‘ಒಂದು ಬಾಗಿಲು ಮುಚ್ಚಿತು ಎಂದು ಅಳುತ್ತಾ ಕೂತರೆ, ತೆರೆದಿರುವ ಇನ್ನೊಂದು ಬಾಗಿಲು ಅರಿವಿಗೆ ಬರುವುದಿಲ್ಲ’ ಎಂಬಮಾತಿನ ಅರ್ಥ ಸದ್ಯದ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿದೆ. ಅದೇ ರೀತಿಯಲ್ಲಿ ಎಂತಹ ಬಿಕ್ಕಟ್ಟುಗಳೂ ಮನುಷ್ಯರನ್ನು ಹೊಸ ಶೋಧಕ್ಕೆ, ಸಾಧ್ಯತೆಯ ಹುಡುಕಾಟಕ್ಕೆ ಹಚ್ಚುತ್ತವೆ. ಅದು ಶಿಕ್ಷಣ ರಂಗದಲ್ಲಿ ಕೂಡಾ ನಿಜವಾಗಿದೆ. ಹೀಗಾಗಿ ಆನ್ಲೈನ್ ಪಾಠಗಳಿಗೆ ಹೆಚ್ಚಿನ ಮಹತ್ವ ಬಂದಿದೆ’ ಎಂದರು.