ವಿಜಯಪುರ ನಗರದ ಕೀರ್ತಿನಗರ, ಟೇಕಡೆಗಲ್ಲಿ, ಟಕ್ಕೆ ಪ್ರದೇಶಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ಎಷ್ಟು ಹೊತ್ತಿಗೆ ಭೂಕಂಪನವಾಯಿತು? ಯಾವ ರೀತಿ ಶಬ್ಧ ಹೊರಹೊಮ್ಮಿತು? ಭೂಮಿ ಕಂಪಿಸಿದ ಅನುಭವವಾಯಿತೇ? ಮನೆಗಳಲ್ಲಿ ವಸ್ತುಗಳು ಉರುಳಿ ಬಿದ್ದವೇ? ಎಷ್ಟು ಭಾರಿ ಭೂಕಂಪನವಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ಸಾರ್ವಜನಿಕರಿಗೆ ಕೇಳಿ ಮಾಹಿತಿ ಪಡೆದುಕೊಂಡರು.