<p>ವಿಜಯಪುರ: ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಭಾಗದ ಮಾಧ್ಯಮಗಳಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು. </p>.<p>‘ಗಡಿ ಭಾಗದಲ್ಲಿ ಮಾಧ್ಯಮ’ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಗಡಿಭಾಗದ ಪತ್ರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ಪರಿಹರಿಸುವ ಕೆಲವನ್ನು ಸರ್ಕಾರ ಮಾಡಬೇಕು ಎಂದರು.</p>.<p>ರಾಜ್ಯದ ಗಡಿ ಭಾಗದ ಮಾಧ್ಯಮಗಳು ಗಡಿಭಾಗದ ಭಾಷೆ, ಸಂಸ್ಕೃತಿಗಳ ಸಾಮರಸ್ಯಗಳನ್ನು ಕಾಪಾಡಿಕೊಂಡು ಸಾಗುವ ಕಾರ್ಯ ಮಾಡಬೇಕು ಎಂದರು.</p>.<p>ಗಡಿಭಾಗದಲ್ಲಿನ ಕನ್ನಡ ಪತ್ರಿಕೆಗಳ ಪ್ರಸಾರದ ಸಂಖ್ಯೆಗಳ ಸಮೀಕ್ಷೆಯನ್ನು ಕಾರ್ಯನಿರತ ಪತ್ರಕರ್ತ ಸಂಘದ ಸಹಯೋಗದಲ್ಲಿ ಗಡಿ ಪ್ರಾಧಿಕಾರ ಮಾಡಲಿದೆ ಎಂದು ಹೇಳಿದರು.</p>.<p>ಹಿರಿಯ ಪತ್ರಕರ್ತ ಬಿ.ಎಂ ಹನೀಫ್ ಮಾತನಾಡಿ, ಗಡಿ ಭಾಷೆ ಅಥವಾ ಪ್ರಾದೇಶಿಕ ಭಾಷಾ ವೈಶಿಷ್ಟ್ಯತೆಯಿಂದಾಗಿ ನವ ತಂತ್ರಜ್ಞಾನಗಳು ಬಂದರೂ ಅವುಗಳಿಗೆ ಯಾವುದೇ ಪೆಟ್ಟು ನೀಡುವುದಿಲ್ಲ. ನವ ಮಾಧ್ಯಮಗಳನ್ನು ಅಳವಡಿಸಿಕೊಂಡು ಮುದ್ರಣ ಮಾಧ್ಯಮಗಳು ಸಾಗಬೇಕಿದೆ ಎಂದರು.</p>.<p>ದೊಡ್ಡ ಮಾಧ್ಯಮವಾಗಲಿ ಅಥವಾ ಯುಟ್ಯೂಬ್ ಮಾಧ್ಯಮಗಳಿಂದ ಪ್ರತಿಯೊಬ್ಬರಿಗೂ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡಬಾರದು ಎಂದರು. </p>.<p>ಕೀರ್ತಿ ಕಾಸರಗೋಡು ಮಾತನಾಡಿ, ಗಡಿಭಾಗದ ಮಾಧ್ಯಮ ಪ್ರತಿನಿಧಿಗಳಲ್ಲಿ ಸೂಕ್ಷ್ಮ ಸಂವೇದನೆ ಇರಬೇಕು. ಗಡಿಭಾಗದ ಜನರು ಪಕ್ಕದ ರಾಜ್ಯದ ಕೆಲವು ಊರುಗಳಿಗೆ ಅವಲಂಬಿತರಾಗಿರುತ್ತಾರೆ. ಗಡಿ ವಿವಾದಗಳು ಆಗುವ ಸಮಯದಲ್ಲಿ ಸತ್ಯಾಸತ್ಯತೆಗಳನ್ನು ಖಚಿತಪಡಿಸಿಕೊಂಡು ವರದಿಗಳನ್ನು ಮಾಡಬೇಕು ಎಂದು ಹೇಳಿದರು.</p>.<p>ಗಡಿಭಾಗದ ಕಟ್ಟಗಡೆಯ ಹಳ್ಳಿಗಳಿಗೂ ಸೌಲಭ್ಯ ಸಿಗುವಂತೆ ಮಾಡುವ ಜವಾಬ್ದಾರಿ ಗಡಿ ಮಾಧ್ಯಮಗಳದ್ದಾಗಿದೆ ಎಂದರು.</p>.<p>ಪತ್ರಕರ್ತ ಕುಂದೂರು ಉಮೇಶ ಭಟ್ ಮಾತನಾಡಿ, ಗಡಿನಾಡು ಪತ್ರಕರ್ತರಿಗೆ ಕಾರ್ಯಾಗಾರ, ಫೆಲೋಶಿಪ್ ಕೊಡುವ ಕೆಲಸವನ್ನು ಮಾಧ್ಯಮ ಅಕಾಡೆಮಿ ಮಾಡಬೇಕು. ಗಡಿ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.</p>.<p>ಮಾಧ್ಯಮ ಅಕಾಡಮಿ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಕರ್ತರಾದ ಅಪ್ಪಾರಾವ್ ಸೌದಿ, ಸವಿತಾ ಜಯಂತ, ವೆಂಕಟಸಿಂಗ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಭಾಗದ ಮಾಧ್ಯಮಗಳಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು. </p>.<p>‘ಗಡಿ ಭಾಗದಲ್ಲಿ ಮಾಧ್ಯಮ’ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಗಡಿಭಾಗದ ಪತ್ರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ಪರಿಹರಿಸುವ ಕೆಲವನ್ನು ಸರ್ಕಾರ ಮಾಡಬೇಕು ಎಂದರು.</p>.<p>ರಾಜ್ಯದ ಗಡಿ ಭಾಗದ ಮಾಧ್ಯಮಗಳು ಗಡಿಭಾಗದ ಭಾಷೆ, ಸಂಸ್ಕೃತಿಗಳ ಸಾಮರಸ್ಯಗಳನ್ನು ಕಾಪಾಡಿಕೊಂಡು ಸಾಗುವ ಕಾರ್ಯ ಮಾಡಬೇಕು ಎಂದರು.</p>.<p>ಗಡಿಭಾಗದಲ್ಲಿನ ಕನ್ನಡ ಪತ್ರಿಕೆಗಳ ಪ್ರಸಾರದ ಸಂಖ್ಯೆಗಳ ಸಮೀಕ್ಷೆಯನ್ನು ಕಾರ್ಯನಿರತ ಪತ್ರಕರ್ತ ಸಂಘದ ಸಹಯೋಗದಲ್ಲಿ ಗಡಿ ಪ್ರಾಧಿಕಾರ ಮಾಡಲಿದೆ ಎಂದು ಹೇಳಿದರು.</p>.<p>ಹಿರಿಯ ಪತ್ರಕರ್ತ ಬಿ.ಎಂ ಹನೀಫ್ ಮಾತನಾಡಿ, ಗಡಿ ಭಾಷೆ ಅಥವಾ ಪ್ರಾದೇಶಿಕ ಭಾಷಾ ವೈಶಿಷ್ಟ್ಯತೆಯಿಂದಾಗಿ ನವ ತಂತ್ರಜ್ಞಾನಗಳು ಬಂದರೂ ಅವುಗಳಿಗೆ ಯಾವುದೇ ಪೆಟ್ಟು ನೀಡುವುದಿಲ್ಲ. ನವ ಮಾಧ್ಯಮಗಳನ್ನು ಅಳವಡಿಸಿಕೊಂಡು ಮುದ್ರಣ ಮಾಧ್ಯಮಗಳು ಸಾಗಬೇಕಿದೆ ಎಂದರು.</p>.<p>ದೊಡ್ಡ ಮಾಧ್ಯಮವಾಗಲಿ ಅಥವಾ ಯುಟ್ಯೂಬ್ ಮಾಧ್ಯಮಗಳಿಂದ ಪ್ರತಿಯೊಬ್ಬರಿಗೂ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡಬಾರದು ಎಂದರು. </p>.<p>ಕೀರ್ತಿ ಕಾಸರಗೋಡು ಮಾತನಾಡಿ, ಗಡಿಭಾಗದ ಮಾಧ್ಯಮ ಪ್ರತಿನಿಧಿಗಳಲ್ಲಿ ಸೂಕ್ಷ್ಮ ಸಂವೇದನೆ ಇರಬೇಕು. ಗಡಿಭಾಗದ ಜನರು ಪಕ್ಕದ ರಾಜ್ಯದ ಕೆಲವು ಊರುಗಳಿಗೆ ಅವಲಂಬಿತರಾಗಿರುತ್ತಾರೆ. ಗಡಿ ವಿವಾದಗಳು ಆಗುವ ಸಮಯದಲ್ಲಿ ಸತ್ಯಾಸತ್ಯತೆಗಳನ್ನು ಖಚಿತಪಡಿಸಿಕೊಂಡು ವರದಿಗಳನ್ನು ಮಾಡಬೇಕು ಎಂದು ಹೇಳಿದರು.</p>.<p>ಗಡಿಭಾಗದ ಕಟ್ಟಗಡೆಯ ಹಳ್ಳಿಗಳಿಗೂ ಸೌಲಭ್ಯ ಸಿಗುವಂತೆ ಮಾಡುವ ಜವಾಬ್ದಾರಿ ಗಡಿ ಮಾಧ್ಯಮಗಳದ್ದಾಗಿದೆ ಎಂದರು.</p>.<p>ಪತ್ರಕರ್ತ ಕುಂದೂರು ಉಮೇಶ ಭಟ್ ಮಾತನಾಡಿ, ಗಡಿನಾಡು ಪತ್ರಕರ್ತರಿಗೆ ಕಾರ್ಯಾಗಾರ, ಫೆಲೋಶಿಪ್ ಕೊಡುವ ಕೆಲಸವನ್ನು ಮಾಧ್ಯಮ ಅಕಾಡೆಮಿ ಮಾಡಬೇಕು. ಗಡಿ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.</p>.<p>ಮಾಧ್ಯಮ ಅಕಾಡಮಿ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಕರ್ತರಾದ ಅಪ್ಪಾರಾವ್ ಸೌದಿ, ಸವಿತಾ ಜಯಂತ, ವೆಂಕಟಸಿಂಗ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>