ಎಪಿಎಂಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ರೈತ ಮುಖಂಡ ಅರವಿಂದ ಕುಲಕರ್ಣಿ, ಜಯಾನಂದ ತಾಳಿಕೋಟಿ, ಲಾಲಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆಯ ವ್ಯಾಪಾರಸ್ಥರ ಅಧ್ಯಕ್ಷ ವಿ.ಡಿ.ಕರ್ಪೂರಮಠ, ತರಕಾರಿ ವ್ಯಾಪಾರಸ್ಥರ ಸಂಘದ ಮುಂಖಂಡ ಸಲೀಂ ಸಗರ, ಫಾರೂಖ್ ಬಾಗವಾನ್, ಆಟೋ ಯೂನಿಯನ್ ಮುಖಂಡರಾದ ನೂರ್ಅಹ್ಮರ್, ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ. ಸಿ. ಮುಲ್ಲಾ, ಫಯಾಜ್ ಕಲಾದಗಿ, ಸ್ಲಂ ಅಬಿವೃದ್ಧಿ ಸಮಿತಿ ಮುಖಂಡ ಅಕ್ರಂ ಮಾಶ್ಯಾಳಕರ, ದಸ್ತಗೀರ ಉಕ್ಕಲಿ, ಜನವಾದಿ ಮಹಿಳಾ ಸಂಘಟನೆ ಮುಂಖಂಡರಾದ ಸುರೇಖಾ ರಜಪೂತ, ಬ್ಯಾಂಕ್ ಯೂನಿಯನ್ ನಿವೃತ್ತ ಮುಖಂಡರಾದ ಸಿ.ಎ.ಗಂಟೆಪ್ಪಗೋಳ, ಟಿಪ್ಪು ಕ್ರಾಂತಿ ಸೇನೆ ಮುಖಂಡರಾದ ರಿಜ್ವಾನ್ ಮುಲ್ಲ, ನಿರ್ಮಲಾ ಹೊಸಮನಿ, ದಲಿತಪರ ಸಂಘಟನೆಯ ಮುಖಂಡ ಶ್ರೀನಾಥ ಪೂಜಾರಿ, ಕಾರ್ಮಿಕ ಸಂಘಟನೆ ಮುಖಂಡ ಲಕ್ಷ್ಮಣ ಹಂದ್ರಾಳ, ಮಲ್ಲಿಕಾರ್ಜುನ ಎಚ್. ಟಿ, ರೈತ ಮುಖಂಡ ಬಿ.ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ, ಶಕ್ತಿಕುಮಾರ, ಬಾಳು ಜೇವೂರ, ಪ್ರಗತಿಪರ ಸಂಘಟನೆಗಳ ವೇದಿಕೆಯ ಮುಖಂಡ ಸಿದ್ದಲಿಂಗ ಬಾಗೇವಾಡಿ ಹಾಗೂ ನಿವೇಶನ ರಹಿತರ ಸಂಘಟನೆ ಮುಖಂಡರಾದ ಪೀರಾ ಜಮಾದಾರ, ಡಾ. ಗುರಿಕಾರ ಅವರು ಅಂದು ವ್ಯಾಪಾರ ವಹಿವಾಟು ಹಾಗೂ ದಿನನಿತ್ಯದ ಕೆಲಸ ಕಾರ್ಯಗಳು ಸ್ಥಗಿತಗೊಳಿಸಿ ವಿಜಯಪುರ ಬಂದ್ ಮಾಡುವುದಾಗಿ ಬೆಂಬಲ ಸೂಚಿಸಿದರು.