ಗುರುಮಾತೆಯರಾದ ರಂಜಿತಾ ಹೆಗಡೆ, ಲೀಲಾ ಭಟ್ ಮಾತಾಜಿ, ರೇಖಾ ಹೂಗಾರ ಮತ್ತು ವಿದ್ಯಾರ್ಥಿಗಳು ಗೀತೆಯ 5ನೇ ಅಧ್ಯಾಯ ಪಠಿಸಿದರು. ಅರುಣ ಹುನಗುಂದ ಸ್ವಾಗತಿಸಿದರು. ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಪಡದಾಳಿ, ಬಸವರಾಜ ಬೆಳ್ಳಿಕಟ್ಟಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜ್ಞಾನಭಾರತಿ ಶಾಲೆಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ರಾಯರ ಮಠದವರೆಗೂ ಭಗವದ್ಗೀತೆಯನ್ನು ಸಾರೋಟಿನಲ್ಲಿಟ್ಟು ಶೋಭಾಯಾತ್ರೆ ನಡೆಸಲಾಯಿತು.