<p><strong>ಆಲಮೇಲ (ವಿಜಯಪುರ):</strong> ಸಮೀಪದ ಗುಂದಗಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ಬೆಳೆದ ಬದನೆ ಮತ್ತು ಹೀರೆಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗದೇ ಮಾರಾಟವಾಗದ ಕಾರಣ ಹೊಲದಲ್ಲೇ ಕೊಳೆಯುತ್ತಿದೆ.</p>.<p>‘ಎರಡು ಎಕರೆಯಲ್ಲಿ ₹ 75 ಸಾವಿರ ಖರ್ಚು ಮಾಡಿ ಬೆಳೆದಿದ್ದ ಹಿರೇಕಾಯಿಗೆ ಯೋಗ್ಯ ದರ ಸಿಗದೇ, ಮಾರುಕಟ್ಟೆಗೆ ಸಾಗಿಸಲೂ ಸಾಧ್ಯವಾಗದೇ ಬೇಸತ್ತು ಟ್ರಾಕ್ಟರ್ ಸಹಾಯದಿಂದ ಬುಡಸಮೇತ ಕಿತ್ತುಹಾಕಿದೆ’ ಎಂದು ಶೋಭಾ ಅಣ್ಣಾರಾವ್ ಪಾಟೀಲ ‘ಪ್ರಜಾವಾಣಿ’ ಬಳಿ ತಮ್ಮ ನೋವು ತೋಡಿಕೊಂಡರು.</p>.<p>‘1.5 ಎಕರೆಯಲ್ಲಿ ₹ 70 ಸಾವಿರ ಖರ್ಚು ಮಾಡಿ ಬೆಳೆದ ಬದನೆಕಾಯಿ ಸ್ಥಿತಿಯೂ ಇದೇ ಆಗಿದೆ. ಮಾರಾಟವಾಗದೇ ಹೊಲದಲ್ಲಿಯೇ ಕೊಳೆಯುತ್ತಿರುವುದರಿಂದ ಅದನ್ನು ಇಷ್ಟರಲ್ಲಿಯೇ ಕಿತ್ತುಹಾಕಲಿದ್ದೇನೆ’ ಎಂದು ಪಾಟೀಲ ಹೇಳಿದರು.</p>.<p>‘ಬೇರೆಯವರ ಜಮೀನಿನಿಂದ 2 ಕಿ.ಮೀ ದೂರದಿಂದ ಪೈಪ್ ಲೈನ್ ಮೂಲಕ ನೀರು ತಂದು, ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿ ಕೃಷಿ ಮಾಡಿದ್ದೇನೆ. ಈ ಬೇಸಿಗೆಯಲ್ಲೂ ಉತ್ತಮ ಬೆಳೆಯೂ ಬಂದಿತ್ತು ಆದರೆ, ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದು, ತೊಂದರೆಗೀಡುಮಾಡಿತು’ ಎಂದು ಪಾಟೀಲ ಬೇಸರ ವ್ಯಕ್ತಪಡಿಸಿದರು.</p>.<p>‘ಕನಿಷ್ಟ ಎರಡೂ ಬೆಳೆಯಿಂದ ₹4 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೆವು. ಆದರೆ, ನಮ್ಮ ಶ್ರಮ ನೀರಲ್ಲಿ ಹೋಮ ಮಾಡಿದಂತಾಯಿತು. ಕೃಷಿ ಹೊಂಡ ಸೇರಿದಂತೆ ₹ 5 ಲಕ್ಷ ಹಣ ಖರ್ಚು ಮಾಡಿದ್ದೆ. ಒಳ್ಳೆಯ ಬೆಲೆ ಸಿಗುತ್ತದೆ ಎಂದು ನಂಬಿದ್ದ ನಮಗೆ ಈ ಕೊರೊನಾ ಸಂಕಟಕ್ಕೀಡು ಮಾಡಿದೆ’ ಎಂದು ತಮ್ಮ ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮೇಲ (ವಿಜಯಪುರ):</strong> ಸಮೀಪದ ಗುಂದಗಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ಬೆಳೆದ ಬದನೆ ಮತ್ತು ಹೀರೆಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗದೇ ಮಾರಾಟವಾಗದ ಕಾರಣ ಹೊಲದಲ್ಲೇ ಕೊಳೆಯುತ್ತಿದೆ.</p>.<p>‘ಎರಡು ಎಕರೆಯಲ್ಲಿ ₹ 75 ಸಾವಿರ ಖರ್ಚು ಮಾಡಿ ಬೆಳೆದಿದ್ದ ಹಿರೇಕಾಯಿಗೆ ಯೋಗ್ಯ ದರ ಸಿಗದೇ, ಮಾರುಕಟ್ಟೆಗೆ ಸಾಗಿಸಲೂ ಸಾಧ್ಯವಾಗದೇ ಬೇಸತ್ತು ಟ್ರಾಕ್ಟರ್ ಸಹಾಯದಿಂದ ಬುಡಸಮೇತ ಕಿತ್ತುಹಾಕಿದೆ’ ಎಂದು ಶೋಭಾ ಅಣ್ಣಾರಾವ್ ಪಾಟೀಲ ‘ಪ್ರಜಾವಾಣಿ’ ಬಳಿ ತಮ್ಮ ನೋವು ತೋಡಿಕೊಂಡರು.</p>.<p>‘1.5 ಎಕರೆಯಲ್ಲಿ ₹ 70 ಸಾವಿರ ಖರ್ಚು ಮಾಡಿ ಬೆಳೆದ ಬದನೆಕಾಯಿ ಸ್ಥಿತಿಯೂ ಇದೇ ಆಗಿದೆ. ಮಾರಾಟವಾಗದೇ ಹೊಲದಲ್ಲಿಯೇ ಕೊಳೆಯುತ್ತಿರುವುದರಿಂದ ಅದನ್ನು ಇಷ್ಟರಲ್ಲಿಯೇ ಕಿತ್ತುಹಾಕಲಿದ್ದೇನೆ’ ಎಂದು ಪಾಟೀಲ ಹೇಳಿದರು.</p>.<p>‘ಬೇರೆಯವರ ಜಮೀನಿನಿಂದ 2 ಕಿ.ಮೀ ದೂರದಿಂದ ಪೈಪ್ ಲೈನ್ ಮೂಲಕ ನೀರು ತಂದು, ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿ ಕೃಷಿ ಮಾಡಿದ್ದೇನೆ. ಈ ಬೇಸಿಗೆಯಲ್ಲೂ ಉತ್ತಮ ಬೆಳೆಯೂ ಬಂದಿತ್ತು ಆದರೆ, ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದು, ತೊಂದರೆಗೀಡುಮಾಡಿತು’ ಎಂದು ಪಾಟೀಲ ಬೇಸರ ವ್ಯಕ್ತಪಡಿಸಿದರು.</p>.<p>‘ಕನಿಷ್ಟ ಎರಡೂ ಬೆಳೆಯಿಂದ ₹4 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೆವು. ಆದರೆ, ನಮ್ಮ ಶ್ರಮ ನೀರಲ್ಲಿ ಹೋಮ ಮಾಡಿದಂತಾಯಿತು. ಕೃಷಿ ಹೊಂಡ ಸೇರಿದಂತೆ ₹ 5 ಲಕ್ಷ ಹಣ ಖರ್ಚು ಮಾಡಿದ್ದೆ. ಒಳ್ಳೆಯ ಬೆಲೆ ಸಿಗುತ್ತದೆ ಎಂದು ನಂಬಿದ್ದ ನಮಗೆ ಈ ಕೊರೊನಾ ಸಂಕಟಕ್ಕೀಡು ಮಾಡಿದೆ’ ಎಂದು ತಮ್ಮ ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>