<p><strong>ವಿಜಯಪುರ</strong>: ಜಿಲ್ಲೆಯಲ್ಲಿ ಈ ವರ್ಷ 1.84 ಲಕ್ಷ ಟನ್ ಒಣದ್ರಾಕ್ಷಿ ಉತ್ಪಾದನೆಯಾಗಿದೆ.</p><p>‘ಈ ವರ್ಷ ಇಳುವರಿ ಕಡಿಮೆ ಇರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕಿದೆ. ಒಣದ್ರಾಕ್ಷಿಯನ್ನು ಕೆ.ಜಿಗೆ ₹180ರಿಂದ ₹300ರ ವರೆಗೆ ರೈತರು ಮಾರಾಟ ಮಾಡಿದ್ದಾರೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಉಕ್ರೇನ್–ರಷ್ಯಾ, ಇಸ್ರೇಲ್–ಪ್ಯಾಲೆಸ್ಟೀನ್ ಯುದ್ಧ, ಶ್ರೀಲಂಕಾ ಮತ್ತಿತರ ದೇಶಗಳಲ್ಲಿ ತಲೆದೋರಿದ ಆರ್ಥಿಕ ಸಂಕಷ್ಟದಿಂದಾಗಿ ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಒಣದ್ರಾಕ್ಷಿಗೆ ದರ ಕುಸಿದಿತ್ತು’ ಎಂದರು.</p><p>‘ಕಳೆದ ಒಂದು ದಶಕದಿಂದ ಈಚೆಗೆ ದ್ರಾಕ್ಷಿಗೆ ಉತ್ತಮ ದರ ಸಿಗದ ಕಾರಣ ಶೇ 20ರಷ್ಟು ರೈತರು ದ್ರಾಕ್ಷಿ ಗಿಡಗಳನ್ನು ತೆರವುಗೊಳಿಸಿದ್ದಾರೆ. 2023–24ನೇ ಸಾಲಿನಲ್ಲಿ ತೀವ್ರ ಪ್ರಮಾಣದ ಬರದಿಂದಾಗಿ ನೀರಿಲ್ಲದೇ ದ್ರಾಕ್ಷಿ ಗಿಡಗಳು ಬಾಡಿವೆ. ಒಣದ್ರಾಕ್ಷಿ ಉತ್ಪಾದನೆ ಕಡಿಮೆ ಆದ ಕಾರಣ ಮಾರುಕಟ್ಟೆಯಲ್ಲಿ ಈ ವರ್ಷ ಗರಿಷ್ಠ ದರ ಸಿಕ್ಕಿದೆ’ ಎಂದು ವಿಜಯಪುರ ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಚ್. ಮುಂಬಾರೆಡ್ಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಜಿಲ್ಲೆಯಲ್ಲಿ ಈ ವರ್ಷ 1.84 ಲಕ್ಷ ಟನ್ ಒಣದ್ರಾಕ್ಷಿ ಉತ್ಪಾದನೆಯಾಗಿದೆ.</p><p>‘ಈ ವರ್ಷ ಇಳುವರಿ ಕಡಿಮೆ ಇರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕಿದೆ. ಒಣದ್ರಾಕ್ಷಿಯನ್ನು ಕೆ.ಜಿಗೆ ₹180ರಿಂದ ₹300ರ ವರೆಗೆ ರೈತರು ಮಾರಾಟ ಮಾಡಿದ್ದಾರೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಉಕ್ರೇನ್–ರಷ್ಯಾ, ಇಸ್ರೇಲ್–ಪ್ಯಾಲೆಸ್ಟೀನ್ ಯುದ್ಧ, ಶ್ರೀಲಂಕಾ ಮತ್ತಿತರ ದೇಶಗಳಲ್ಲಿ ತಲೆದೋರಿದ ಆರ್ಥಿಕ ಸಂಕಷ್ಟದಿಂದಾಗಿ ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಒಣದ್ರಾಕ್ಷಿಗೆ ದರ ಕುಸಿದಿತ್ತು’ ಎಂದರು.</p><p>‘ಕಳೆದ ಒಂದು ದಶಕದಿಂದ ಈಚೆಗೆ ದ್ರಾಕ್ಷಿಗೆ ಉತ್ತಮ ದರ ಸಿಗದ ಕಾರಣ ಶೇ 20ರಷ್ಟು ರೈತರು ದ್ರಾಕ್ಷಿ ಗಿಡಗಳನ್ನು ತೆರವುಗೊಳಿಸಿದ್ದಾರೆ. 2023–24ನೇ ಸಾಲಿನಲ್ಲಿ ತೀವ್ರ ಪ್ರಮಾಣದ ಬರದಿಂದಾಗಿ ನೀರಿಲ್ಲದೇ ದ್ರಾಕ್ಷಿ ಗಿಡಗಳು ಬಾಡಿವೆ. ಒಣದ್ರಾಕ್ಷಿ ಉತ್ಪಾದನೆ ಕಡಿಮೆ ಆದ ಕಾರಣ ಮಾರುಕಟ್ಟೆಯಲ್ಲಿ ಈ ವರ್ಷ ಗರಿಷ್ಠ ದರ ಸಿಕ್ಕಿದೆ’ ಎಂದು ವಿಜಯಪುರ ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಚ್. ಮುಂಬಾರೆಡ್ಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>