ವಿಜಯಪುರ: ತಿಕೋಟಾ ತಾಲ್ಲೂಕಿನ ರತ್ನಾಪೂರ ಕ್ರಾಸ್ನಲ್ಲಿ ಆರೋಪಿ ಅಮೋಘಸಿದ್ದ ಲೋಗಾಂವಿ ಎಂಬಾತ ಬೈಕ್ನಲ್ಲಿ ಸಾಗಿಸುತ್ತಿದ್ದ 4 ಕೆ.ಜಿ ಒಣಗಿದ ಗಾಂಜಾವನ್ನು ಅಬಕಾರಿ ಪೊಲೀಸರು ಪತ್ತೆಹಚ್ಚಿ, ಆರೋಪಿಯನ್ನು ವಶಕ್ಕೆ ಪಡೆದು, ಕೋರ್ಟ್ಗೆ ಹಾಜರು ಪಡಿಸಿದ್ದಾರೆ.
ಅಬಕಾರಿ ಪಿ.ಎಸ್.ಐ ಪ್ರಕಾಶ ಜಾಧವ, ಅಬಕಾರಿ ಕಾನ್ಸ್ಟೆಬಲ್ಗಳಾದ ಆಶ್ರೀತ್, ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ ಹಾಗೂ ವಾಹನ ಚಾಲಕ ಪರಶುರಾಮ ತೆಲಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ವಿಜಯಪುರ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಸಯೀದಾ ಅಜ್ಮತ್ ಆಪ್ರೀನ್, ಅಬಕಾರಿಉಪ-ಅಧೀಕ್ಷಕ ಎಚ್.ಎಸ್. ವಜ್ಜರಮಟ್ಟಿ, ಜಿಲ್ಲಾ ಅಬಕಾರಿ ವಿಚಕ್ಷಣ ದಳ ನಿರೀಕ್ಷಕ ಮಹಾದೇವ ಪೂಜಾರಿಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.