<p><strong>ಹೊಸಪೇಟೆ:</strong> ನಗರದಲ್ಲಿ 1,108 ವಾರಗಳಿಂದ ಸಾಮೂಹಿಕ ವಿಷ್ಣು ಸಹಸ್ರಮಾನ ಪಠಣವನ್ನು ಸಂಘಟಿಸುತ್ತಿರುವ ವಿಷ್ಣು ಸೇವಾ ಸಂಸ್ಥೆಯ 21ನೇ ವಾರ್ಷಿಕೋತ್ಸವ ಜಂಬುನಾಥ ರಸ್ತೆಯ ಶ್ರೀಕೃಷ್ಣ ಮಠದಲ್ಲಿ ಭಾನುವಾರ ನಡೆಯಿತು.</p>.<p>ವಿಷ್ಣು ಸಹಸ್ರನಾಮ ಹೋಮ, ಸಾಮೂಹಿಕ ವಿಷ್ಣು ಸಹಸ್ರನಾಮ ನಡೆದ ಬಳಿಕ ಸಭಾ ಕಾರ್ಯಕ್ರಮದಲ್ಲಿ 16 ಸಾವಿರ ಭಾಮಿನಿ ಷಟ್ಪದಿಯಲ್ಲಿ ‘ಶ್ರೀಕೃಷ್ಣ ಲೀಲಾಮೃತಂ’ ಮಹಾಕಾವ್ಯ ರಚಿಸಿದ ನಗರದ ಹಿರಿಯ ಕವಿ ರಂಗೋಪಂತ ನಾಗರಾಜರಾಯರು ತಮ್ಮ ಸಾಹಿತ್ಯ ಸೇವೆಯ ಕುರಿತು ಮಾಹಿತಿ ನೀಡಿದರು.</p>.<p>ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಹಾಗೂ ಮಕ್ಕಳಲ್ಲಿ, ಕುಟುಂಬದಲ್ಲಿ ಉತ್ತಮ ಸಂಸ್ಕಾರ ಮೂಡಿಸುವಲ್ಲಿ ವಿಷ್ಣು ಸೇವಾ ಸಂಸ್ಥೆ ಮಹತ್ವದ ಕೆಲಸ ಮಾಡುತ್ತಿದೆ ಎಂದರು.</p>.<p>ಸಂಸ್ಥೆಯ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಮಹಾದಾನಿಗಳನ್ನು ಸನ್ಮಾನಿಸಲಾಯಿತು. ಲೀಲಾ ಕಲಾಭೂಮಿ ಮಕ್ಕಳ ಭಗವದ್ಗೀತೆ ಪ್ರವಚನ, ಅನಘಾ, ಸಿಂಚನಾ ಕರ್ಣಂ ಅವರ ಭರತನಾಟ್ಯ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.</p>.<p>ಸಂಸ್ಥೆಯ ಗೌರವಾಧ್ಯಕ್ಷ ಯು.ನರಸಿಂಹಮೂರ್ತಿ, ಅಧ್ಯಕ್ಷ ಪ್ರೊ.ಯು.ರಾಘವೇಂದ್ರ ರಾವ್, ಕಾರ್ಯದರ್ಶಿ ವಾದಿರಾಜ ಭಟ್, ಉಪಾಧ್ಯಕ್ಷ ಗುರುರಾಜ ಭಟ್, ನರಸಿಂಹಾಚಾರ್, ಶ್ರೀಪತಿ, ರಾಘವೇಂದ್ರ ಉಪಾಧ್ಯಾಯ, ವಾಣಿ ಆಚಾರ್, ಸುಧಾ ವಾದಿರಾಜ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ನಗರದಲ್ಲಿ 1,108 ವಾರಗಳಿಂದ ಸಾಮೂಹಿಕ ವಿಷ್ಣು ಸಹಸ್ರಮಾನ ಪಠಣವನ್ನು ಸಂಘಟಿಸುತ್ತಿರುವ ವಿಷ್ಣು ಸೇವಾ ಸಂಸ್ಥೆಯ 21ನೇ ವಾರ್ಷಿಕೋತ್ಸವ ಜಂಬುನಾಥ ರಸ್ತೆಯ ಶ್ರೀಕೃಷ್ಣ ಮಠದಲ್ಲಿ ಭಾನುವಾರ ನಡೆಯಿತು.</p>.<p>ವಿಷ್ಣು ಸಹಸ್ರನಾಮ ಹೋಮ, ಸಾಮೂಹಿಕ ವಿಷ್ಣು ಸಹಸ್ರನಾಮ ನಡೆದ ಬಳಿಕ ಸಭಾ ಕಾರ್ಯಕ್ರಮದಲ್ಲಿ 16 ಸಾವಿರ ಭಾಮಿನಿ ಷಟ್ಪದಿಯಲ್ಲಿ ‘ಶ್ರೀಕೃಷ್ಣ ಲೀಲಾಮೃತಂ’ ಮಹಾಕಾವ್ಯ ರಚಿಸಿದ ನಗರದ ಹಿರಿಯ ಕವಿ ರಂಗೋಪಂತ ನಾಗರಾಜರಾಯರು ತಮ್ಮ ಸಾಹಿತ್ಯ ಸೇವೆಯ ಕುರಿತು ಮಾಹಿತಿ ನೀಡಿದರು.</p>.<p>ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಹಾಗೂ ಮಕ್ಕಳಲ್ಲಿ, ಕುಟುಂಬದಲ್ಲಿ ಉತ್ತಮ ಸಂಸ್ಕಾರ ಮೂಡಿಸುವಲ್ಲಿ ವಿಷ್ಣು ಸೇವಾ ಸಂಸ್ಥೆ ಮಹತ್ವದ ಕೆಲಸ ಮಾಡುತ್ತಿದೆ ಎಂದರು.</p>.<p>ಸಂಸ್ಥೆಯ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಮಹಾದಾನಿಗಳನ್ನು ಸನ್ಮಾನಿಸಲಾಯಿತು. ಲೀಲಾ ಕಲಾಭೂಮಿ ಮಕ್ಕಳ ಭಗವದ್ಗೀತೆ ಪ್ರವಚನ, ಅನಘಾ, ಸಿಂಚನಾ ಕರ್ಣಂ ಅವರ ಭರತನಾಟ್ಯ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.</p>.<p>ಸಂಸ್ಥೆಯ ಗೌರವಾಧ್ಯಕ್ಷ ಯು.ನರಸಿಂಹಮೂರ್ತಿ, ಅಧ್ಯಕ್ಷ ಪ್ರೊ.ಯು.ರಾಘವೇಂದ್ರ ರಾವ್, ಕಾರ್ಯದರ್ಶಿ ವಾದಿರಾಜ ಭಟ್, ಉಪಾಧ್ಯಕ್ಷ ಗುರುರಾಜ ಭಟ್, ನರಸಿಂಹಾಚಾರ್, ಶ್ರೀಪತಿ, ರಾಘವೇಂದ್ರ ಉಪಾಧ್ಯಾಯ, ವಾಣಿ ಆಚಾರ್, ಸುಧಾ ವಾದಿರಾಜ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>