<p><strong>ವಿಜಯಪುರ:</strong> ‘ಜೀವನದ ಮೌಲ್ಯಗಳನ್ನು ತಿಳಿಸುವ ಜಾನಪದ ಸಾಹಿತ್ಯವನ್ನು ನಾವು ಮರೆತರೆ ಮಾನವೀಯತೆ ಹಾಗೂ ನೈತಿಕತೆ ಮರೆತಂತೆ’ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಐ.ಜೆ. ಮ್ಯಾಗೇರಿ ಹೇಳಿದರು.</p>.<p>ನಗರದ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾರಾಗೃಹ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನಪದ ಚಿಂತನಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜಾನಪದ ಸಾಹಿತ್ಯವು ಜೀವನದ ಮೌಲ್ಯಗಳನ್ನು ಸಾರುತ್ತದೆ. ಮಕ್ಕಳ ಪಠ್ಯಕ್ರಮದಲ್ಲಿ ಜಾನಪದ ಸಾಹಿತ್ಯಕ್ಕೆ ಇಂದು ಮಹತ್ವ ನೀಡಬೇಕಾಗಿದ್ದು, 21ನೇ ಶತಮಾನದ ಮಕ್ಕಳಿಗೆ ಜಾನಪದದ ಅರಿವು ಅತ್ಯಗತ್ಯ’ ಎಂದರು.</p>.<p>‘ಜಾನಪದ ಸಾಹಿತ್ಯ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಬಂಧಿಗಳಿಗೆ ಮನಪರಿವರ್ತನೆಗೆ ದಾರಿದೀಪವಾಗಿದೆ, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ತುಂಬ ಕ್ರಿಯಾಶೀಲವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ‘ಜಾನಪದ ಸಾಹಿತ್ಯ ಭಾರತೀಯ ಸಂಸ್ಕೃತಿಯ ತಾಯಿಬೇರು, ಗ್ರಾಮೀಣರ ಜೀವನ ಜಾನಪದ ಮೌಲ್ಯಗಳಿಂದ ಕೂಡಿಕೊಂಡಿದೆ. ಜನಪದ ಸಾಹಿತ್ಯ ಉಳಿಸಿ, ಬೆಳೆಸಿದ ಕೀರ್ತಿ ಜನಪದರಿಗೆ ಸಲ್ಲುತ್ತದೆ. ಆ ಜಾನಪದ ಜೀವನ ಮೌಲ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ’ ಎಂದರು.</p>.<p>ಸಾಹಿತಿ ಸಂಗಮೇಶ ಮೇತ್ರಿ ಮಾತನಾಡಿ, ‘ಜನಪದ ಸಾಹಿತ್ಯ ಹುಟ್ಟಿನಿಂದ ಸಾಯುತನಕ ಬೆಳೆಯುತ್ತ ಹೋಗುತ್ತದೆ. ಇದು ಮುಂದಿನ ತೆಲೆಮಾರಿಗೆ ಸಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜನಪದ ಸಾಹಿತ್ಯಕ್ಕೆ ಎಲ್ಲರನ್ನೂ ಮನಪರಿವರ್ತನೆ ಮಾಡುವ ತಾಕತ್ತಿದೆ’ ಎಂದರು.</p>.<p>ಶಿಕ್ಷಕ ಮೆಹತಾಬ್ ಕಾಗವಾಡ ಮಾತನಾಡಿದರು. ಉಪನ್ಯಾಸಕ ಶಿವಾನಂದ ಮಂಗಾನವರ, ಸಾಹಿತಿ ಶಿವಲೀಲಾ ಮುರಾಳ, ಶಿವಮ್ಮ, ಸಂತೋಷ ಸಂತಾಗೋಳ, ಶಕೀಲಾ ನದಾಫ್, ಮೌನೇಶ, ಕೆ.ಎಂ.ಚೌಧರಿ, ಎಸ್.ಎಸ್.ಪೂಜಾರಿ, ಎಸ್.ಎಸ್.ಕೋರವಾರ, ಈರಯ್ಯಾ ಹಿರೇಮಠ, ಗೋಪಾಲಕೃಷ್ಣ ಕುಲಕರ್ಣಿ, ಎ.ಕೆ.ಅನಸಾರಿ, ಸವಿತಾ ಬೆಳ್ಳೂಂಡಿಗಿ, ದೀಕ್ಷಿತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಜೀವನದ ಮೌಲ್ಯಗಳನ್ನು ತಿಳಿಸುವ ಜಾನಪದ ಸಾಹಿತ್ಯವನ್ನು ನಾವು ಮರೆತರೆ ಮಾನವೀಯತೆ ಹಾಗೂ ನೈತಿಕತೆ ಮರೆತಂತೆ’ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಐ.ಜೆ. ಮ್ಯಾಗೇರಿ ಹೇಳಿದರು.</p>.<p>ನಗರದ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾರಾಗೃಹ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನಪದ ಚಿಂತನಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜಾನಪದ ಸಾಹಿತ್ಯವು ಜೀವನದ ಮೌಲ್ಯಗಳನ್ನು ಸಾರುತ್ತದೆ. ಮಕ್ಕಳ ಪಠ್ಯಕ್ರಮದಲ್ಲಿ ಜಾನಪದ ಸಾಹಿತ್ಯಕ್ಕೆ ಇಂದು ಮಹತ್ವ ನೀಡಬೇಕಾಗಿದ್ದು, 21ನೇ ಶತಮಾನದ ಮಕ್ಕಳಿಗೆ ಜಾನಪದದ ಅರಿವು ಅತ್ಯಗತ್ಯ’ ಎಂದರು.</p>.<p>‘ಜಾನಪದ ಸಾಹಿತ್ಯ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಬಂಧಿಗಳಿಗೆ ಮನಪರಿವರ್ತನೆಗೆ ದಾರಿದೀಪವಾಗಿದೆ, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ತುಂಬ ಕ್ರಿಯಾಶೀಲವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ‘ಜಾನಪದ ಸಾಹಿತ್ಯ ಭಾರತೀಯ ಸಂಸ್ಕೃತಿಯ ತಾಯಿಬೇರು, ಗ್ರಾಮೀಣರ ಜೀವನ ಜಾನಪದ ಮೌಲ್ಯಗಳಿಂದ ಕೂಡಿಕೊಂಡಿದೆ. ಜನಪದ ಸಾಹಿತ್ಯ ಉಳಿಸಿ, ಬೆಳೆಸಿದ ಕೀರ್ತಿ ಜನಪದರಿಗೆ ಸಲ್ಲುತ್ತದೆ. ಆ ಜಾನಪದ ಜೀವನ ಮೌಲ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ’ ಎಂದರು.</p>.<p>ಸಾಹಿತಿ ಸಂಗಮೇಶ ಮೇತ್ರಿ ಮಾತನಾಡಿ, ‘ಜನಪದ ಸಾಹಿತ್ಯ ಹುಟ್ಟಿನಿಂದ ಸಾಯುತನಕ ಬೆಳೆಯುತ್ತ ಹೋಗುತ್ತದೆ. ಇದು ಮುಂದಿನ ತೆಲೆಮಾರಿಗೆ ಸಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜನಪದ ಸಾಹಿತ್ಯಕ್ಕೆ ಎಲ್ಲರನ್ನೂ ಮನಪರಿವರ್ತನೆ ಮಾಡುವ ತಾಕತ್ತಿದೆ’ ಎಂದರು.</p>.<p>ಶಿಕ್ಷಕ ಮೆಹತಾಬ್ ಕಾಗವಾಡ ಮಾತನಾಡಿದರು. ಉಪನ್ಯಾಸಕ ಶಿವಾನಂದ ಮಂಗಾನವರ, ಸಾಹಿತಿ ಶಿವಲೀಲಾ ಮುರಾಳ, ಶಿವಮ್ಮ, ಸಂತೋಷ ಸಂತಾಗೋಳ, ಶಕೀಲಾ ನದಾಫ್, ಮೌನೇಶ, ಕೆ.ಎಂ.ಚೌಧರಿ, ಎಸ್.ಎಸ್.ಪೂಜಾರಿ, ಎಸ್.ಎಸ್.ಕೋರವಾರ, ಈರಯ್ಯಾ ಹಿರೇಮಠ, ಗೋಪಾಲಕೃಷ್ಣ ಕುಲಕರ್ಣಿ, ಎ.ಕೆ.ಅನಸಾರಿ, ಸವಿತಾ ಬೆಳ್ಳೂಂಡಿಗಿ, ದೀಕ್ಷಿತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>