<p><strong>ವಿಜಯಪುರ</strong>: ಜಿಲ್ಲೆಯಲ್ಲಿ ಮಳೆಯಿಂದ ಪ್ರಾಥಮಿಕ ವರದಿಯಂತೆ 5322.19 ಹೆಕ್ಟೇರ್ ಕೃಷಿ ಬೆಳೆ ಹಾಗೂ 272.20 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ತಿಳಿಸಿದ್ದಾರೆ.</p>.<p>ಬೆಳೆ ಹಾನಿ ಜಂಟಿ ಸಮೀಕ್ಷಾ ತಂಡವನ್ನು ರಚಿಸಿ ಶೇ 80 ರಷ್ಟು ಸಮೀಕ್ಷೆ ಕೈಗೊಂಡಿದ್ದು, ಕೂಡಲೇ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.</p>.<p>ಜಿಲ್ಲೆಯಲ್ಲಿ ಆ.5ರಿಂದ ಈವರೆಗೆ ಮಳೆಯಿಂದ 2 ಜಾನುವಾರು ಹಾಗೂ 104 ಮನೆಗಳ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಪರಿಹಾರವನ್ನು ವಿತರಿಸಲಾಗಿದೆ. ಭಾಗಶಃ ಹಾನಿಯಾದ 213 ಮನೆಗಳ ಪೈಕಿ ಜಂಟಿ ಸಮೀಕ್ಷಾ ವರದಿಯಂತೆ ಈಗಾಗಲೇ 160 ಮನೆಗಳಿಗೆ ಪರಿಹಾರಧನ ನೀಡಲಾಗಿದೆ. ಬಾಕಿ ಉಳಿದ 53 ಭಾಗಶಃ ಮನೆಗಳು ಇತ್ತೀಚಿನ 2-3 ದಿನಗಳಲ್ಲಿ ಹಾನಿಯಾಗಿದ್ದು, ಮನೆ ಹಾನಿಗೆ ಪರಿಹಾರ ವಿತರಿಸಲು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. </p>.<p>ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಮೇ 31 ರ ವರೆಗೆ 9 ಮಾನವ ಜೀವಹಾನಿ, 65 ಜಾನುವಾರು ಜೀವಹಾನಿ, 110 ಭಾಗಶಃ ಮನೆಗಳ ಹಾನಿ ಹಾಗೂ 70 ಮನೆಗಳ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಇವುಗಳಿಗೆ ಎಸ್ಡಿಆರ್ಎಫ್-ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಈಗಾಗಲೇ ಪರಿಹಾರವನ್ನು ವಿತರಿಸಲಾಗಿದೆ ಎಂದರು.</p>.<p>147.40 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ 218 ಫಲಾನುಭವಿಗಳಿಗೆ ₹12.81 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p>.<p><strong>ಸಹಾಯವಾಣಿ:</strong></p>.<p>ಪ್ರವಾಹ ನಿಯಂತ್ರಣ ಹಾಗೂ ಪ್ರಕೃತಿ ವಿಕೋಪದ ತುರ್ತು ಕ್ರಮ ಕೈಗೊಳ್ಳಲು ಈಗಾಗಲೇ ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ.</p>.<p>ವಿಪತ್ತು ನಿರ್ವಹಣೆಯ ಕುಂದು-ಕೊರತೆಗಳ ಕುರಿತು ಸಾರ್ವಜನಿಕರು ತಮ್ಮ ತಾಲ್ಲೂಕಿನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಕುರಿತು 24/7 ಸಹಾಯವಾಣಿ 1077 ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ನೋಡಲ್ ಅಧಿಕಾರಿಗಳ ನೇಮಕ</strong></p><p> ವಿಜಯಪುರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ವಿಜಯಪುರ ತಾಲ್ಲೂಕಿಗೆ ಮಹಾಂತೇಶ ಮುಳಗುಂದ ಮೊ: 97429 71570 ಬಬಲೇಶ್ವರ ತಾಲ್ಲೂಕಿಗೆ ಪ್ರಶಾಂತ ಪೂಜಾರಿ ಮೊ: 98448 49238 ತಿಕೋಟಾ ತಾಲ್ಲೂಕಿಗೆ ರಾಹುಲ್ ಕುಮಾರ ಭಾವಿದೊಡ್ಡಿ ಮೊ: 94489 99232 ಬಸವನಬಾಗೇವಾಡಿ ತಾಲ್ಲೂಕಿಗೆ ಬಿ.ಎ.ಸೌದಾಗರ ಮೊ: 94483 92005 ಅವರನ್ನು ನೇಮಕ ಮಾಡಲಾಗಿದೆ. ಕೊಲ್ಹಾರ ತಾಲ್ಲೂಕಿಗೆ ಎಂ.ಎಚ್.ಬಾಂಗಿ ಮೊ: 99861 32717 ಇಂಡಿ ತಾಲ್ಲೂಕಿಗೆ ರಾಜಶೇಖರ ಡಂಬಳ ಮೊ: 88613 08444 ಮುದ್ದೇಬಿಹಾಳ ತಾಲ್ಲೂಕಿಗೆ ಪುಂಡಲೀಕ ಮಾನವರ ಮೊ: 90083 49150 ಹಾಗೂ ತಾಳಿಕೋಟೆ ತಾಲ್ಲೂಕಿಗೆ ಎಸ್.ಎಸ್.ಪಾಟೀಲ ಮೊ: 82779 30601/98803 35597 ಅವರನ್ನು ನೇಮಕ ಮಾಡಲಾಗಿದೆ. ನಿಡಗುಂದಿ ತಾಲ್ಲೂಕಿಗೆ ಎಸ್.ಕೆ.ಭಾಗ್ಯಶ್ರೀ ಮೊ: 77953 87217 ಚಡಚಣ ತಾಲ್ಲೂಕಿಗೆ ಸಿ.ಬಿ.ಕುಂಬಾರ ಮೊ: 98448 50411 ಸಿಂದಗಿ ತಾಲ್ಲೂಕಿಗೆ ವಿನಯ ಪಾಟೀಲ ಮೊ: 89514 20399 ದೇವರಹಿಪ್ಪರಗಿ ತಾಲ್ಲೂಕಿಗೆ ಉಮಾಶ್ರೀ ಕೊಳ್ಳಿ ಮೊ: 86184 97523 ಹಾಗೂ ಆಲಮೇಲ ತಾಲ್ಲೂಕಿಗೆ ಮಹೇಶ ಪೋತದಾರ ಮೊ: 94826 64180/ 94808 43021 ಅವರನ್ನು ನೇಮಕ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಜಿಲ್ಲೆಯಲ್ಲಿ ಮಳೆಯಿಂದ ಪ್ರಾಥಮಿಕ ವರದಿಯಂತೆ 5322.19 ಹೆಕ್ಟೇರ್ ಕೃಷಿ ಬೆಳೆ ಹಾಗೂ 272.20 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ತಿಳಿಸಿದ್ದಾರೆ.</p>.<p>ಬೆಳೆ ಹಾನಿ ಜಂಟಿ ಸಮೀಕ್ಷಾ ತಂಡವನ್ನು ರಚಿಸಿ ಶೇ 80 ರಷ್ಟು ಸಮೀಕ್ಷೆ ಕೈಗೊಂಡಿದ್ದು, ಕೂಡಲೇ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.</p>.<p>ಜಿಲ್ಲೆಯಲ್ಲಿ ಆ.5ರಿಂದ ಈವರೆಗೆ ಮಳೆಯಿಂದ 2 ಜಾನುವಾರು ಹಾಗೂ 104 ಮನೆಗಳ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಪರಿಹಾರವನ್ನು ವಿತರಿಸಲಾಗಿದೆ. ಭಾಗಶಃ ಹಾನಿಯಾದ 213 ಮನೆಗಳ ಪೈಕಿ ಜಂಟಿ ಸಮೀಕ್ಷಾ ವರದಿಯಂತೆ ಈಗಾಗಲೇ 160 ಮನೆಗಳಿಗೆ ಪರಿಹಾರಧನ ನೀಡಲಾಗಿದೆ. ಬಾಕಿ ಉಳಿದ 53 ಭಾಗಶಃ ಮನೆಗಳು ಇತ್ತೀಚಿನ 2-3 ದಿನಗಳಲ್ಲಿ ಹಾನಿಯಾಗಿದ್ದು, ಮನೆ ಹಾನಿಗೆ ಪರಿಹಾರ ವಿತರಿಸಲು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. </p>.<p>ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಮೇ 31 ರ ವರೆಗೆ 9 ಮಾನವ ಜೀವಹಾನಿ, 65 ಜಾನುವಾರು ಜೀವಹಾನಿ, 110 ಭಾಗಶಃ ಮನೆಗಳ ಹಾನಿ ಹಾಗೂ 70 ಮನೆಗಳ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಇವುಗಳಿಗೆ ಎಸ್ಡಿಆರ್ಎಫ್-ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಈಗಾಗಲೇ ಪರಿಹಾರವನ್ನು ವಿತರಿಸಲಾಗಿದೆ ಎಂದರು.</p>.<p>147.40 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ 218 ಫಲಾನುಭವಿಗಳಿಗೆ ₹12.81 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p>.<p><strong>ಸಹಾಯವಾಣಿ:</strong></p>.<p>ಪ್ರವಾಹ ನಿಯಂತ್ರಣ ಹಾಗೂ ಪ್ರಕೃತಿ ವಿಕೋಪದ ತುರ್ತು ಕ್ರಮ ಕೈಗೊಳ್ಳಲು ಈಗಾಗಲೇ ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ.</p>.<p>ವಿಪತ್ತು ನಿರ್ವಹಣೆಯ ಕುಂದು-ಕೊರತೆಗಳ ಕುರಿತು ಸಾರ್ವಜನಿಕರು ತಮ್ಮ ತಾಲ್ಲೂಕಿನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಕುರಿತು 24/7 ಸಹಾಯವಾಣಿ 1077 ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ನೋಡಲ್ ಅಧಿಕಾರಿಗಳ ನೇಮಕ</strong></p><p> ವಿಜಯಪುರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ವಿಜಯಪುರ ತಾಲ್ಲೂಕಿಗೆ ಮಹಾಂತೇಶ ಮುಳಗುಂದ ಮೊ: 97429 71570 ಬಬಲೇಶ್ವರ ತಾಲ್ಲೂಕಿಗೆ ಪ್ರಶಾಂತ ಪೂಜಾರಿ ಮೊ: 98448 49238 ತಿಕೋಟಾ ತಾಲ್ಲೂಕಿಗೆ ರಾಹುಲ್ ಕುಮಾರ ಭಾವಿದೊಡ್ಡಿ ಮೊ: 94489 99232 ಬಸವನಬಾಗೇವಾಡಿ ತಾಲ್ಲೂಕಿಗೆ ಬಿ.ಎ.ಸೌದಾಗರ ಮೊ: 94483 92005 ಅವರನ್ನು ನೇಮಕ ಮಾಡಲಾಗಿದೆ. ಕೊಲ್ಹಾರ ತಾಲ್ಲೂಕಿಗೆ ಎಂ.ಎಚ್.ಬಾಂಗಿ ಮೊ: 99861 32717 ಇಂಡಿ ತಾಲ್ಲೂಕಿಗೆ ರಾಜಶೇಖರ ಡಂಬಳ ಮೊ: 88613 08444 ಮುದ್ದೇಬಿಹಾಳ ತಾಲ್ಲೂಕಿಗೆ ಪುಂಡಲೀಕ ಮಾನವರ ಮೊ: 90083 49150 ಹಾಗೂ ತಾಳಿಕೋಟೆ ತಾಲ್ಲೂಕಿಗೆ ಎಸ್.ಎಸ್.ಪಾಟೀಲ ಮೊ: 82779 30601/98803 35597 ಅವರನ್ನು ನೇಮಕ ಮಾಡಲಾಗಿದೆ. ನಿಡಗುಂದಿ ತಾಲ್ಲೂಕಿಗೆ ಎಸ್.ಕೆ.ಭಾಗ್ಯಶ್ರೀ ಮೊ: 77953 87217 ಚಡಚಣ ತಾಲ್ಲೂಕಿಗೆ ಸಿ.ಬಿ.ಕುಂಬಾರ ಮೊ: 98448 50411 ಸಿಂದಗಿ ತಾಲ್ಲೂಕಿಗೆ ವಿನಯ ಪಾಟೀಲ ಮೊ: 89514 20399 ದೇವರಹಿಪ್ಪರಗಿ ತಾಲ್ಲೂಕಿಗೆ ಉಮಾಶ್ರೀ ಕೊಳ್ಳಿ ಮೊ: 86184 97523 ಹಾಗೂ ಆಲಮೇಲ ತಾಲ್ಲೂಕಿಗೆ ಮಹೇಶ ಪೋತದಾರ ಮೊ: 94826 64180/ 94808 43021 ಅವರನ್ನು ನೇಮಕ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>