ನಗರದ ಹವ್ಯಾಸಿ ಸೈಕ್ಲಿಗಳು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಗರದ ಸಿದ್ದೇಶ್ವರ ದೇವಸ್ಥಾನ, ಗಾಂಧಿವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಆಝಾದ್ ರಸ್ತೆ, ರಾಮಮಂದಿರ ರಸ್ತೆ, ಅಮೀರ್ ಟಾಕೀಸ್ ಮಾರ್ಗವಾಗಿ ಅಕ್ಕಮಹಾದೇವಿ ರಸ್ತೆಯವರೆಗೆ ‘ಸೈಕಲ್ ತುಳಿಯಿರಿ, ಕೊರೊನಾ ಓಡಿಸಿ’, ‘ಸೈಕಲ್ ಬಳಸಿ, ಪರಿಸರ ಉಳಿಸಿ‘, ‘ಭಾರತ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಕೂಗುತ್ತಾ, ಸೈಕಲ್ ಜಾಥಾ ನಡೆಸಿದರು.