<p><strong>ತಾಳಿಕೋಟೆ</strong>: ಇಲ್ಲಿನ ಪಟ್ಟಣದ ಜನರಿಗೆ ಸರಬರಾಜು ಆಗಬೇಕಿದ್ದ ಶುದ್ಧ ಕುಡಿಯುವ ನೀರು ಸಿಬ್ಬಂದಿ ನಿರ್ಲಕ್ಷ್ಯದಿಂದ ಪೋಲಾಗುತ್ತಿದೆ.</p>.<p>ಶುದ್ಧೀಕರಣ ಘಟಕದಲ್ಲಿ ನೀರು ಸಂಸ್ಕರಿಸಿದ ಬಳಿಕ ಅದನ್ನು ಓವರ್ ಹೆಡ್ ಟ್ಯಾಂಕ್ಗೆ ಏರಿಸಿ ಅಲ್ಲಿಂದ ಜನತೆಗೆ ಪೂರೈಕೆ ಮಾಡಲಾಗುತ್ತದೆ. ಆದರೆ ಟ್ಯಾಂಕ್ ತುಂಬಿದರೂ ಬಂದ್ ಮಾಡದೇ ಇರುವುದರಿಂದ ಐದಾರು ದಿನಗಳಿಂದ ನೀರು ನೆಲ ಸೇರುತ್ತಿದೆ. ಈ ಕುರಿತು ಹಲವು ಬಾರಿ ವಿಡಿಯೊ ಸಹಿತ ಪುರಸಭೆ ಮುಖ್ಯಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ತಿಂಗಳಲ್ಲಿ ಕನಿಷ್ಠ ಮೂರುನಾಲ್ಕು ಬಾರಿ ಇದು ಪುನರಾವರ್ತನೆ ಆಗುತ್ತಲೇ ಇರುತ್ತದೆ.</p>.<p>ಇದು ಸೊಳ್ಳೆಗಳ ಹುಟ್ಟುವಿಕೆಗೂ ಕಾರಣವಾಗುತ್ತಿದೆ. ಸುತ್ತ ಕಸದ ರಾಶಿಯೂ ಬೀಳುತ್ತಿದೆ. ಇದನ್ನು ಸ್ವಚ್ಛಗೊಳಿಸಬೇಕು.</p>.<p>ಟ್ಯಾಂಕ್ ಸುತ್ತ ನೀರು ನಿಂತು ಕೆರೆಯಾಗಿ ಪರಿಣಮಿಸಿದೆ. ಸುಮಾರು 100 ಮೀಟರ್ ವರೆಗೂ ನೀರು ವ್ಯಾಪಿಸುತ್ತದೆ. ಇದಕ್ಕಾಗಿ ವ್ಯಯವಾಗುವ ಜನರ ತೆರಿಗೆ ಹಣ, ವಿದ್ಯುತ್ ಉಳಿಕೆಯಾಗಬೇಕು.</p>.<p><strong>ಪರಪ್ಪ ಸಜ್ಜನ, ಎ.ಜಿ.ದೇಶಪಾಂಡೆ, ಸ್ಥಳೀಯ ನಿವಾಸಿಗಳು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಳಿಕೋಟೆ</strong>: ಇಲ್ಲಿನ ಪಟ್ಟಣದ ಜನರಿಗೆ ಸರಬರಾಜು ಆಗಬೇಕಿದ್ದ ಶುದ್ಧ ಕುಡಿಯುವ ನೀರು ಸಿಬ್ಬಂದಿ ನಿರ್ಲಕ್ಷ್ಯದಿಂದ ಪೋಲಾಗುತ್ತಿದೆ.</p>.<p>ಶುದ್ಧೀಕರಣ ಘಟಕದಲ್ಲಿ ನೀರು ಸಂಸ್ಕರಿಸಿದ ಬಳಿಕ ಅದನ್ನು ಓವರ್ ಹೆಡ್ ಟ್ಯಾಂಕ್ಗೆ ಏರಿಸಿ ಅಲ್ಲಿಂದ ಜನತೆಗೆ ಪೂರೈಕೆ ಮಾಡಲಾಗುತ್ತದೆ. ಆದರೆ ಟ್ಯಾಂಕ್ ತುಂಬಿದರೂ ಬಂದ್ ಮಾಡದೇ ಇರುವುದರಿಂದ ಐದಾರು ದಿನಗಳಿಂದ ನೀರು ನೆಲ ಸೇರುತ್ತಿದೆ. ಈ ಕುರಿತು ಹಲವು ಬಾರಿ ವಿಡಿಯೊ ಸಹಿತ ಪುರಸಭೆ ಮುಖ್ಯಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ತಿಂಗಳಲ್ಲಿ ಕನಿಷ್ಠ ಮೂರುನಾಲ್ಕು ಬಾರಿ ಇದು ಪುನರಾವರ್ತನೆ ಆಗುತ್ತಲೇ ಇರುತ್ತದೆ.</p>.<p>ಇದು ಸೊಳ್ಳೆಗಳ ಹುಟ್ಟುವಿಕೆಗೂ ಕಾರಣವಾಗುತ್ತಿದೆ. ಸುತ್ತ ಕಸದ ರಾಶಿಯೂ ಬೀಳುತ್ತಿದೆ. ಇದನ್ನು ಸ್ವಚ್ಛಗೊಳಿಸಬೇಕು.</p>.<p>ಟ್ಯಾಂಕ್ ಸುತ್ತ ನೀರು ನಿಂತು ಕೆರೆಯಾಗಿ ಪರಿಣಮಿಸಿದೆ. ಸುಮಾರು 100 ಮೀಟರ್ ವರೆಗೂ ನೀರು ವ್ಯಾಪಿಸುತ್ತದೆ. ಇದಕ್ಕಾಗಿ ವ್ಯಯವಾಗುವ ಜನರ ತೆರಿಗೆ ಹಣ, ವಿದ್ಯುತ್ ಉಳಿಕೆಯಾಗಬೇಕು.</p>.<p><strong>ಪರಪ್ಪ ಸಜ್ಜನ, ಎ.ಜಿ.ದೇಶಪಾಂಡೆ, ಸ್ಥಳೀಯ ನಿವಾಸಿಗಳು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>