ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಯವೇತನ ಕಡಿತ; ವಿದ್ಯಾರ್ಥಿನಿಯರ ಪ್ರತಿಭಟನೆ

Last Updated 24 ಆಗಸ್ಟ್ 2020, 13:13 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯರ ಶಿಷ್ಯವೇತನ ಕಡಿತ ಮಾಡಿರುವುದನ್ನು ವಿರೋಧಿಸಿಡೆಮಾಕ್ರಟಿಕ್ ರಿಸರ್ಚ್ ಸ್ಕಾಲರ್ಸ್ ಆರ್ಗನೈಸೇಷನ್ (ಡಿಆರ್‌ಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಡಿಆರ್‌ಎಸ್‌ಒ ಸದಸ್ಯೆ ಗೀತಾ.ಎಚ್ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಹಂತದಲ್ಲಿರುವಾಗ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿಯರ ಶಿಷ್ಯವೇತನವನ್ನು ₹15 ಸಾವಿರದಿಂದ ₹8 ಸಾವಿರಕ್ಕೆ ಕಡಿತಗೊಳಿಸಿದ್ದಾರೆ ಹಾಗೂ ಪ್ರಗತಿ ವರದಿ ಶುಲ್ಕವನ್ನು ಕೂಡ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದರು.

ಸಂಶೋಧನಾ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಇದ್ದರೂ ಅದರ ಶುಲ್ಕ ಕೂಡ ಜಾಸ್ತಿಯಾಗಿದೆ. ಹಾಗೂ ಐದು ತಿಂಗಳಿಂದ ಶಿಷ್ಯವೇತನವನ್ನು ನೀಡಿಲ್ಲ. ಈ ರೀತಿಯಾದರೆ ವಿದ್ಯಾರ್ಥಿನಿಯರು ಸಂಶೋಧನೆಯನ್ನು ಅರ್ಧಕ್ಕೆ ಕೈಬಿಡಬೇಕಾಗಿದೆ ಎಂದು ದೂರಿದರು.

ಕರ್ನಾಟಕದಲ್ಲಿ ಇರುವುದು ಏಕೈಕ ಮಹಿಳಾ ವಿಶ್ವವಿದ್ಯಾನಿಲಯ. ಸಾಕಷ್ಟು ವಿದ್ಯಾರ್ಥಿನಿಯರು ಬಡತನದಿಂದಲೇ ಸಂಶೋಧನೆಗೆ ಬರುತ್ತಾರೆ. ಆದ್ದರಿಂದ ಈ ಕೂಡಲೇ ನಿಗದಿಪಡಿಸಿದ ಶಿಷ್ಯವೇತನವನ್ನು ಬಿಡುಗಡೆಮಾಡಬೇಕು ಹಾಗೂ ಹಾಸ್ಟಲ್ ಸಮಸ್ಯೆ ಮತ್ತು ಪ್ರಗತಿ ವರದಿ ಶುಲ್ಕವನ್ನು ಕೂಡ ಕಡಿಮೆಮಾಡಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ದೀಪಾಲಿ, ತ್ರಿವೇಣಿ, ಗೀತಾ ರಾಠೋಡ, ವಿಜಯಲಕ್ಷ್ಮೀ, ಜ್ಞಾನಸುಂದರಿ, ಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT