<p><strong>ವಿಜಯಪುರ:</strong> ‘ಬಬಲೇಶ್ವರದಲ್ಲಿ ನಡೆದ ಹಿಂದುತ್ವವಾದಿಗಳ ಸಮ್ಮೇಳನದಲ್ಲಿ ಬಸವಾದಿ ಶರಣರನ್ನು ಹಿಂದೂಗಳೆಂದು, ವೇದಪ್ರಿಯರೆಂದು, ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಕರನ್ನು ಬುಡುಬುಡಿಕೆಗಳೆಂದು ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೀಡಿರುವ ಹೇಳಿಕೆ ಖಂಡನೀಯ. ಬಸವಾದಿ ಶರಣರು ಹಿಂದೂಗಳಲ್ಲ’ ಎಂದು ಚಿಕ್ಕಹೆಸರೂರು ಶ್ರೀಕೊಡೇಕಲ್ಲ ಬಸವೇಶ್ವರ ಶಾಖಾ ಮಠದ ಅಮರಜ್ಞಾನ ಪೀಠ ಅಧ್ಯಕ್ಷರಾದ ಆರ್. ಮಾನಸಯ್ಯ ಹೇಳಿದ್ದಾರೆ.</p>.<p>‘ಕನೇರಿ ಸ್ವಾಮೀಜಿ ತಮ್ಮ ವಿಷಪೂರಿತ ಹೇಳಿಕೆ ಮೂಲಕ ಮಹಾನ್ ಶರಣ ಚಳವಳಿಗೆ, ಮತ್ತದರ ನಾಯಕ ಬಸವಣ್ಣನವರಿಗೆ, ಸಮಸ್ತ ಲಿಂಗಾಯತರಿಗೆ ಮತ್ತು ಲಿಂಗಾಯತ ಮಠಗಳಿಗೆ ಅವಮಾನಿಸಿ ದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಸ್ವಾಮೀಜಿ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ, ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<p>‘ಕನೇರಿ ಸ್ವಾಮೀಜಿ ಮಾಡಿದ ಅವಮಾನವನ್ನು ಮತ್ತು ಶರಣ ನಿಂದನೆಯನ್ನು ಶರಣಸಂಕುಲ ಸಹಿಸಿಕೊಂಡಲ್ಲಿ, ಕನೇರಿ ಸ್ವಾಮೀಜಿ ಜೊತೆ ನಾವೂ ಬಸವದ್ರೋಹಿಗಳು ಆಗುತ್ತೇವೆ ಎಂದು ಭಾವಿಸಬೇಕಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ, ಮತ್ತವರ ಸಮಾನತೆ ಚಳವಳಿಯ ರಕ್ಷಣೆಗಾಗಿ ಎಲ್ಲಾ ವಿಧದ ಲಿಂಗಾಯತರು (ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ) ನಾಡಿನ ಉದ್ದಗಲಕ್ಕೂ ಹೋರಾಟ ಮಾಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಬಬಲೇಶ್ವರದಲ್ಲಿ ನಡೆದ ಹಿಂದುತ್ವವಾದಿಗಳ ಸಮ್ಮೇಳನದಲ್ಲಿ ಬಸವಾದಿ ಶರಣರನ್ನು ಹಿಂದೂಗಳೆಂದು, ವೇದಪ್ರಿಯರೆಂದು, ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಕರನ್ನು ಬುಡುಬುಡಿಕೆಗಳೆಂದು ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೀಡಿರುವ ಹೇಳಿಕೆ ಖಂಡನೀಯ. ಬಸವಾದಿ ಶರಣರು ಹಿಂದೂಗಳಲ್ಲ’ ಎಂದು ಚಿಕ್ಕಹೆಸರೂರು ಶ್ರೀಕೊಡೇಕಲ್ಲ ಬಸವೇಶ್ವರ ಶಾಖಾ ಮಠದ ಅಮರಜ್ಞಾನ ಪೀಠ ಅಧ್ಯಕ್ಷರಾದ ಆರ್. ಮಾನಸಯ್ಯ ಹೇಳಿದ್ದಾರೆ.</p>.<p>‘ಕನೇರಿ ಸ್ವಾಮೀಜಿ ತಮ್ಮ ವಿಷಪೂರಿತ ಹೇಳಿಕೆ ಮೂಲಕ ಮಹಾನ್ ಶರಣ ಚಳವಳಿಗೆ, ಮತ್ತದರ ನಾಯಕ ಬಸವಣ್ಣನವರಿಗೆ, ಸಮಸ್ತ ಲಿಂಗಾಯತರಿಗೆ ಮತ್ತು ಲಿಂಗಾಯತ ಮಠಗಳಿಗೆ ಅವಮಾನಿಸಿ ದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಸ್ವಾಮೀಜಿ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ, ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<p>‘ಕನೇರಿ ಸ್ವಾಮೀಜಿ ಮಾಡಿದ ಅವಮಾನವನ್ನು ಮತ್ತು ಶರಣ ನಿಂದನೆಯನ್ನು ಶರಣಸಂಕುಲ ಸಹಿಸಿಕೊಂಡಲ್ಲಿ, ಕನೇರಿ ಸ್ವಾಮೀಜಿ ಜೊತೆ ನಾವೂ ಬಸವದ್ರೋಹಿಗಳು ಆಗುತ್ತೇವೆ ಎಂದು ಭಾವಿಸಬೇಕಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ, ಮತ್ತವರ ಸಮಾನತೆ ಚಳವಳಿಯ ರಕ್ಷಣೆಗಾಗಿ ಎಲ್ಲಾ ವಿಧದ ಲಿಂಗಾಯತರು (ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ) ನಾಡಿನ ಉದ್ದಗಲಕ್ಕೂ ಹೋರಾಟ ಮಾಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>