<p><strong>ವಿಜಯಪುರ: </strong>ಸೈಕಲ್ನಲ್ಲಿ ಅಮರನಾಥಯಾತ್ರೆ ಕೈಗೊಂಡಿರುವ ಬೆಂಗಳೂರಿನ ರಾಧಕೃಷ್ಣ ಎಂಬ ಸಾಧು ನಗರಕ್ಕೆ ಮಂಗಳವಾರ ಆಗಮಿಸಿದರು.</p>.<p>ಇಲ್ಲಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೂಮಾಲೆ ಹಾಕುವ ಮೂಲಕ ಸ್ವಾಗತ ಕೋರಿ, ಬೀಳ್ಕೊಟ್ಟರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಸಾಧು, ಜೂನ್ 11ರಿಂದ ಯಾತ್ರೆ ಆರಂಭಿಸಿದ್ದು, ಜುಲೈ 21ಕ್ಕೆ ಅಮರನಾಥ ತಲುಪುವ ಉದ್ದೇಶ ಹೊಂದಿದ್ದೇನೆ. ಆಗಸ್ಟ್3ರ ವರೆಗೆ ಅಮರನಾಥದಲ್ಲೇ ಇದ್ದು, ಬಳಿಕ ಮರಳುತ್ತೇನೆ ಎಂದರು.</p>.<p>ಬೆಂಗಳೂರಿನಿಂದ ಹೊರಟು ದೊಡ್ಡಬಳ್ಳಾಪುರ, ಹಿಂದೂಪುರ, ಪಾವಗಡ, ಕುಷ್ಠಗಿ, ವಿಜಯಪುರ, ಸೊಲ್ಲಾಪುರ, ಜೈಪುರ, ಇಂದೋರ್, ಉಜ್ಜೈನಿ ಮೂಲಕವಾಗಿ ಅಮರನಾಥಕ್ಕೆ ಸೈಕಲ್ನಲ್ಲಿ ತೆರಳುತ್ತಿರುವುದಾಗಿ ಹೇಳಿದರು.</p>.<p>ಪ್ರತಿ ದಿನ 60 ಕಿ.ಮೀ.ದೂರ ಕ್ರಮಿಸುತ್ತೇನೆ. ಭಕ್ತರ ಮನೆಯಲ್ಲಿ ಆಶ್ರಯ ಪಡೆದು, ಅಲ್ಲಿಯೇ ಊಟೋಪಹಾರ ಮಾಡುತ್ತೇನೆ ಎಂದು ಹೇಳಿದರು.</p>.<p>ಯಾತ್ರೆಯ ಉದ್ದಕ್ಕೂ ಸ್ವಚ್ಛತೆ ಬಗ್ಗೆ ಜಾಗೃತಿ ಮತ್ತು ಪ್ಲಾಸ್ಟಿಕ್, ಗುಟ್ಕಾ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದರು.</p>.<p>ಈ ಹಿಂದೆ ಪಾದಯಾತ್ರೆ ಮೂಲಕ ಚಾರ್ಧಾಮ್ ಯಾತ್ರೆ, ಭಾರತ ದರ್ಶನ ಯಾತ್ರೆ ಮಾಡಿದ್ದೇನೆ ಎಂದು ಹೇಳಿದರು. ಬಿಜೆಪಿ ಮುಖಂಡ ರಾಹುಲ್ ಜಾದವ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಸೈಕಲ್ನಲ್ಲಿ ಅಮರನಾಥಯಾತ್ರೆ ಕೈಗೊಂಡಿರುವ ಬೆಂಗಳೂರಿನ ರಾಧಕೃಷ್ಣ ಎಂಬ ಸಾಧು ನಗರಕ್ಕೆ ಮಂಗಳವಾರ ಆಗಮಿಸಿದರು.</p>.<p>ಇಲ್ಲಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೂಮಾಲೆ ಹಾಕುವ ಮೂಲಕ ಸ್ವಾಗತ ಕೋರಿ, ಬೀಳ್ಕೊಟ್ಟರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಸಾಧು, ಜೂನ್ 11ರಿಂದ ಯಾತ್ರೆ ಆರಂಭಿಸಿದ್ದು, ಜುಲೈ 21ಕ್ಕೆ ಅಮರನಾಥ ತಲುಪುವ ಉದ್ದೇಶ ಹೊಂದಿದ್ದೇನೆ. ಆಗಸ್ಟ್3ರ ವರೆಗೆ ಅಮರನಾಥದಲ್ಲೇ ಇದ್ದು, ಬಳಿಕ ಮರಳುತ್ತೇನೆ ಎಂದರು.</p>.<p>ಬೆಂಗಳೂರಿನಿಂದ ಹೊರಟು ದೊಡ್ಡಬಳ್ಳಾಪುರ, ಹಿಂದೂಪುರ, ಪಾವಗಡ, ಕುಷ್ಠಗಿ, ವಿಜಯಪುರ, ಸೊಲ್ಲಾಪುರ, ಜೈಪುರ, ಇಂದೋರ್, ಉಜ್ಜೈನಿ ಮೂಲಕವಾಗಿ ಅಮರನಾಥಕ್ಕೆ ಸೈಕಲ್ನಲ್ಲಿ ತೆರಳುತ್ತಿರುವುದಾಗಿ ಹೇಳಿದರು.</p>.<p>ಪ್ರತಿ ದಿನ 60 ಕಿ.ಮೀ.ದೂರ ಕ್ರಮಿಸುತ್ತೇನೆ. ಭಕ್ತರ ಮನೆಯಲ್ಲಿ ಆಶ್ರಯ ಪಡೆದು, ಅಲ್ಲಿಯೇ ಊಟೋಪಹಾರ ಮಾಡುತ್ತೇನೆ ಎಂದು ಹೇಳಿದರು.</p>.<p>ಯಾತ್ರೆಯ ಉದ್ದಕ್ಕೂ ಸ್ವಚ್ಛತೆ ಬಗ್ಗೆ ಜಾಗೃತಿ ಮತ್ತು ಪ್ಲಾಸ್ಟಿಕ್, ಗುಟ್ಕಾ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದರು.</p>.<p>ಈ ಹಿಂದೆ ಪಾದಯಾತ್ರೆ ಮೂಲಕ ಚಾರ್ಧಾಮ್ ಯಾತ್ರೆ, ಭಾರತ ದರ್ಶನ ಯಾತ್ರೆ ಮಾಡಿದ್ದೇನೆ ಎಂದು ಹೇಳಿದರು. ಬಿಜೆಪಿ ಮುಖಂಡ ರಾಹುಲ್ ಜಾದವ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>