ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮುದ್ದೇಬಿಹಾಳ: ಅನ್ನದಾತನಿಗೆ ಜೊತೆಗಾರನ ನೆನಪಿಸಿದ ಕೃಷಿ ಸಮ್ಮೇಳನ

ಶಂಕರ ಈ. ಹೆಬ್ಬಾಳ
Published : 9 ಮೇ 2024, 6:23 IST
Last Updated : 9 ಮೇ 2024, 6:23 IST
ಫಾಲೋ ಮಾಡಿ
Comments
ಒಂದೇ ವೇದಿಕೆಯಲ್ಲಿ ಹಾಲಿ–ಮಾಜಿ ಶಾಸಕರ ಸಮ್ಮಿಲನ
ವಿಧಾನಸಭಾ ಚುನಾವಣೆಯ ಬಳಿಕ ಹಾಲಿ ಮತ್ತು ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಬುಧವಾರ ನಡೆದ ಜೋಡೆತ್ತಿನ ಕೃಷಿ ಪುನಶ್ಚೇತನ ಸಂಕಲ್ಪ ಸಮ್ಮೇಳನದಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಶಾಸಕ ನಡಹಳ್ಳಿಯವರು ಮಾಡಿದರೆ ಶಾಸಕರು ನಾಡಗೌಡರು ಮೊದಲಿಗರಾಗಿ ಮಾತನಾಡಿ ಮಾಜಿ ಶಾಸಕರ ಹೆಸರನ್ನು ಕೂಡ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ವೇದಿಕೆಯಿಂದ ನಿರ್ಗಮಿಸಿದರು. ಬಳಿಕ ನಡಹಳ್ಳಿಯವರು ಶಾಸಕರ ಹೆಸರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಚುನಾವಣೆ ಬಳಿಕ ಒಂದೇ ವೇದಿಕೆಯಲ್ಲಿ ಉಭಯ ನಾಯಕರು ಕಾಣಿಸಿಕೊಂಡಿದ್ದು ಹಲವು ಚರ್ಚೆಗಳಿಗೆ ನಾಂದಿ ಹಾಡಿದೆ.
‘ಜೋಡೆತ್ತಿನ ಕೃಷಿಯಲ್ಲಿದೆ ನಾಗರಿಕತೆಯ ಭವಿಷ್ಯ’
ಜೋಡೆತ್ತಿನ ಕೃಷಿಯ ನಾಶದಿಂದ ನಮ್ಮ ಭೂಮಿ ಫಲವತ್ತತೆ ಕಳೆದುಕೊಂಡು ಹಲವು ಬೆಳೆಗಳ ಇಳುವರಿ ಕುಂಠಿತಗೊಳ್ಳುತ್ತಿದೆ. ಜೋಡೆತ್ತಿನ ಕೃಷಿಕರ ಮೇಲೆ ನಮ್ಮ ನಾಗರಿಕತೆಯ ಭವಿಷ್ಯ ನಿಂತಿದೆ. ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿಕರು ಉಳಿದರೆ ಮಾತ್ರ ಅದಕ್ಕೆ ಅವಲಂಬಿತ ಇತರ ಉದ್ಯೋಗಗಳೂ ಉಳಿಯಲು ಸಾಧ್ಯ. ಕೃಷಿ ಆಧಾರಿತ ಜೋಡೆತ್ತುಗಳನ್ನು ಹೊಂದಿದ ಕೃಷಿಕರಿಗೆ ಪ್ರೋತ್ಸಾಹ ಒದಗಿಸುವ ಕಾರ್ಯ ಆಗಬೇಕು. ಅಪಘಾನಿಸ್ತಾನ ಜಾಂಬೋಡಿಯಾ ಕಾಂಬೋಡಿಯಾ ಟರ್ಕಿ ಸೇರಿದಂತೆ ಐವತ್ತು ದೇಶಗಳಲ್ಲಿ ಸುತ್ತಾಡಿದರೂ ನಂದಿ ಮೂರ್ತಿ ಕಾಣುತ್ತೇವೆ. ಎತ್ತುಗಳಿಗೆ ಇರುವ ಪ್ರಾಮುಖ್ಯ ಎಷ್ಟಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಹೀಗಾಗಿ ನಾವು ನಂದಿಯಾತ್ರೆ ಮಾಡುತ್ತಿದ್ದೇವೆ. ಪರಿಸರದಲ್ಲಿ ಅತ್ಯಂತ ಪ್ರಾಮುಖ್ಯ ಪಡೆದುಕೊಂಡಿರುವುದು ಎತ್ತುಗಳು ಎಂಬುದನ್ನು ಮತ್ತೊಮ್ಮೆ ರೈತ ಸಂಕುಲಕ್ಕೆ ಮನವರಿಕೆ ಮಾಡಿಕೊಡುವುದು ಈ ಕಾರ್ಯಕ್ರಮ ಉದ್ದೇಶ ಎಂದು ವಿಜ್ಞಾನಿ ಚಂದ್ರಶೇಖರ ಬಿರಾದಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT