<p><strong>ಸಿಂದಗಿ:</strong> ಪಟ್ಟಣದ ಬಡಾವಣೆಗಳ ವಿವಿಧ ವಾರ್ಡ್ಗಳಲ್ಲಿ ನಿತ್ಯ 20-30 ಹಂದಿಗಳು ಸಾಯುತ್ತಿದ್ದು, ಬಡಾವಣೆಗಳಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಪುರಸಭೆ ಕಾರ್ಯಾಲಯದ ಸಿಬ್ಬಂದಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಂದಿಗಳ ಸಾಕಾಣಿಕೆ ಮಾಲೀಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ.</p>.<p>ಹಂದಿಗಳ ಸಾವಿನ ಕುರಿತು ಮತ್ತು ಹಂದಿಗಳ ಸಂಖ್ಯೆ ಹೆಚ್ಚಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪುರಸಭೆ ಕಾರ್ಯಾಲಯದಲ್ಲಿ ಹಂದಿಗಳ ಸಾಕಾಣಿಕೆ ಮಾಲೀಕರು ಹಾಗೂ ಪಶು ವೈದ್ಯರ ಸಭೆ ನಡೆಸಲಾಗಿತ್ತು. ಆದರೂ ಸಭೆಯ ಪರಿಣಾಮ ಮಾತ್ರ ಶೂನ್ಯವಾಗಿದೆ ಎಂದು ಪುರಸಭೆ ಅಧಿಕಾರಿಯೇ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಈಗಾಗಲೇ ಹಂದಿಗಳ ಸಾಕಾಣಿಕೆಯವರಿಗೆ ಎಚ್ಚರಿಕೆ ನೋಟಿಸು ನೀಡಲಾಗಿತ್ತು. ಮತ್ತೊಮ್ಮೆ ನೋಟಿಸ್ ನೀಡಿ ಹಂದಿಗಳನ್ನು ಹುಬ್ಬಳ್ಳಿ-ಪುಣೆಯಲ್ಲಿರುವ ಹಂದಿ ಹಿಡಿಯುವವರನ್ನು ಕರೆಯಿಸಿ ಬೇರೆಡೆ ಸಾಗಿಸುವ ಪ್ರಯತ್ನದಲ್ಲಿದ್ದೇವೆ ಎನ್ನುತ್ತಾರೆ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಉಸ್ತಾದ.<br><br>ನಿತ್ಯ ಪಟ್ಟಣದಲ್ಲಿ ಸಾಯುವ ಹಂದಿಗಳನ್ನು ಸಾಗಿಸಲು ಪ್ರತ್ಯೇಕ ಒಂದು ವಾಹನ ಸಿದ್ಧವಾಗಿರುತ್ತದೆ. ಹಂದಿಗಳನ್ನು ಸಾಗಿಸುವ ಪೌರ ಕಾರ್ಮಿಕರು ದುರ್ನಾತದಿಂದ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕೆಲಸ ಮಾಡುವ ಸಂದರ್ಭದಲ್ಲಿ <strong>ಪೌರ ಕಾರ್ಮಿಕರಿಗೆ </strong> ಪುರಸಭೆ ಕಾರ್ಯಾಲಯದಿಂದ ಸುರಕ್ಷಿತ ಸಾಧನ ಸಾಮಗ್ರಿಗಳು ನೀಡಬೇಕು. ಅವುಗಳಿಲ್ಲದೇ ಹಂದಿಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.</p>.<p>ಹಂದಿಗಳ ಸಾಕಾಣಿಕೆ ಮಾಲೀಕರ ನಿರ್ಲಕ್ಷ್ಯದಿಂದ ಹಂದಿಗಳ ಸಾವಿನ ಸಂಖ್ಯೆ ದಿನ, ದಿನಕ್ಕೆ ಹೆಚ್ಚುತ್ತಲೇ ಇದೆ. ಪುರಸಭೆ ಅಧಿಕಾರಿ ವರ್ಗ ಹಂದಿಗಳನ್ನು ಬೇರೆಡೆ ಸಾಗಿಸುವ ಕಾರ್ಯವನ್ನಾದರೂ ಬೇಗ ಮಾಡಬೇಕು ಎಂದು 23ನೆಯ ವಾರ್ಡ್ ಶಾಂತವೀರನಗರದ ನಿವಾಸಿ ವಿಜಯಕುಮಾರ ಪತ್ತಾರ ಒತ್ತಾಯಿಸಿದ್ದಾರೆ.</p>.<div><blockquote>ವಾರಕ್ಕೆ 80ಕ್ಕೂ ಅಧಿಕ ಹಂದಿಗಳು ಸತ್ತಿವೆ ಎಂದು ದೂರು ಬಂದಿದೆ. ಹಂದಿ ಸಾಕಾಣಿಕೆಯವರಿಗೆ ನೋಟಿಸ್ ಕೊಡಲಾಗಿದೆ </blockquote><span class="attribution">-ನಬಿರಸೂಲ ಉಸ್ತಾದ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ</span></div>.<div><blockquote>ಪಟ್ಟಣದಲ್ಲಿ ವಿವಿಧ ವಾರ್ಡ್ಗಳಲ್ಲಿ ಹಂದಿಗಳ ಸಾವು ಮುಂದುವರೆದಿದೆ. ಸತ್ತ ಹಂದಿಗಳನ್ನು ಎಲ್ಲೆಲ್ಲೊ ಎಸೆಯುತ್ತಾರೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ</blockquote><span class="attribution">- ಅಶೋಕ ಅಲ್ಲಾಪೂರ ನಗರ ಸುಧಾರಣಾ ವೇದಿಕೆ ಅಧ್ಯಕ್ಷ</span></div>.<div><blockquote>ಹಂದಿಗಳ ಸಾವಿಗೆ ಕಾರಣ ಹುಡುಕಲು ಸತ್ತ ಹಂದಿಯ ಪರೀಕ್ಷೆ ನಡೆಸಬೇಕಾಗುತ್ತದೆ. ನಂತರ ವ್ಯಾಕ್ಸಿನ್ ಚಿಕಿತ್ಸೆ ನೀಡಬಹುದು. ಪುರಸಭೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿತ್ತು</blockquote><span class="attribution">- ಡಾ.ಮಾರುತಿ ತಡ್ಲಗಿ ಮುಖ್ಯ ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ಪಟ್ಟಣದ ಬಡಾವಣೆಗಳ ವಿವಿಧ ವಾರ್ಡ್ಗಳಲ್ಲಿ ನಿತ್ಯ 20-30 ಹಂದಿಗಳು ಸಾಯುತ್ತಿದ್ದು, ಬಡಾವಣೆಗಳಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಪುರಸಭೆ ಕಾರ್ಯಾಲಯದ ಸಿಬ್ಬಂದಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಂದಿಗಳ ಸಾಕಾಣಿಕೆ ಮಾಲೀಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ.</p>.<p>ಹಂದಿಗಳ ಸಾವಿನ ಕುರಿತು ಮತ್ತು ಹಂದಿಗಳ ಸಂಖ್ಯೆ ಹೆಚ್ಚಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪುರಸಭೆ ಕಾರ್ಯಾಲಯದಲ್ಲಿ ಹಂದಿಗಳ ಸಾಕಾಣಿಕೆ ಮಾಲೀಕರು ಹಾಗೂ ಪಶು ವೈದ್ಯರ ಸಭೆ ನಡೆಸಲಾಗಿತ್ತು. ಆದರೂ ಸಭೆಯ ಪರಿಣಾಮ ಮಾತ್ರ ಶೂನ್ಯವಾಗಿದೆ ಎಂದು ಪುರಸಭೆ ಅಧಿಕಾರಿಯೇ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಈಗಾಗಲೇ ಹಂದಿಗಳ ಸಾಕಾಣಿಕೆಯವರಿಗೆ ಎಚ್ಚರಿಕೆ ನೋಟಿಸು ನೀಡಲಾಗಿತ್ತು. ಮತ್ತೊಮ್ಮೆ ನೋಟಿಸ್ ನೀಡಿ ಹಂದಿಗಳನ್ನು ಹುಬ್ಬಳ್ಳಿ-ಪುಣೆಯಲ್ಲಿರುವ ಹಂದಿ ಹಿಡಿಯುವವರನ್ನು ಕರೆಯಿಸಿ ಬೇರೆಡೆ ಸಾಗಿಸುವ ಪ್ರಯತ್ನದಲ್ಲಿದ್ದೇವೆ ಎನ್ನುತ್ತಾರೆ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಉಸ್ತಾದ.<br><br>ನಿತ್ಯ ಪಟ್ಟಣದಲ್ಲಿ ಸಾಯುವ ಹಂದಿಗಳನ್ನು ಸಾಗಿಸಲು ಪ್ರತ್ಯೇಕ ಒಂದು ವಾಹನ ಸಿದ್ಧವಾಗಿರುತ್ತದೆ. ಹಂದಿಗಳನ್ನು ಸಾಗಿಸುವ ಪೌರ ಕಾರ್ಮಿಕರು ದುರ್ನಾತದಿಂದ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕೆಲಸ ಮಾಡುವ ಸಂದರ್ಭದಲ್ಲಿ <strong>ಪೌರ ಕಾರ್ಮಿಕರಿಗೆ </strong> ಪುರಸಭೆ ಕಾರ್ಯಾಲಯದಿಂದ ಸುರಕ್ಷಿತ ಸಾಧನ ಸಾಮಗ್ರಿಗಳು ನೀಡಬೇಕು. ಅವುಗಳಿಲ್ಲದೇ ಹಂದಿಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.</p>.<p>ಹಂದಿಗಳ ಸಾಕಾಣಿಕೆ ಮಾಲೀಕರ ನಿರ್ಲಕ್ಷ್ಯದಿಂದ ಹಂದಿಗಳ ಸಾವಿನ ಸಂಖ್ಯೆ ದಿನ, ದಿನಕ್ಕೆ ಹೆಚ್ಚುತ್ತಲೇ ಇದೆ. ಪುರಸಭೆ ಅಧಿಕಾರಿ ವರ್ಗ ಹಂದಿಗಳನ್ನು ಬೇರೆಡೆ ಸಾಗಿಸುವ ಕಾರ್ಯವನ್ನಾದರೂ ಬೇಗ ಮಾಡಬೇಕು ಎಂದು 23ನೆಯ ವಾರ್ಡ್ ಶಾಂತವೀರನಗರದ ನಿವಾಸಿ ವಿಜಯಕುಮಾರ ಪತ್ತಾರ ಒತ್ತಾಯಿಸಿದ್ದಾರೆ.</p>.<div><blockquote>ವಾರಕ್ಕೆ 80ಕ್ಕೂ ಅಧಿಕ ಹಂದಿಗಳು ಸತ್ತಿವೆ ಎಂದು ದೂರು ಬಂದಿದೆ. ಹಂದಿ ಸಾಕಾಣಿಕೆಯವರಿಗೆ ನೋಟಿಸ್ ಕೊಡಲಾಗಿದೆ </blockquote><span class="attribution">-ನಬಿರಸೂಲ ಉಸ್ತಾದ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ</span></div>.<div><blockquote>ಪಟ್ಟಣದಲ್ಲಿ ವಿವಿಧ ವಾರ್ಡ್ಗಳಲ್ಲಿ ಹಂದಿಗಳ ಸಾವು ಮುಂದುವರೆದಿದೆ. ಸತ್ತ ಹಂದಿಗಳನ್ನು ಎಲ್ಲೆಲ್ಲೊ ಎಸೆಯುತ್ತಾರೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ</blockquote><span class="attribution">- ಅಶೋಕ ಅಲ್ಲಾಪೂರ ನಗರ ಸುಧಾರಣಾ ವೇದಿಕೆ ಅಧ್ಯಕ್ಷ</span></div>.<div><blockquote>ಹಂದಿಗಳ ಸಾವಿಗೆ ಕಾರಣ ಹುಡುಕಲು ಸತ್ತ ಹಂದಿಯ ಪರೀಕ್ಷೆ ನಡೆಸಬೇಕಾಗುತ್ತದೆ. ನಂತರ ವ್ಯಾಕ್ಸಿನ್ ಚಿಕಿತ್ಸೆ ನೀಡಬಹುದು. ಪುರಸಭೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿತ್ತು</blockquote><span class="attribution">- ಡಾ.ಮಾರುತಿ ತಡ್ಲಗಿ ಮುಖ್ಯ ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>