ಯೋಜನೆ ವಿಳಂಬವಾಗಿತ್ತು, ಆದರೆ ಇದೀಗ ಪರಿಸ್ಥಿತಿ ಬಿಗಡಾಯಿಸುತ್ತಿದೆ, ಆ ಯೋಜನೆಯನ್ನು ತ್ವರಿತಗೊಳಿಸಲು ಪ್ರಯತ್ನಿಸಲಿದ್ದೇವೆ’ ಎಂದರು.</p>.<p>‘ಗರ್ಭಕಂಠ ಕ್ಯಾನ್ಸರ್ ನಿಯಂತ್ರಿಸುವ ಸಲುವಾಗಿ 20 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಎಚ್ಪಿವಿ ಲಸಿಕೆ ನೀಡುವ ಮತ್ತು ಅದರ ಕುರಿತಾಗಿ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಹೆಚ್ಚಿಸಲಾಗುವುದು, 1 ಲಕ್ಷ ಬೀಜದ ಉಂಡೆ ತಯಾರಿಸಿ ಅರಣ್ಯ ಮತ್ತು ಗಣಿ ಪ್ರದೇಶಗಳಲ್ಲಿ ಎಸೆಯಲಾಗುವುದು’ ಎಂದರು.</p>.<p>ನೂತನ ಕಾರ್ಯದರ್ಶಿ ಎಂ.ಡಿ.ಕೇದಾರೇಶ್ವರ ಮಾತನಾಡಿ, ‘ಸೈಯದ್ ನಾಜಿಮುದ್ದೀನ್ ಅವರು ರೋಟರಿ ಪದಗ್ರಹಣ ಹಾಗೂ ಜಯಶ್ರೀ ಸಾಗರ್ ಇನ್ನರ್ವೀಲ್ ಪದಗ್ರಹಣ ನೆರವೇರಿಸಲಿದ್ದಾರೆ. ನೈಮಿಷಾ ಅವರು ಇನ್ನರ್ವೀಲ್ ನೂತನ ಅಧ್ಯಕ್ಷೆ ಹಾಗೂ ಆರತಿ ರಾಜಾಪುರ ಅವರು ಕಾರ್ಯದರ್ಶಿಯಾಗಿದ್ದಾರೆ’ ಎಂದರು.</p>.<p>ರೋಟರಿಯ ಪ್ರಮುಖರಾದ ಅಬ್ದುಲ್ ಹಕ್ ಸೇಠ್, ಸತ್ಯನಾರಾಯಣ, ವಿಜಯ್ ಸಿಂದಗಿ, ದೀಪಕ್ ಕೊಳಗದ್, ಅಶ್ವಿನ್ ಕೋತಂಬರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ‘ಈಚಿನ ದಿನಗಳಲ್ಲಿ ಯುವಜನತೆ ಹೃದಯಾಘಾತಕ್ಕೆ ಒಳಗಾಗಿ ಸಾಯುವ ಪ್ರಸಂಗ ಹೆಚ್ಚಾಗುತ್ತಿದ್ದು, ನಗರದಲ್ಲಿ ಹೃದಯ ಚಿಕಿತ್ಸೆಯತ್ತ ರೋಟರಿ ಹೆಚ್ಚಿನ ಗಮನ ಹರಿಸಲಿದೆ, ವೊಕಾರ್ಡ್ ಅಥವಾ ನಾರಾಯಣ ಹೃದಯಾಲಯದ ತಜ್ಞರನ್ನು ಕರೆಸಿ ತಪಾಸಣೆ ನಡೆಸಲು ಪ್ರಯತ್ನ ಮಾಡಲಿದ್ದೇವೆ’ ಎಂದು ನೂತನ ಅಧ್ಯಕ್ಷ ಕೆ.ಎಸ್.ದಾದಾಪೀರ್ ಹೇಳಿದರು.</p>.<p>ಶನಿವಾರ ಸಂಜೆ ಇಲ್ಲಿನ ಮಲ್ಲಿಗೆ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವ ರೋಟರಿ ಪದಗ್ರಹಣ ಸಮಾರಂಭದ ಪ್ರಯುಕ್ತ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.</p>.<p>‘ತಜ್ಞ ವೈದ್ಯರು ಸಿಗದ ಕಾರಣಕ್ಕೆ ಈ ಯೋಜನೆ ವಿಳಂಬವಾಗಿತ್ತು, ಆದರೆ ಇದೀಗ ಪರಿಸ್ಥಿತಿ ಬಿಗಡಾಯಿಸುತ್ತಿದೆ, ಆ ಯೋಜನೆಯನ್ನು ತ್ವರಿತಗೊಳಿಸಲು ಪ್ರಯತ್ನಿಸಲಿದ್ದೇವೆ’ ಎಂದರು.</p>.<p>‘ಗರ್ಭಕಂಠ ಕ್ಯಾನ್ಸರ್ ನಿಯಂತ್ರಿಸುವ ಸಲುವಾಗಿ 20 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಎಚ್ಪಿವಿ ಲಸಿಕೆ ನೀಡುವ ಮತ್ತು ಅದರ ಕುರಿತಾಗಿ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಹೆಚ್ಚಿಸಲಾಗುವುದು, 1 ಲಕ್ಷ ಬೀಜದ ಉಂಡೆ ತಯಾರಿಸಿ ಅರಣ್ಯ ಮತ್ತು ಗಣಿ ಪ್ರದೇಶಗಳಲ್ಲಿ ಎಸೆಯಲಾಗುವುದು’ ಎಂದರು.</p>.<p>ನೂತನ ಕಾರ್ಯದರ್ಶಿ ಎಂ.ಡಿ.ಕೇದಾರೇಶ್ವರ ಮಾತನಾಡಿ, ‘ಸೈಯದ್ ನಾಜಿಮುದ್ದೀನ್ ಅವರು ರೋಟರಿ ಪದಗ್ರಹಣ ಹಾಗೂ ಜಯಶ್ರೀ ಸಾಗರ್ ಇನ್ನರ್ವೀಲ್ ಪದಗ್ರಹಣ ನೆರವೇರಿಸಲಿದ್ದಾರೆ. ನೈಮಿಷಾ ಅವರು ಇನ್ನರ್ವೀಲ್ ನೂತನ ಅಧ್ಯಕ್ಷೆ ಹಾಗೂ ಆರತಿ ರಾಜಾಪುರ ಅವರು ಕಾರ್ಯದರ್ಶಿಯಾಗಿದ್ದಾರೆ’ ಎಂದರು.</p>.<p>ರೋಟರಿಯ ಪ್ರಮುಖರಾದ ಅಬ್ದುಲ್ ಹಕ್ ಸೇಠ್, ಸತ್ಯನಾರಾಯಣ, ವಿಜಯ್ ಸಿಂದಗಿ, ದೀಪಕ್ ಕೊಳಗದ್, ಅಶ್ವಿನ್ ಕೋತಂಬರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>