<p><strong>ಕೊಲ್ಹಾರ</strong>: ಇಲ್ಲಿ ಯುಕೆಪಿ ಬಳಿ ವಾರ್ಡ್ ನಂ.17 ಕ ಸ ನಂ 236ರಲ್ಲಿ ಕಟ್ಟಿಸಿರುವ ಮನೆ ತೆರವುಗೊಳಿಸಲು ನೀಡಿರುವ ನೋಟಿಸನ್ನು ಹಿಂಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡುವಂತೆ ಪಟ್ಟಣದ ನಿವಾಸಿಗಳು ಮತ್ತು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ತಹಶೀಲ್ದಾರ್ ಎಸ್ ಎಚ್ ಅರಕೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.</p>.<p>ಕೊಲ್ಹಾರದ ಯುಕೆಪಿ ಬಳಿ ವಾರ್ಡ್ ನಂ.17ರ ಕ.ಸ.ನಂ. 236 ರಲ್ಲಿ ಸರಕಾರಿ ಜಾಗವೆಂದು ತಿಳಿದು ಸುಮಾರು 10- 15ಕುಟುಂಬಗಳು ಕಳೆದ 25-30 ವರ್ಷಗಳಿಂದ ವಾಸವಾಗಿರುತ್ತಾರೆ. ಇವರಲ್ಲಿ ಸಂತ್ರಸ್ತರು, ದಲಿತ ಸಮುದಾಯದವರು, ಬಡಜನರು ಸೇರಿದ್ದಾರೆ. ಅಂತಹ ಕುಟುಂಬಗಳಿಗೆ ಕೃ.ಮೇ.ಯೋ ಅಡಿಯಲ್ಲಿ ಮುಳುಗಡೆಯಾದ ಕೊಲ್ದಾರ ಪುನರ್ವಸತಿ ಕೇಂದ್ರದಲ್ಲಿ ನಿವೇಶನ ಹಂಚಿಕೆ ಕೂಡಾ ಮಾಡಿರುವುದಿಲ್ಲ.</p>.<p>ನೋಟಿಸ್ ನೀಡಿರುವ ಎಲ್ಲ ಕುಟುಂಬದವರನ್ನು ಸರಕಾರದ ಆಶ್ರಯ ವಸತಿ ಯೋಜನೆಯ ಫಲಾನುಭವಿಗಳೆಂದು ಗುರುತಿಸಿ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಬೇಕು. ಸಾಧ್ಯವಾಗದಿದ್ದರೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ನೋಟಿಸ್ ಹಿಂಪಡೆಯಬೇಕು. ಅಲ್ಲದೇ ಆ ಎಲ್ಲಾ ಕುಟುಂಬಗಳ ಜಾಗವನ್ನು ಬಿಟ್ಟು ಪ್ರವಾಸಿ ಮಂದಿರದ ಆವರಣ ಗೋಡೆ ನಿರ್ಮಿಸಿಕೊಳ್ಳಲು ಮತ್ತು ತಮ್ಮ ಉಳಿದ ಕಾಮಗಾರಿಗಳನ್ನು ಮಾಡಿಕೊಳ್ಳಲು ಇಲಾಖೆಯವರಿಗೆ ಸೂಚನೆ ನೀಡಬೇಕು ಎಂದು ಕೋರುವುದಾಗಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಹೇಳಿದರು.</p>.<p>ರಾಜಶೇಖರ ಶೀಲವಂತ, ರಾಮಣ್ಣ ಬಾಟಿ, ಗಿರಿಯಪ್ಪ ಕಾಳೆ, ಖಾಸೀಂ ಕಾಳೆ, ರತ್ನವ್ವ ಮಾದರ, ಹಣಮವ್ವ ತಳಗೇರಿ, ಕಾಶಿಬಾಯಿ ಬುದ್ನಿ, ಮಹಾದೇವಿ ಬಾಡಗಂಡಿ, ರತ್ನವ್ವ ಬ್ಯಾಲ್ಯಾಳ, ರೇಣುಕಾ ಗುಡದಿನ್ನಿ, ಶಾಂತವ್ವ ಇಂಗಳೇಶ್ವರ, ಯಲ್ಲವ್ವ ಬ್ಯಾಲ್ಯಾಳ ಇನ್ನೂ ಹಲವಾರು ಮಹಿಳೆಯರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಹಾರ</strong>: ಇಲ್ಲಿ ಯುಕೆಪಿ ಬಳಿ ವಾರ್ಡ್ ನಂ.17 ಕ ಸ ನಂ 236ರಲ್ಲಿ ಕಟ್ಟಿಸಿರುವ ಮನೆ ತೆರವುಗೊಳಿಸಲು ನೀಡಿರುವ ನೋಟಿಸನ್ನು ಹಿಂಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡುವಂತೆ ಪಟ್ಟಣದ ನಿವಾಸಿಗಳು ಮತ್ತು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ತಹಶೀಲ್ದಾರ್ ಎಸ್ ಎಚ್ ಅರಕೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.</p>.<p>ಕೊಲ್ಹಾರದ ಯುಕೆಪಿ ಬಳಿ ವಾರ್ಡ್ ನಂ.17ರ ಕ.ಸ.ನಂ. 236 ರಲ್ಲಿ ಸರಕಾರಿ ಜಾಗವೆಂದು ತಿಳಿದು ಸುಮಾರು 10- 15ಕುಟುಂಬಗಳು ಕಳೆದ 25-30 ವರ್ಷಗಳಿಂದ ವಾಸವಾಗಿರುತ್ತಾರೆ. ಇವರಲ್ಲಿ ಸಂತ್ರಸ್ತರು, ದಲಿತ ಸಮುದಾಯದವರು, ಬಡಜನರು ಸೇರಿದ್ದಾರೆ. ಅಂತಹ ಕುಟುಂಬಗಳಿಗೆ ಕೃ.ಮೇ.ಯೋ ಅಡಿಯಲ್ಲಿ ಮುಳುಗಡೆಯಾದ ಕೊಲ್ದಾರ ಪುನರ್ವಸತಿ ಕೇಂದ್ರದಲ್ಲಿ ನಿವೇಶನ ಹಂಚಿಕೆ ಕೂಡಾ ಮಾಡಿರುವುದಿಲ್ಲ.</p>.<p>ನೋಟಿಸ್ ನೀಡಿರುವ ಎಲ್ಲ ಕುಟುಂಬದವರನ್ನು ಸರಕಾರದ ಆಶ್ರಯ ವಸತಿ ಯೋಜನೆಯ ಫಲಾನುಭವಿಗಳೆಂದು ಗುರುತಿಸಿ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಬೇಕು. ಸಾಧ್ಯವಾಗದಿದ್ದರೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ನೋಟಿಸ್ ಹಿಂಪಡೆಯಬೇಕು. ಅಲ್ಲದೇ ಆ ಎಲ್ಲಾ ಕುಟುಂಬಗಳ ಜಾಗವನ್ನು ಬಿಟ್ಟು ಪ್ರವಾಸಿ ಮಂದಿರದ ಆವರಣ ಗೋಡೆ ನಿರ್ಮಿಸಿಕೊಳ್ಳಲು ಮತ್ತು ತಮ್ಮ ಉಳಿದ ಕಾಮಗಾರಿಗಳನ್ನು ಮಾಡಿಕೊಳ್ಳಲು ಇಲಾಖೆಯವರಿಗೆ ಸೂಚನೆ ನೀಡಬೇಕು ಎಂದು ಕೋರುವುದಾಗಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಹೇಳಿದರು.</p>.<p>ರಾಜಶೇಖರ ಶೀಲವಂತ, ರಾಮಣ್ಣ ಬಾಟಿ, ಗಿರಿಯಪ್ಪ ಕಾಳೆ, ಖಾಸೀಂ ಕಾಳೆ, ರತ್ನವ್ವ ಮಾದರ, ಹಣಮವ್ವ ತಳಗೇರಿ, ಕಾಶಿಬಾಯಿ ಬುದ್ನಿ, ಮಹಾದೇವಿ ಬಾಡಗಂಡಿ, ರತ್ನವ್ವ ಬ್ಯಾಲ್ಯಾಳ, ರೇಣುಕಾ ಗುಡದಿನ್ನಿ, ಶಾಂತವ್ವ ಇಂಗಳೇಶ್ವರ, ಯಲ್ಲವ್ವ ಬ್ಯಾಲ್ಯಾಳ ಇನ್ನೂ ಹಲವಾರು ಮಹಿಳೆಯರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>