ಬಬಲೇಶ್ವರ ತಾಲ್ಲೂಕಿನ ದಾಸ್ಯಾಳ, ದನ್ಯಾಳ, ಕಣಮುಚನಾಳ, ಕೊಟ್ಯಾಳ, ಸಾರವಾಡ, ತೊನಸ್ಯಾಳ ಗ್ರಾಮಗಳು ಡೋಣಿ ನದಿಯ ದಡದಲ್ಲಿವೆ. ಇಲ್ಲಿನ 250 ಹೆಕ್ಟೇರ್ ಜಮೀನಿನಲ್ಲಿ ಫಸಲಿಗೆ ಬಂದ ತೊಗರಿ, ಉಳ್ಳಾಗಡ್ಡಿ, ಹತ್ತಿ ಹಾಗೂ ಬಿತ್ತನೆ ಮಾಡಿದ ಕಡಲೆ ಹಾಳಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ ತೊಗರಿ ಹಾಗೂ ಉಳ್ಳಾಗಡ್ಡಿಯೂ ನದಿ ಪ್ರವಾಹದಿಂದ ನಾಶವಾಗಿ, ರೈತರಿಗೆ ಕಣ್ಣೀರು ತರಿಸಿದೆ.