<p><strong>ಹೂವಿನಹಿಪ್ಪರಗಿ</strong>: ವಾಕ್ ಸಿದ್ಧಿ ಮೂಲಕ ನಾಡಿನಾದ್ಯಾಂತ ಭಕ್ತರನ್ನು ಹೊಂದಿ ಶಿಷ್ಯಬಳಗ, ಭಕ್ತಬಳಗದ ಒಳಿತಿಗಾಗಿ ಮಠ ಮಂದಿರಗಳನ್ನು ಸ್ಥಾಪಿಸಿ ಭಕ್ತರಿಗಾಗಿ ಜೀವನ ಸಮರ್ಪಿಸಿಕೊಂಡಿದ್ದ ಬೂದಿಹಾಳ ಶ್ರೀ ಕರಿಸಿದ್ದೇಶ್ವರ ಮಠದ ಕೃರ್ತ ಪುರುಷ, ಶತಾಯುಷಿ ಅಡಿವೆಪ್ಪ ಮಹಾರಾಜರು (106) ಗುರುವಾರ ಪಂಚಭೂತಗಳಲ್ಲಿ ಲೀನರಾದರು.</p>.<p>ಬಸವನಬಾಗೇವಾಡಿ ತಾಲ್ಲೂಕಿನ ಬೂದಿಹಾಳ ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಠದ ಆರಾಧ್ಯದೈವ ಎನಿಸಿಕೊಂಡಿದ್ದ ಮಹಾರಾಜರು, ಬುಧವಾರ ರಾತ್ರಿ 2.20ಕ್ಕೆ ಶ್ರೀ ಮಠದಲ್ಲಿ ಲಿಂಗೈಕೆರಾದರು. ಹನ್ನೊಂದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 10 ದಿನಗಳಿಂದ ಆಹಾರ, ಪ್ರಸಾದ ತೆಗೆದುಕೊಂಡಿರಲಿಲ್ಲ.</p>.<p>ಮಹಾರಾಜರು ಅಖಂಡ ವಿಜಯಪುರ ಜಿಲ್ಲೆಯ, ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಮದಾಳ ಗ್ರಾಮದ ಶ್ರೀ ಕರಿಸಿದ್ದೇಶ್ವರರ ಪರಮ ಶಿಷ್ಯರಾಗಿ ಸೇವೆ ಸಲ್ಲಿಸಿ ಅವರಿಂದ ವರ ಪಡೆದವರು.</p>.<p>ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಅಂತಿಮ ಯಾತ್ರೆಯಲ್ಲಿ ಹಲವಾರು ಡೊಳ್ಳಿನ ಗಾಯನ ಸಂಘದವರು ಮಹರಾಜರ ಕುರಿತು ಹಾಡಿದರು. ಪೂಜಾರಿಗಳಿಂದ ಹೇಳಿಕೆಗಳು ನಡೆದವು. ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹಿಂದೂ ಮಠಾಧೀಶರ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.</p>.<p>ಇಂಗಳೇಶ್ವರ, ವಡವಡಗಿಯ ಭೃಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಲದ ಹುಲಜಂತಿಯ ಪಟ್ಟದ ದೇವರು ಮಾಲಿಂಗರಾಯ ಮಹಾರಾಜರು, ಬಸವನ ಬಾಗೇವಾಡಿ ಶಿವಾನಂದ ಈರಕಾರ ಮುತ್ಯಾ ಸೇರಿದಂತೆ ನೂರಾರು ಪರಮಪೂಜ್ಯರು, ಸಂತರು, ರಾಜಕೀಯ ಮುಖಂಡರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಿಪ್ಪರಗಿ</strong>: ವಾಕ್ ಸಿದ್ಧಿ ಮೂಲಕ ನಾಡಿನಾದ್ಯಾಂತ ಭಕ್ತರನ್ನು ಹೊಂದಿ ಶಿಷ್ಯಬಳಗ, ಭಕ್ತಬಳಗದ ಒಳಿತಿಗಾಗಿ ಮಠ ಮಂದಿರಗಳನ್ನು ಸ್ಥಾಪಿಸಿ ಭಕ್ತರಿಗಾಗಿ ಜೀವನ ಸಮರ್ಪಿಸಿಕೊಂಡಿದ್ದ ಬೂದಿಹಾಳ ಶ್ರೀ ಕರಿಸಿದ್ದೇಶ್ವರ ಮಠದ ಕೃರ್ತ ಪುರುಷ, ಶತಾಯುಷಿ ಅಡಿವೆಪ್ಪ ಮಹಾರಾಜರು (106) ಗುರುವಾರ ಪಂಚಭೂತಗಳಲ್ಲಿ ಲೀನರಾದರು.</p>.<p>ಬಸವನಬಾಗೇವಾಡಿ ತಾಲ್ಲೂಕಿನ ಬೂದಿಹಾಳ ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಠದ ಆರಾಧ್ಯದೈವ ಎನಿಸಿಕೊಂಡಿದ್ದ ಮಹಾರಾಜರು, ಬುಧವಾರ ರಾತ್ರಿ 2.20ಕ್ಕೆ ಶ್ರೀ ಮಠದಲ್ಲಿ ಲಿಂಗೈಕೆರಾದರು. ಹನ್ನೊಂದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 10 ದಿನಗಳಿಂದ ಆಹಾರ, ಪ್ರಸಾದ ತೆಗೆದುಕೊಂಡಿರಲಿಲ್ಲ.</p>.<p>ಮಹಾರಾಜರು ಅಖಂಡ ವಿಜಯಪುರ ಜಿಲ್ಲೆಯ, ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಮದಾಳ ಗ್ರಾಮದ ಶ್ರೀ ಕರಿಸಿದ್ದೇಶ್ವರರ ಪರಮ ಶಿಷ್ಯರಾಗಿ ಸೇವೆ ಸಲ್ಲಿಸಿ ಅವರಿಂದ ವರ ಪಡೆದವರು.</p>.<p>ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಅಂತಿಮ ಯಾತ್ರೆಯಲ್ಲಿ ಹಲವಾರು ಡೊಳ್ಳಿನ ಗಾಯನ ಸಂಘದವರು ಮಹರಾಜರ ಕುರಿತು ಹಾಡಿದರು. ಪೂಜಾರಿಗಳಿಂದ ಹೇಳಿಕೆಗಳು ನಡೆದವು. ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹಿಂದೂ ಮಠಾಧೀಶರ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.</p>.<p>ಇಂಗಳೇಶ್ವರ, ವಡವಡಗಿಯ ಭೃಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಲದ ಹುಲಜಂತಿಯ ಪಟ್ಟದ ದೇವರು ಮಾಲಿಂಗರಾಯ ಮಹಾರಾಜರು, ಬಸವನ ಬಾಗೇವಾಡಿ ಶಿವಾನಂದ ಈರಕಾರ ಮುತ್ಯಾ ಸೇರಿದಂತೆ ನೂರಾರು ಪರಮಪೂಜ್ಯರು, ಸಂತರು, ರಾಜಕೀಯ ಮುಖಂಡರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>