<p><strong>ಹೊಸಪೇಟೆ</strong>: ಸಮಕಾಲೀನತೆಗೆ ತೀವ್ರವಾಗಿ ಸ್ಪಂದಿಸುವ ಬುದ್ಧಿಜೀವಿಗಳನ್ನು ಲದ್ದಿಜೀವಿಗಳು, ಗಂಜಿ ಗಿರಾಕಿಗಳು ಎಂದು ಹಂಗಿಸುತ್ತಾರೆ, ಹಾಗೆ ಹಂಗಿಸುವವರಿಗೆ ಹಾಗೂ ಜಾತಿವಾದಿಗಳಿಗೆ ಬುದ್ಧಿಜೀವಿಗಳ ಕುರಿತು ಭಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು. </p><p>ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಬುರ್ಗಿ ವಿಭಾಗದ ಯುವ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p><p>'ಬುದ್ಧಿಜೀವಿಗಳು, ಬರಹಗಾರರು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಾರೆ. ಇಂಥವರನ್ನು ಗುರಿಯಾಗಿ ಮಾಡಲಾಗುತ್ತಿದೆ. ಸಂವಿಧಾನ ಪರವಾಗಿ, ಸೌಹಾರ್ದತೆ ಪರವಾಗಿ ಮಾತನಾಡುವವರನ್ನು ಉಳಿಸಬಾರದೆನ್ನುವ ವಾತಾವರಣವಿದೆ. ಅಲ್ಲದೆ ಲೇಖಕರ ಮೇಲೆ ಹಲ್ಲೆಗಳಾಗುತ್ತಿವೆ, ಕೊಲೆಗಳಾಗುತ್ತಿವೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು. </p><p>'ಈಗಿನ ಯುವತಲೆಮಾರಿನ ಕವಿಗಳು ಪ್ರೀತಿ, ಪ್ರೇಮ, ಪ್ರಣಯ ಕುರಿತು ಬರೆಯದೆ ಈ ಕಾಲದ ಮನೋಧರ್ಮಕ್ಕೆ ತೀವ್ರವಾಗಿ ಸ್ಪಂದಿಸುತ್ತಿದ್ದಾರೆ. ಹಾಗೆ ಬರೆಯುವ ನಮ್ಮ ಕವಿಗಳಿಗೆ ತೊಂದರೆಯಾದರೆ ಯಾರು ಜವಾಬ್ದಾರರು? ಅವರನ್ನು ಪ್ರೋತ್ಸಾಹಿಸಬೇಕಾದ ಹಿರಿಯರು ಹೊಣೆಗೇಡಿಗಳಾಗಿದ್ದೇವೆ. ಅವರನ್ನು ರಕ್ಷಿಸಬೇಕಿದೆ' ಎಂದು ಸಲಹೆ ನೀಡಿದರು.</p><p>ಈಗಾಗಲೇ ಮೈಸೂರು ವಿಭಾಗದಿಂದ ಹಾಸನದಲ್ಲಿ ಯುವ ಕವಿಗೋಷ್ಠಿ ಆಯೋಜಿಸಲಾಗಿತ್ತು. ಜುಲೈ 10ರಂದು ಬೆಂಗಳೂರು ವಿಭಾಗದ ಯುವ ಕವಿಗೋಷ್ಠಿಯನ್ನು ತುಮಕೂರಿನಲ್ಲಿ ಏರ್ಪಡಿಸಲಾಗಿದೆ. ಹೀಗೆ ರಾಜ್ಯದ ನಾಲ್ಕು ವಿಭಾಗದ ಕವಿಗೋಷ್ಠಿ ನಡೆಯಲಿವೆ. ಇದರಲ್ಲಿ ಭಾಗವಹಿಸಿದ ಕವಿಗಳ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಲಿದೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong>: ಸಮಕಾಲೀನತೆಗೆ ತೀವ್ರವಾಗಿ ಸ್ಪಂದಿಸುವ ಬುದ್ಧಿಜೀವಿಗಳನ್ನು ಲದ್ದಿಜೀವಿಗಳು, ಗಂಜಿ ಗಿರಾಕಿಗಳು ಎಂದು ಹಂಗಿಸುತ್ತಾರೆ, ಹಾಗೆ ಹಂಗಿಸುವವರಿಗೆ ಹಾಗೂ ಜಾತಿವಾದಿಗಳಿಗೆ ಬುದ್ಧಿಜೀವಿಗಳ ಕುರಿತು ಭಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು. </p><p>ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಬುರ್ಗಿ ವಿಭಾಗದ ಯುವ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p><p>'ಬುದ್ಧಿಜೀವಿಗಳು, ಬರಹಗಾರರು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಾರೆ. ಇಂಥವರನ್ನು ಗುರಿಯಾಗಿ ಮಾಡಲಾಗುತ್ತಿದೆ. ಸಂವಿಧಾನ ಪರವಾಗಿ, ಸೌಹಾರ್ದತೆ ಪರವಾಗಿ ಮಾತನಾಡುವವರನ್ನು ಉಳಿಸಬಾರದೆನ್ನುವ ವಾತಾವರಣವಿದೆ. ಅಲ್ಲದೆ ಲೇಖಕರ ಮೇಲೆ ಹಲ್ಲೆಗಳಾಗುತ್ತಿವೆ, ಕೊಲೆಗಳಾಗುತ್ತಿವೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು. </p><p>'ಈಗಿನ ಯುವತಲೆಮಾರಿನ ಕವಿಗಳು ಪ್ರೀತಿ, ಪ್ರೇಮ, ಪ್ರಣಯ ಕುರಿತು ಬರೆಯದೆ ಈ ಕಾಲದ ಮನೋಧರ್ಮಕ್ಕೆ ತೀವ್ರವಾಗಿ ಸ್ಪಂದಿಸುತ್ತಿದ್ದಾರೆ. ಹಾಗೆ ಬರೆಯುವ ನಮ್ಮ ಕವಿಗಳಿಗೆ ತೊಂದರೆಯಾದರೆ ಯಾರು ಜವಾಬ್ದಾರರು? ಅವರನ್ನು ಪ್ರೋತ್ಸಾಹಿಸಬೇಕಾದ ಹಿರಿಯರು ಹೊಣೆಗೇಡಿಗಳಾಗಿದ್ದೇವೆ. ಅವರನ್ನು ರಕ್ಷಿಸಬೇಕಿದೆ' ಎಂದು ಸಲಹೆ ನೀಡಿದರು.</p><p>ಈಗಾಗಲೇ ಮೈಸೂರು ವಿಭಾಗದಿಂದ ಹಾಸನದಲ್ಲಿ ಯುವ ಕವಿಗೋಷ್ಠಿ ಆಯೋಜಿಸಲಾಗಿತ್ತು. ಜುಲೈ 10ರಂದು ಬೆಂಗಳೂರು ವಿಭಾಗದ ಯುವ ಕವಿಗೋಷ್ಠಿಯನ್ನು ತುಮಕೂರಿನಲ್ಲಿ ಏರ್ಪಡಿಸಲಾಗಿದೆ. ಹೀಗೆ ರಾಜ್ಯದ ನಾಲ್ಕು ವಿಭಾಗದ ಕವಿಗೋಷ್ಠಿ ನಡೆಯಲಿವೆ. ಇದರಲ್ಲಿ ಭಾಗವಹಿಸಿದ ಕವಿಗಳ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಲಿದೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>