<p><strong>ತಾಳಿಕೋಟೆ</strong>:‘ಸ್ವಾತಂತ್ರ್ಯದ ಹಿಂದಿನ ತ್ಯಾಗ ಬಲಿದಾನಗಳನ್ನು ಮರೆಯಬಾರದು. ದೇಶಪ್ರೇಮ ಆಚರಣೆಗಳಂದು ಮಾತ್ರ ದೇಶಪ್ರೇಮ ಅರಳದೆ ಅದು ನಮ್ಮ ನಡುವಳಿಕೆಯಾಗಿ ಬದಲಾಗಬೇಕು’ ಎಂದು ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಗಡೇದ ಹೇಳಿದರು.</p>.<p>ಅವರು ಸ್ಥಳೀಯ ವಿಪಿಎಂ ಪ್ರಾಥಮಿಕ ಹಾಗೂ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 78ನೆಯ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು.</p>.<p>’ವಿವಿಧತೆಯೇ ಈ ನೆಲದ ವೈಶಿಷ್ಟ್ಯ. ಎಲ್ಲ ಜನಾಂಗ, ಧರ್ಮದವರು ಒಂದಾಗಿ ದೇಶದ ಘನತೆ ಎತ್ತಿ ಹಿಡಿಯಬೇಕು. ಬಾಲ್ಯದಿಂದಲೇ ನಮ್ಮ ಸಂಸ್ಕೃತಿ, ಪರಂಪರೆಗಳಲ್ಲಿನ ಮೌಲ್ಯಗಳನ್ನು ಗುರುತಿಸಿ ಅನುಸರಣೆ ಮಾಡಬೇಕು’ ಎಂದರು.</p>.<p>ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಫಾ.ರಾಬರ್ಟಕ್ರಾಸ್ತಾ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಸಿ. ಐರಿನ್ ಥೌರೋ, ಶಿಕ್ಷಕ ನಾಗಭೂಷಣ, ವಿಶ್ವನಾಥ ಪಾಟೀಲ, ಜ್ಯೋತಿ ನಾರಿ ಹಾಗೂ ಸನ್ಮಾನಿತರು ಇದ್ದರು.</p>.<p>ಹಿಂದಿ ಶಿಕ್ಷಕ ಗಣೇಶ, ದೈಹಿಕಶಿಕ್ಷಣ ಶಿಕ್ಷಕ ಈರಪ್ಪ ಸಜ್ಜನ, ಸೇವಾ ನಿವೃತ್ತಿಯಾದ ಸತೀಶ ಕುಲಕರ್ಣಿ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೇ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.</p>.<p>ವಿದ್ಯಾರ್ಥಿನಿಯರಾದ ದರ್ಶಿತಾ ಮಹೀಂದ್ರಕರ ಮತ್ತು ಫೈಜನಾಜ ಖರೋಬಾ ಸ್ವಾಗತಿಸಿ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಳಿಕೋಟೆ</strong>:‘ಸ್ವಾತಂತ್ರ್ಯದ ಹಿಂದಿನ ತ್ಯಾಗ ಬಲಿದಾನಗಳನ್ನು ಮರೆಯಬಾರದು. ದೇಶಪ್ರೇಮ ಆಚರಣೆಗಳಂದು ಮಾತ್ರ ದೇಶಪ್ರೇಮ ಅರಳದೆ ಅದು ನಮ್ಮ ನಡುವಳಿಕೆಯಾಗಿ ಬದಲಾಗಬೇಕು’ ಎಂದು ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಗಡೇದ ಹೇಳಿದರು.</p>.<p>ಅವರು ಸ್ಥಳೀಯ ವಿಪಿಎಂ ಪ್ರಾಥಮಿಕ ಹಾಗೂ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 78ನೆಯ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು.</p>.<p>’ವಿವಿಧತೆಯೇ ಈ ನೆಲದ ವೈಶಿಷ್ಟ್ಯ. ಎಲ್ಲ ಜನಾಂಗ, ಧರ್ಮದವರು ಒಂದಾಗಿ ದೇಶದ ಘನತೆ ಎತ್ತಿ ಹಿಡಿಯಬೇಕು. ಬಾಲ್ಯದಿಂದಲೇ ನಮ್ಮ ಸಂಸ್ಕೃತಿ, ಪರಂಪರೆಗಳಲ್ಲಿನ ಮೌಲ್ಯಗಳನ್ನು ಗುರುತಿಸಿ ಅನುಸರಣೆ ಮಾಡಬೇಕು’ ಎಂದರು.</p>.<p>ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಫಾ.ರಾಬರ್ಟಕ್ರಾಸ್ತಾ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಸಿ. ಐರಿನ್ ಥೌರೋ, ಶಿಕ್ಷಕ ನಾಗಭೂಷಣ, ವಿಶ್ವನಾಥ ಪಾಟೀಲ, ಜ್ಯೋತಿ ನಾರಿ ಹಾಗೂ ಸನ್ಮಾನಿತರು ಇದ್ದರು.</p>.<p>ಹಿಂದಿ ಶಿಕ್ಷಕ ಗಣೇಶ, ದೈಹಿಕಶಿಕ್ಷಣ ಶಿಕ್ಷಕ ಈರಪ್ಪ ಸಜ್ಜನ, ಸೇವಾ ನಿವೃತ್ತಿಯಾದ ಸತೀಶ ಕುಲಕರ್ಣಿ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೇ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.</p>.<p>ವಿದ್ಯಾರ್ಥಿನಿಯರಾದ ದರ್ಶಿತಾ ಮಹೀಂದ್ರಕರ ಮತ್ತು ಫೈಜನಾಜ ಖರೋಬಾ ಸ್ವಾಗತಿಸಿ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>