<p><strong>ಹೊರ್ತಿ</strong>: ಗ್ರಾಮದ ಆರಾಧ್ಯ ದೇವರಾದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಜಾನುವಾರುಗಳ ಜಾತ್ರೆ ಬಲು ಜೋರಾಗಿ ನಡೆದಿದ್ದು, ಬೆಲೆಗಳ ತಕ್ಕಂತೆ ಜಾನುವಾರುಗಳು ಮಾರಾಟವಾದವು.</p>.<p>ಸುಮಾರು 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ರಾಸುಗಳು ಕೂಡಿದ್ದರಿಂದ ಜಾತ್ರೆ ಜೋರಾಗಿತ್ತು.</p>.<p>‘ಪ್ರತಿ ಸಲಕ್ಕಿಂತ ಈ ಸಲ ದೊಡ್ಡ ಪ್ರಮಾಣದಲ್ಲಿ ಎತ್ತು, ಹೋರಿ, ಹಸುಗಳು ಮಾರಾಟಕ್ಕೆ ಸೇರಿದ್ದವು. ಆದರೆ, ಈ ಸಲ ವರ್ಷಕ್ಕಿಂತ ಕಾರ್ನಟಕ- ಮಹಾರಾಷ್ಟ್ರ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಸೇರಿದ್ದರಿಂದ ಜಾತ್ರೆಯ ಸಡಗರ ಹೆಚ್ಚಿದೆ’ ಎಂದು ಗ್ರಾಮದ ರೈತ ಶ್ರೀಶೈಲ ಶಿವೂರ ಮತ್ತು ರೋಡಗಿ ಗ್ರಾಮದ ಸಿದ್ದರಾಮಪ್ಪ ಕಲ್ಲೂರಕರ ತಿಳಿಸಿದರು.</p>.<p>‘ಈ ಜಾತ್ರೆಯಲ್ಲಿ ಹೆಚ್ಚಾಗಿ ಖಿಲಾರಿ ರಾಸುಗಳು ಸೇರಿದ್ದು, ಅದರಂತೆ ಕಡಿಮೆ ಸಂಖ್ಯೆಯಲ್ಲಿ ಜವಾರಿ ರಾಸುಗಳು ಮತ್ತು ಇದೇ ತಳಿಯ ಹೋರಿಗಳು ವಿಶೇಷವಾಗಿ ಯುವ ರೈತರ ಗಮನ ಸೆಳೆಯುತ್ತಿವೆ. ಜರ್ಸಿ, ಖಿಲಾರಿ, ಜವಾರಿ ಆಕಳುಗಳು ಹೈನುಗಾರಿಕೆಯ ಗ್ರಾಹಕರನ್ನು ಸೆಳೆಯುತ್ತಿವೆ. ಹೋರಿಗಳು ಜೋಡಿಯೊಂದಕ್ಕೆ ₹1.50 ಲಕ್ಷದಿಂದ ₹1.80 ಲಕ್ಷದವರೆಗೆ ಬೆಲೆ ಹೊಂದಿವೆ’ ಎಂದು ಚಣೇಗಾಂವದ ಯುವ ರೈತ ಧನಸಿಂಗ್ ನಾಯಕ ಮತ್ತು ಇಂಚಗೇರಿ ತಾಂಡಾ-1ರ ರೈತ ರೇವು ರಾಠೋಡ, ಸುರೇಶ ವಡ್ಡರ ಹೇಳಿದರು.</p>.<p>‘ಖಿಲಾರಿ ಎತ್ತುಗಳು ಸೇರುತ್ತಿರುವ ಕಾರಣ ನಾವು ₹55 ಸಾವಿರಕ್ಕೆ ಒಂದು ಜತೆ ಖಿಲಾರಿ ಎತ್ತುಗಳನ್ನು ಖರೀದಿಸಿದ್ದೇವೆ. ಈ ಎತ್ತುಗಳು ಜೋರಾಗಿ ನಡೆಯುತ್ತವೆ. ಹೂಡಲು, ಬಿತ್ತಲು, ಎಡೆ ಕುಂಟೆ, ದೂರದ ಹೊಲಗಳಿಗೆ ತೆರಳಲು ಎತ್ತಿನ ಗಾಡಿಗೆ ಬಹಳಷ್ಟು ಅನೂಕೂಲಕರವಾಗಿವೆ’ ಎಂದು ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕಿನ ಕ್ಯಾರಕಲಕೊಪ್ಪ ಗ್ರಾಮದ ರೈತ ಸಂಜೀವಗೌಡ ಹೊಸಗೌಡರ ತಿಳಿಸಿದರು.</p>.<p>‘ಜಾತ್ರೆಯಲ್ಲಿ ರೈತರು ತಮ್ಮ ರಾಸುಗಳನ್ನು ಮಧ್ಯಮ ಬೆಲೆಗೆ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಈ ಬಾರಿ ನಮ್ಮ ವ್ಯಾಪಾರ ಕೂಡಾ ಉತ್ತಮ ರೀತಿಯಲ್ಲಿ ಆಗಿದೆ’ ಎಂದು ಸೊಲ್ಲಾಪುರ ಜಿಲ್ಲೆ, ಅಕ್ಕಲಕೋಟದ ದನಗಳ ವ್ಯಾಪಾರಿ ಮುಸಾಫ್ ಪಠಾಣ, ಯಾಕೂಬ್ ಶೇಕ್ ಮತ್ತು ರೈತರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊರ್ತಿ</strong>: ಗ್ರಾಮದ ಆರಾಧ್ಯ ದೇವರಾದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಜಾನುವಾರುಗಳ ಜಾತ್ರೆ ಬಲು ಜೋರಾಗಿ ನಡೆದಿದ್ದು, ಬೆಲೆಗಳ ತಕ್ಕಂತೆ ಜಾನುವಾರುಗಳು ಮಾರಾಟವಾದವು.</p>.<p>ಸುಮಾರು 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ರಾಸುಗಳು ಕೂಡಿದ್ದರಿಂದ ಜಾತ್ರೆ ಜೋರಾಗಿತ್ತು.</p>.<p>‘ಪ್ರತಿ ಸಲಕ್ಕಿಂತ ಈ ಸಲ ದೊಡ್ಡ ಪ್ರಮಾಣದಲ್ಲಿ ಎತ್ತು, ಹೋರಿ, ಹಸುಗಳು ಮಾರಾಟಕ್ಕೆ ಸೇರಿದ್ದವು. ಆದರೆ, ಈ ಸಲ ವರ್ಷಕ್ಕಿಂತ ಕಾರ್ನಟಕ- ಮಹಾರಾಷ್ಟ್ರ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಸೇರಿದ್ದರಿಂದ ಜಾತ್ರೆಯ ಸಡಗರ ಹೆಚ್ಚಿದೆ’ ಎಂದು ಗ್ರಾಮದ ರೈತ ಶ್ರೀಶೈಲ ಶಿವೂರ ಮತ್ತು ರೋಡಗಿ ಗ್ರಾಮದ ಸಿದ್ದರಾಮಪ್ಪ ಕಲ್ಲೂರಕರ ತಿಳಿಸಿದರು.</p>.<p>‘ಈ ಜಾತ್ರೆಯಲ್ಲಿ ಹೆಚ್ಚಾಗಿ ಖಿಲಾರಿ ರಾಸುಗಳು ಸೇರಿದ್ದು, ಅದರಂತೆ ಕಡಿಮೆ ಸಂಖ್ಯೆಯಲ್ಲಿ ಜವಾರಿ ರಾಸುಗಳು ಮತ್ತು ಇದೇ ತಳಿಯ ಹೋರಿಗಳು ವಿಶೇಷವಾಗಿ ಯುವ ರೈತರ ಗಮನ ಸೆಳೆಯುತ್ತಿವೆ. ಜರ್ಸಿ, ಖಿಲಾರಿ, ಜವಾರಿ ಆಕಳುಗಳು ಹೈನುಗಾರಿಕೆಯ ಗ್ರಾಹಕರನ್ನು ಸೆಳೆಯುತ್ತಿವೆ. ಹೋರಿಗಳು ಜೋಡಿಯೊಂದಕ್ಕೆ ₹1.50 ಲಕ್ಷದಿಂದ ₹1.80 ಲಕ್ಷದವರೆಗೆ ಬೆಲೆ ಹೊಂದಿವೆ’ ಎಂದು ಚಣೇಗಾಂವದ ಯುವ ರೈತ ಧನಸಿಂಗ್ ನಾಯಕ ಮತ್ತು ಇಂಚಗೇರಿ ತಾಂಡಾ-1ರ ರೈತ ರೇವು ರಾಠೋಡ, ಸುರೇಶ ವಡ್ಡರ ಹೇಳಿದರು.</p>.<p>‘ಖಿಲಾರಿ ಎತ್ತುಗಳು ಸೇರುತ್ತಿರುವ ಕಾರಣ ನಾವು ₹55 ಸಾವಿರಕ್ಕೆ ಒಂದು ಜತೆ ಖಿಲಾರಿ ಎತ್ತುಗಳನ್ನು ಖರೀದಿಸಿದ್ದೇವೆ. ಈ ಎತ್ತುಗಳು ಜೋರಾಗಿ ನಡೆಯುತ್ತವೆ. ಹೂಡಲು, ಬಿತ್ತಲು, ಎಡೆ ಕುಂಟೆ, ದೂರದ ಹೊಲಗಳಿಗೆ ತೆರಳಲು ಎತ್ತಿನ ಗಾಡಿಗೆ ಬಹಳಷ್ಟು ಅನೂಕೂಲಕರವಾಗಿವೆ’ ಎಂದು ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕಿನ ಕ್ಯಾರಕಲಕೊಪ್ಪ ಗ್ರಾಮದ ರೈತ ಸಂಜೀವಗೌಡ ಹೊಸಗೌಡರ ತಿಳಿಸಿದರು.</p>.<p>‘ಜಾತ್ರೆಯಲ್ಲಿ ರೈತರು ತಮ್ಮ ರಾಸುಗಳನ್ನು ಮಧ್ಯಮ ಬೆಲೆಗೆ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಈ ಬಾರಿ ನಮ್ಮ ವ್ಯಾಪಾರ ಕೂಡಾ ಉತ್ತಮ ರೀತಿಯಲ್ಲಿ ಆಗಿದೆ’ ಎಂದು ಸೊಲ್ಲಾಪುರ ಜಿಲ್ಲೆ, ಅಕ್ಕಲಕೋಟದ ದನಗಳ ವ್ಯಾಪಾರಿ ಮುಸಾಫ್ ಪಠಾಣ, ಯಾಕೂಬ್ ಶೇಕ್ ಮತ್ತು ರೈತರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>