ಜಮೀನಿನ ಹದ, ಬಿತ್ತನೆ ಬೀಜ, ಬಿತ್ತನೆ ಕೂಲಿ, ರಸಗೊಬ್ಬರ, ಟ್ರ್ಯಾಕ್ಟರ್ ಕೂಲಿ, ಕೀಟನಾಶಕ ಸಿಂಪಡಣೆಗಾಗಿ ಲಕ್ಷಾಂತರ ರೂಪಾಯಿ ಸುರಿದಿದ್ದಾರೆ. ಇದರ ಮಧ್ಯೆ ಉತ್ತಮವಾಗಿ ನಾಟಿಕೊಳ್ಳದ ಹತ್ತಿ ಬೆಳೆ ಹರಗಿದ್ದಾರೆ. ಉತ್ತಮ ಇಳುವರಿಯ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ ಹಣ ಸುರಿದಿದ್ದಾರೆ. ಆದರೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಹೊಡೆತಕ್ಕೆ ಸಿಲುಕಿ ತೊಗರಿ ಇಳುವರಿಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ.