<p><strong>ವಿಜಯಪುರ: </strong>‘ದೇಶದ ಬಡವರ ಹಸಿವು ನೀಗಿಸಿದ ಮಹಾನ್ ಪುರುಷ ಡಾ.ಬಾಬು ಜಗಜೀವನರಾಂ. ಇವರು ಪ್ರತಿಪಾದಿಸಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಪೋತೆ ಅಭಿಪ್ರಾಯಪಟ್ಟರು.</p>.<p>ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 112ನೇ ಜಯಂತಿಯಲ್ಲಿ ಅವರು ಮಾತನಾಡಿದರು.</p>.<p>‘ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತು ಮುನ್ನಡೆದಾಗ ಮಾತ್ರ, ಧ್ವನಿ ಇಲ್ಲದ ಸಮುದಾಯಕ್ಕೆ ಜೀವ ತುಂಬಿದ ಬಾಬು ಜಗಜೀವನರಾಂ ಅವರಂಥಹ ಮಹಾನ್ ವ್ಯಕ್ತಿಗಳಿಗೆ ಇಂತಹ ಒಂದು ದಿನವನ್ನು ಅರ್ಪಿಸಿದಂತಾಗುತ್ತದೆ’ ಎಂದರು.</p>.<p>‘ಜಾತಿ ವ್ಯವಸ್ಥೆ ಬದಲಾಗಬೇಕಾದರೆ ವಿದ್ಯಾವಂತರ ಮನಸ್ಥಿತಿಗಳು ಬದಲಾಗಬೇಕು. ಮನಸ್ಥಿತಿಗಳು ಬದಲಾಗದ ಹೊರತು ಯಾವ ಕಾನೂನು ಕ್ರಮಗಳು ಕೂಡ ಜಾತಿಯತೆಯನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಇಂತಹ ಮನಸ್ಥಿತಿಗಳನ್ನು ಬದಲಾಯಿಸುವಲ್ಲಿ ಬಾಬು ಜಗಜೀವನರಾಂ ಅವರಂಥಹ ಮಹಾನ್ ವ್ಯಕ್ತಿಗಳ ತ್ಯಾಗ ದೊಡ್ಡದಿದೆ’ ಎಂದರು.</p>.<p>ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ ‘ಜಾತಿಗೂ ಪ್ರತಿಭೆಗೂ ತುಲನೆ ಮಾಡುವಂತಹ ಪ್ರಸ್ತಾಪದ ನಿಲುವುಗಳ ಬಗ್ಗೆ ಅರಿತುಕೊಂಡು, ಸಮಾನತೆಯ ಛಾಯೆಯನ್ನು ಮೂಡಿಸಬೇಕಿದೆ’ ಎಂದು ಹೇಳಿದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಎಂ.ಜ್ಯೋತಿ, ಡಾ.ಎಂ.ಪಿ.ಬಳಿಗಾರ, ಡಾ.ರಮೇಶ ಸೋನಕಾಂಬಳೆ, ಡಾ.ಉದಯಕುಮಾರ ಕುಲಕರ್ಣಿ, ಡಾ.ಲಕ್ಷ್ಮೀದೇವಿ, ಡಾ.ಶಾಂತಾದೇವಿ, ಡಾ.ಕಲಾವತಿ ಕಾಂಬಳೆ, ಡಾ.ಶ್ವೇತಾ, ಡಾ.ನಾಗರಾಜ್, ಡಾ.ಪ್ರಕಾಶ ಬಡಿಗೇರ, ಅಶ್ವಿನಿ, ಡಾ.ಭಾರತಿ ಗಾಣಿಗೇರ, ಡಾ.ಯಲ್ಲಪ್ಪ ಉಪಸ್ಥಿತರಿದ್ದರು.</p>.<p>ವಿ.ವಿ.ಯ ಸಂಗೀತ ಅಧ್ಯಯನ ವಿಭಾಗ ಮತ್ತು ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕ ಡಾ.ಸಕ್ಪಾಲ ಹೂವಣ್ಣ ಸ್ವಾಗತಿಸಿ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಜ್ಯೋತಿಲಕ್ಷ್ಮೀ ಇರಸುರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>‘ದೇಶದ ಬಡವರ ಹಸಿವು ನೀಗಿಸಿದ ಮಹಾನ್ ಪುರುಷ ಡಾ.ಬಾಬು ಜಗಜೀವನರಾಂ. ಇವರು ಪ್ರತಿಪಾದಿಸಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಪೋತೆ ಅಭಿಪ್ರಾಯಪಟ್ಟರು.</p>.<p>ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 112ನೇ ಜಯಂತಿಯಲ್ಲಿ ಅವರು ಮಾತನಾಡಿದರು.</p>.<p>‘ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತು ಮುನ್ನಡೆದಾಗ ಮಾತ್ರ, ಧ್ವನಿ ಇಲ್ಲದ ಸಮುದಾಯಕ್ಕೆ ಜೀವ ತುಂಬಿದ ಬಾಬು ಜಗಜೀವನರಾಂ ಅವರಂಥಹ ಮಹಾನ್ ವ್ಯಕ್ತಿಗಳಿಗೆ ಇಂತಹ ಒಂದು ದಿನವನ್ನು ಅರ್ಪಿಸಿದಂತಾಗುತ್ತದೆ’ ಎಂದರು.</p>.<p>‘ಜಾತಿ ವ್ಯವಸ್ಥೆ ಬದಲಾಗಬೇಕಾದರೆ ವಿದ್ಯಾವಂತರ ಮನಸ್ಥಿತಿಗಳು ಬದಲಾಗಬೇಕು. ಮನಸ್ಥಿತಿಗಳು ಬದಲಾಗದ ಹೊರತು ಯಾವ ಕಾನೂನು ಕ್ರಮಗಳು ಕೂಡ ಜಾತಿಯತೆಯನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಇಂತಹ ಮನಸ್ಥಿತಿಗಳನ್ನು ಬದಲಾಯಿಸುವಲ್ಲಿ ಬಾಬು ಜಗಜೀವನರಾಂ ಅವರಂಥಹ ಮಹಾನ್ ವ್ಯಕ್ತಿಗಳ ತ್ಯಾಗ ದೊಡ್ಡದಿದೆ’ ಎಂದರು.</p>.<p>ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ ‘ಜಾತಿಗೂ ಪ್ರತಿಭೆಗೂ ತುಲನೆ ಮಾಡುವಂತಹ ಪ್ರಸ್ತಾಪದ ನಿಲುವುಗಳ ಬಗ್ಗೆ ಅರಿತುಕೊಂಡು, ಸಮಾನತೆಯ ಛಾಯೆಯನ್ನು ಮೂಡಿಸಬೇಕಿದೆ’ ಎಂದು ಹೇಳಿದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಎಂ.ಜ್ಯೋತಿ, ಡಾ.ಎಂ.ಪಿ.ಬಳಿಗಾರ, ಡಾ.ರಮೇಶ ಸೋನಕಾಂಬಳೆ, ಡಾ.ಉದಯಕುಮಾರ ಕುಲಕರ್ಣಿ, ಡಾ.ಲಕ್ಷ್ಮೀದೇವಿ, ಡಾ.ಶಾಂತಾದೇವಿ, ಡಾ.ಕಲಾವತಿ ಕಾಂಬಳೆ, ಡಾ.ಶ್ವೇತಾ, ಡಾ.ನಾಗರಾಜ್, ಡಾ.ಪ್ರಕಾಶ ಬಡಿಗೇರ, ಅಶ್ವಿನಿ, ಡಾ.ಭಾರತಿ ಗಾಣಿಗೇರ, ಡಾ.ಯಲ್ಲಪ್ಪ ಉಪಸ್ಥಿತರಿದ್ದರು.</p>.<p>ವಿ.ವಿ.ಯ ಸಂಗೀತ ಅಧ್ಯಯನ ವಿಭಾಗ ಮತ್ತು ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕ ಡಾ.ಸಕ್ಪಾಲ ಹೂವಣ್ಣ ಸ್ವಾಗತಿಸಿ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಜ್ಯೋತಿಲಕ್ಷ್ಮೀ ಇರಸುರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>