<p><strong>ಆಲಮಟ್ಟಿ</strong>: ಆಲಮಟ್ಟಿ ಜಲಾಶಯದ ಬಲಭಾಗದ ಸೀತಮ್ಮನಗಿರಿಯಲ್ಲಿ ನಿರ್ಮಾಣಗೊಂಡಿರುವ ಲವಕುಶ ಉದ್ಯಾನದ ನಾನಾ ಪ್ರಸಂಗದ ಘಟನೆಗಳಿಗೆ ಧ್ವನಿ ಮುದ್ರಿತ ವ್ಯವಸ್ಥೆ ಅಳವಡಿಸಲಾಗಿದೆ.<br> ಉತ್ತರ ರಾಮಾಯಣದಲ್ಲಿ ಗರ್ಭಿಣಿ ಸೀತಾಮಾತೆ ಕಾಡಿಗೆ ಒಬ್ಬಂಟಿಯಾಗಿರುವಾಗ ಬಂದಿದ್ದು ಇದೇ ಸೀತಮ್ಮನಗಿರಿಗೆ. ವಾಲ್ಮಿಕಿ ಆಶ್ರಮದಲ್ಲಿ ನೆಲೆ ನಿಂತಳು ಎಂಬುದು ಪೌರಾಣಿಕ ಕತೆ. ಅದಕ್ಕೆ ಪೂರಕವಾಗಿ ಜಲಾಶಯದ ಬಲಭಾಗದ ಗುಡ್ಡ ‘ಸೀತಮ್ಮನ ಗುಡ್ಡ’ ಎಂದೂ, ಅಲ್ಲಿ ಪುರಾತನ ಕಾಲದಿಂದಲೂ ಸೀತಾಮಾತೆ ಮಂದಿರ, ಲವ-ಕುಶ ಹೊಂಡಗಳು ಇವೆ.</p>.<p><strong>ಲವ-ಕುಶ ಉದ್ಯಾನ:</strong></p>.<p>ಈ ಕತೆಯನ್ನೇ ಆಧಾರವಾಗಿಟ್ಟುಕೊಂಡು, ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ಇಲಾಖೆಯವರು ಆ ಕುರುಚಲು ಗುಡ್ಡದಲ್ಲಿಯೇ ಸುಂದರವಾದ ಲವ–ಕುಶ ಉದ್ಯಾನ ನಿರ್ಮಿಸಿ ದಶಕಗಳೇ ಕಳೆದಿವೆ. ಉತ್ತರ ರಾಮಾಯಣದ ಲವ-ಕುಶರ ಚರಿತ್ರೆಯನ್ನು ಸಿಮೆಂಟ್ ಮೂರ್ತಿಗಳಲ್ಲಿ ಒಂದೊಂದು ಘಟನೆಗಳನ್ನು ಚಿತ್ರಿಸಲಾಗಿದೆ. ಆದರೆ ಅದರ ಬಗ್ಗೆ ಮಾಹಿತಿ ಪ್ರವಾಸಿಗರಿಗೆ ಆಗುತ್ತಿರಲಿಲ್ಲ. </p>.<p><strong>ಧ್ವನಿ ವ್ಯವಸ್ಥೆ:</strong></p>.<p>ಈಗ ಪ್ರತಿಯೊಂದು ದೃಶ್ಯಕ್ಕೂ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ. ಆ ಸಿಮೆಂಟ್ ಮೂರ್ತಿಯ ದೃಶ್ಯದ ಬಳಿ ತೆರಳಿದಾಗ, ಅಲ್ಲಿ ಕಾಣುವ ಗುಂಡಿ ಒತ್ತಿದರೇ ಆ ದೃಶ್ಯದ ಇಡೀ ಇತಿಹಾಸವನ್ನೇ ಅಲ್ಲಿ ಅಳವಡಿಸಿರುವ ಧ್ವನಿ ವ್ಯವಸ್ಥೆಯ ತಂತ್ರಜ್ಞಾನದಲ್ಲಿ ಕೇಳಿಬರುತ್ತದೆ. </p>.<p>ಧಾರ್ಮಿಕ ಸಂಸ್ಕೃತಿ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಉತ್ತರರಾಮಾಯಣ ಸ್ಪಷ್ಟವಾಗಿ ಪ್ರವಾಸಿಗರಿಗೆ ಮನದಟ್ಟಾಗಲಿದೆ. ದೃಶ್ಯಕ್ಕೆ ತಕ್ಕಂತೆ ಒಂದರಿಂದ ಆರು ನಿಮಿಷದವರೆಗೆ ಮುದ್ರಿತ ಧ್ವನಿ ಕೇಳಿಬರುತ್ತದೆ, ಸಂಗೀತದ ಹಿನ್ನಲೆಯೊಂದಿಗೆ ಈ ಧ್ವನಿ ಕೇಳಿ ಬರುತ್ತಿದ್ದು, ಧ್ವನಿ ನಾಟಕದ ದೃಶ್ಯಗಳಂತೆ ಭಾಸವಾಗುತ್ತವೆ. </p>.<p><strong>8 ಥೀಮ್ಗಳು:</strong></p>.<p>ಗರ್ಭಿಣಿ ಸೀತಾ ಮಾತೆಯನ್ನು ಲಕ್ಷ್ಮಣ ಕಾಡಿಗೆ ತಂದು ಬಿಡುವ ದೃಶ್ಯ, ವಾಲ್ಮಿಕಿ ಋಷಿ ಸೀತೆಗೆ ಆಶ್ರಯ ನೀಡುವುದು, ಸೀತಾಮಾತೆ ಲವ-ಕುಶರನ್ನು ಆರೈಕೆ ಮಾಡುವ ದೃಶ್ಯ, ವಾಲ್ಮಿಕಿ ಋಷಿಗಳು ವಿದ್ಯೆ, ಬಿಲ್ವಿದ್ಯೆ ಕಲಿಸುವ ದೃಶ್ಯ, ರಾಮ ಬಿಟ್ಟ ಅಶ್ವಮೇಧಯಾಗದ ಕುದುರೆಯನ್ನು ಲವ-ಕುಶತು ಕಟ್ಟುವ ದೃಶ್ಯ, ಲವ-ಕುಶರೊಂದಿಗೆ ಲಕ್ಷ್ಮಣ, ಭರತ, ಶತ್ರುಘ್ನ ಯುದ್ಧಕ್ಕೆ ಬಂದು ಸೋಲುವ ದೃಶ್ಯ, ವಾನರ ಸೇನೆಯೊಂದಿಗೆ ಯುದ್ಧ, ಕೊನೆಗೆ ರಾಮನ ಜತೆ ಲವ-ಕುಶರ ಯುದ್ಧದ ದೃಶ್ಯ ಹೀಗೆ ಎಂಟು ಥೀಮ್ ಗಳಿಗೆ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ.</p>.<p><strong>ರಂಗಾಯಣ ಕಲಾವಿದರು:</strong></p>.<p>ಧಾರವಾಡದ ರಂಗಾಯಣ ಕಲಾವಿದರ ಸಹಕಾರ ಪಡೆಯಲಾಗಿದ್ದು, ಅವರೇ ಸಾಹಿತ್ಯ ರಚಿಸಿದ್ದಾರೆ. ಬಳಿಕ ರೇಡಿಯೋ ವಾಚಕರ ನೆರವಿನಿಂದ ಪ್ರತಿ ಘಟನೆಯ ಸಾಹಿತ್ಯದ ಧ್ವನಿ ಮುದ್ರಿಸಿ ಅಳವಡಿಸಲಾಗಿದೆ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ ತಿಳಿಸಿದರು.</p>.<p>₹80 ಲಕ್ಷ ವೆಚ್ಚದಲ್ಲಿ ಇಡೀ ಉದ್ಯಾನಕ್ಕೆ ಸೌರವಿದ್ಯುತ್ ಚಾಲಿತ ಪಾಥ್ ವೇ ಲೈಟಿಂಗ್ ಹಾಗೂ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ. ಐದು ವರ್ಷಗಳ ಕಾಲ ನಿರ್ವಹಣೆಯೂ ಸೇರಿದೆ.</p>.<p>ಎಂಟು ಥೀಮ್ ಗಳಿಗೆ ಧ್ವನಿ ವ್ಯವಸ್ಥೆ ಅಳವಡಿಕೆ ₹80 ಲಕ್ಷ ವೆಚ್ಚದಲ್ಲಿ ಸೌರವಿದ್ಯುತ್ ಚಾಲಿತ ದೀಪದ ವ್ಯವಸ್ಥೆ ಧಾರವಾಡದ ರಂಗಾಯಣ ಕಲಾವಿದರ ಸಹಕಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ</strong>: ಆಲಮಟ್ಟಿ ಜಲಾಶಯದ ಬಲಭಾಗದ ಸೀತಮ್ಮನಗಿರಿಯಲ್ಲಿ ನಿರ್ಮಾಣಗೊಂಡಿರುವ ಲವಕುಶ ಉದ್ಯಾನದ ನಾನಾ ಪ್ರಸಂಗದ ಘಟನೆಗಳಿಗೆ ಧ್ವನಿ ಮುದ್ರಿತ ವ್ಯವಸ್ಥೆ ಅಳವಡಿಸಲಾಗಿದೆ.<br> ಉತ್ತರ ರಾಮಾಯಣದಲ್ಲಿ ಗರ್ಭಿಣಿ ಸೀತಾಮಾತೆ ಕಾಡಿಗೆ ಒಬ್ಬಂಟಿಯಾಗಿರುವಾಗ ಬಂದಿದ್ದು ಇದೇ ಸೀತಮ್ಮನಗಿರಿಗೆ. ವಾಲ್ಮಿಕಿ ಆಶ್ರಮದಲ್ಲಿ ನೆಲೆ ನಿಂತಳು ಎಂಬುದು ಪೌರಾಣಿಕ ಕತೆ. ಅದಕ್ಕೆ ಪೂರಕವಾಗಿ ಜಲಾಶಯದ ಬಲಭಾಗದ ಗುಡ್ಡ ‘ಸೀತಮ್ಮನ ಗುಡ್ಡ’ ಎಂದೂ, ಅಲ್ಲಿ ಪುರಾತನ ಕಾಲದಿಂದಲೂ ಸೀತಾಮಾತೆ ಮಂದಿರ, ಲವ-ಕುಶ ಹೊಂಡಗಳು ಇವೆ.</p>.<p><strong>ಲವ-ಕುಶ ಉದ್ಯಾನ:</strong></p>.<p>ಈ ಕತೆಯನ್ನೇ ಆಧಾರವಾಗಿಟ್ಟುಕೊಂಡು, ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ಇಲಾಖೆಯವರು ಆ ಕುರುಚಲು ಗುಡ್ಡದಲ್ಲಿಯೇ ಸುಂದರವಾದ ಲವ–ಕುಶ ಉದ್ಯಾನ ನಿರ್ಮಿಸಿ ದಶಕಗಳೇ ಕಳೆದಿವೆ. ಉತ್ತರ ರಾಮಾಯಣದ ಲವ-ಕುಶರ ಚರಿತ್ರೆಯನ್ನು ಸಿಮೆಂಟ್ ಮೂರ್ತಿಗಳಲ್ಲಿ ಒಂದೊಂದು ಘಟನೆಗಳನ್ನು ಚಿತ್ರಿಸಲಾಗಿದೆ. ಆದರೆ ಅದರ ಬಗ್ಗೆ ಮಾಹಿತಿ ಪ್ರವಾಸಿಗರಿಗೆ ಆಗುತ್ತಿರಲಿಲ್ಲ. </p>.<p><strong>ಧ್ವನಿ ವ್ಯವಸ್ಥೆ:</strong></p>.<p>ಈಗ ಪ್ರತಿಯೊಂದು ದೃಶ್ಯಕ್ಕೂ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ. ಆ ಸಿಮೆಂಟ್ ಮೂರ್ತಿಯ ದೃಶ್ಯದ ಬಳಿ ತೆರಳಿದಾಗ, ಅಲ್ಲಿ ಕಾಣುವ ಗುಂಡಿ ಒತ್ತಿದರೇ ಆ ದೃಶ್ಯದ ಇಡೀ ಇತಿಹಾಸವನ್ನೇ ಅಲ್ಲಿ ಅಳವಡಿಸಿರುವ ಧ್ವನಿ ವ್ಯವಸ್ಥೆಯ ತಂತ್ರಜ್ಞಾನದಲ್ಲಿ ಕೇಳಿಬರುತ್ತದೆ. </p>.<p>ಧಾರ್ಮಿಕ ಸಂಸ್ಕೃತಿ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಉತ್ತರರಾಮಾಯಣ ಸ್ಪಷ್ಟವಾಗಿ ಪ್ರವಾಸಿಗರಿಗೆ ಮನದಟ್ಟಾಗಲಿದೆ. ದೃಶ್ಯಕ್ಕೆ ತಕ್ಕಂತೆ ಒಂದರಿಂದ ಆರು ನಿಮಿಷದವರೆಗೆ ಮುದ್ರಿತ ಧ್ವನಿ ಕೇಳಿಬರುತ್ತದೆ, ಸಂಗೀತದ ಹಿನ್ನಲೆಯೊಂದಿಗೆ ಈ ಧ್ವನಿ ಕೇಳಿ ಬರುತ್ತಿದ್ದು, ಧ್ವನಿ ನಾಟಕದ ದೃಶ್ಯಗಳಂತೆ ಭಾಸವಾಗುತ್ತವೆ. </p>.<p><strong>8 ಥೀಮ್ಗಳು:</strong></p>.<p>ಗರ್ಭಿಣಿ ಸೀತಾ ಮಾತೆಯನ್ನು ಲಕ್ಷ್ಮಣ ಕಾಡಿಗೆ ತಂದು ಬಿಡುವ ದೃಶ್ಯ, ವಾಲ್ಮಿಕಿ ಋಷಿ ಸೀತೆಗೆ ಆಶ್ರಯ ನೀಡುವುದು, ಸೀತಾಮಾತೆ ಲವ-ಕುಶರನ್ನು ಆರೈಕೆ ಮಾಡುವ ದೃಶ್ಯ, ವಾಲ್ಮಿಕಿ ಋಷಿಗಳು ವಿದ್ಯೆ, ಬಿಲ್ವಿದ್ಯೆ ಕಲಿಸುವ ದೃಶ್ಯ, ರಾಮ ಬಿಟ್ಟ ಅಶ್ವಮೇಧಯಾಗದ ಕುದುರೆಯನ್ನು ಲವ-ಕುಶತು ಕಟ್ಟುವ ದೃಶ್ಯ, ಲವ-ಕುಶರೊಂದಿಗೆ ಲಕ್ಷ್ಮಣ, ಭರತ, ಶತ್ರುಘ್ನ ಯುದ್ಧಕ್ಕೆ ಬಂದು ಸೋಲುವ ದೃಶ್ಯ, ವಾನರ ಸೇನೆಯೊಂದಿಗೆ ಯುದ್ಧ, ಕೊನೆಗೆ ರಾಮನ ಜತೆ ಲವ-ಕುಶರ ಯುದ್ಧದ ದೃಶ್ಯ ಹೀಗೆ ಎಂಟು ಥೀಮ್ ಗಳಿಗೆ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ.</p>.<p><strong>ರಂಗಾಯಣ ಕಲಾವಿದರು:</strong></p>.<p>ಧಾರವಾಡದ ರಂಗಾಯಣ ಕಲಾವಿದರ ಸಹಕಾರ ಪಡೆಯಲಾಗಿದ್ದು, ಅವರೇ ಸಾಹಿತ್ಯ ರಚಿಸಿದ್ದಾರೆ. ಬಳಿಕ ರೇಡಿಯೋ ವಾಚಕರ ನೆರವಿನಿಂದ ಪ್ರತಿ ಘಟನೆಯ ಸಾಹಿತ್ಯದ ಧ್ವನಿ ಮುದ್ರಿಸಿ ಅಳವಡಿಸಲಾಗಿದೆ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ ತಿಳಿಸಿದರು.</p>.<p>₹80 ಲಕ್ಷ ವೆಚ್ಚದಲ್ಲಿ ಇಡೀ ಉದ್ಯಾನಕ್ಕೆ ಸೌರವಿದ್ಯುತ್ ಚಾಲಿತ ಪಾಥ್ ವೇ ಲೈಟಿಂಗ್ ಹಾಗೂ ಧ್ವನಿ ವ್ಯವಸ್ಥೆ ಅಳವಡಿಸಲಾಗಿದೆ. ಐದು ವರ್ಷಗಳ ಕಾಲ ನಿರ್ವಹಣೆಯೂ ಸೇರಿದೆ.</p>.<p>ಎಂಟು ಥೀಮ್ ಗಳಿಗೆ ಧ್ವನಿ ವ್ಯವಸ್ಥೆ ಅಳವಡಿಕೆ ₹80 ಲಕ್ಷ ವೆಚ್ಚದಲ್ಲಿ ಸೌರವಿದ್ಯುತ್ ಚಾಲಿತ ದೀಪದ ವ್ಯವಸ್ಥೆ ಧಾರವಾಡದ ರಂಗಾಯಣ ಕಲಾವಿದರ ಸಹಕಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>