<p><strong>ವಿಜಯಪುರ:</strong> ಭೂ ಮಾಲೀಕರ ಹೆಸರಲ್ಲಿ ಖೊಟ್ಟಿ ಆಧಾರ್ ಕಾರ್ಡ್ಗಳನ್ನು ತಯಾರಿಸಿ ಮತ್ತು ನಕಲಿ ಭೂಮಾಲೀಕರನ್ನು ಸೃಷ್ಟಿಸಿ, ಆದರ ಆಧಾರದ ಮೇಲೆ ಜಿಲ್ಲೆಯಲ್ಲಿ ಭೂಮಿಯನ್ನು ಕಬಳಿಸುತ್ತಿದ್ದ 25 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ ತನಿಖಾ ತಂಡ ಯಶಸ್ವಿಯಾಗಿದೆ.</p>.<p>ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲೆಯಲ್ಲಿ 2022 ರಿಂದ 2024ರವರೆಗೆ ನಡೆದ ಒಟ್ಟು 27 ಭೂ ಕಬಳಿಕೆ ಪ್ರಕರಣಗಳು ತನಿಖೆ ನಡೆಸಿ, ಅದರಲ್ಲಿ 25 ಪ್ರಕರಣಗಳಿಗೆ ಸಂಬಂಧಿಸಿದಂತೆ 200 ಆರೋಪಿಗಳ ವಿರುದ್ಧ ಕೋರ್ಟ್ಗೆ ದೋಷಾರೋಪ ಪಟ್ಟಿ (ಚಾರ್ಜ್ ಸೀಟ್) ಸಲ್ಲಿಸಲಾಗಿದೆ ಎಂದು ಹೇಳಿದರು.</p>.<p>25 ಪ್ರಕರಣಗಳಲ್ಲಿ 158 ಎಕರೆ 13 ಗುಂಟೆ ಜಮೀನು ಹಾಗೂ 9 ಎನ್ಎ ಪ್ಲಾಟ್ಗಳನ್ನು ಮೋಸ ಹೋಗಿದ್ದ ಭೂಮಾಲೀಕರ ಸ್ವಾಧೀನಕ್ಕೆ ಹಿಂದಿರುಗಿಸಲಾಗಿದೆ. ಇನ್ನುಳಿದ ಎರಡು ಪ್ರಕರಣಗಳ ಬಗ್ಗೆ ‘ಬಿ’ ರಿಪೋರ್ಟ್ ಸಲ್ಲಿಸಲಾಗಿದೆ ಎಂದರು.</p>.<h3>9 ಮುಖ್ಯ ಆರೋಪಿಗಳು:</h3>.<p>ಭೂ ಕಬಳಿಕೆ ಪ್ರಕರಣಗಳಲ್ಲಿ ಭಾಗಿಯಾದ ವಿಜಯಪುರ ನಗರದ ಕಸ್ತೂರಿ ಕಾಲೊನಿಯ ಸುಧಾಕರ ಕಮಲಾಕರ, ಬಂಜಾರಾ ನಗರ ಕಾಶಿನಾಥ ರಾಠೋಡ, ಇಂಡಿ ತಾಲ್ಲೂಕಿನ ಹಳಗುಣಕಿಯ ಭೀಮರಾಯ ಕಟ್ಟಿಮನಿ, ಚಡಚಣ ತಾಲ್ಲೂಕಿನ ಧೂಳಖೇಡದ ಸುಧಾಕರ ಚರಾಟೆ, ವಿಜಯಪುರದ ಬಾಂಡ್ ರೈಟರ್ ದತ್ತಾತ್ರೆಯ ಶಿವಶರಣ, ರಫೀಕ್ ಲತೀಫ ತುರ್ಕಿ, ನಾಗಪ್ಪ ಕೊಲಕಾರ, ಬಾಪು ಕ್ಷೀರಸಾಗರ, ಸಾಂಗ್ಲಿಯ ಬಾಬುರಾವ್ ಕೋಳಿ ಅವರು ಗ್ಯಾಂಗ್ ಮಾಡಿಕೊಂಡು ಒಂದಕ್ಕಿಂತ ಹೆಚ್ಚು ಭೂ ಕಬಳಿಕೆ ಪ್ರಕರಣಗಳಲ್ಲಿ ಮುಖ್ಯ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದರು.</p>.<h3>ಯಾವ ರೀತಿ ಮೋಸ:</h3>.<p>ಬಹುತೇಕ ಆರೋಪಿಗಳು ಜಮೀನು ಮಾರಾಟ ಮಾಡಿ ಕಮಿಷನ್ ಪಡೆಯುವ ಏಜೆಂಟರು ಹಾಗೂ ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿ ಬಾಂಡ್ ರೈಟರ್ ಆಗಿದ್ದು, ಯಾರು ಜಮೀನುಗಳನ್ನು ಮಾರಾಟ ಮಾಡುತ್ತಾರೆ, ಆ ಜಮೀನುಗಳು ಎಲ್ಲಿವೆ ಎಂದು ಸುಲಭವಾಗಿ ತಿಳಿದುಕೊಂಡು, ಅವುಗಳ ದಾಖಲೆಗಳನ್ನು ತಾವೇ ಸಂಗ್ರಹಿಸುತ್ತಿದ್ದರು ಎಂದರು.</p>.<p>ವಯಸ್ಸಾದವರು, ಒಂಟಿಯಾಗಿ ವಾಸವಾಗಿರುವವರು ಮತ್ತು ಊರಲ್ಲಿ ಇರದೇ ಇರುವವರನ್ನು ಗುರಿಯಾಗಿಸಿಕೊಂಡು ಭೂಮಿ ಕಬಳಿಕೆ ಮಾಡುತ್ತಿದ್ದರು ಎಂದು ಹೇಳಿದರು.</p>.<p>ಆರೋಪಿಗಳು ತಮ್ಮ ಕೃತ್ಯಕ್ಕೆ ವಯಸ್ಸಾದ ನಿರ್ಗತಿಕ ಮತ್ತು ಬಡವರನ್ನು ಹುಡುಕಿ ಅವರಿಗೆ ಹಣದ ಆಮಿಷ ಒಡ್ಡಿ ಅವರ ಹೆಸರಲ್ಲಿ ಆಧಾರ್ ಕಾರ್ಡ್ಗಳನ್ನು ಪಡೆದುಕೊಂಡು, ಮೂಲ ಮಾಲೀಕರ ಹೆಸರನ್ನು ಬಡವರ ಮತ್ತು ನಿರ್ಗತಿಕರ ಆಧಾರ್ ಕಾರ್ಡ್ಗಳಲ್ಲಿ ಮಾಲೀಕರ ಹೆಸರಲ್ಲಿ ತಿದ್ದುಪಡಿ ಮಾಡುತ್ತಿದ್ದರು ಎಂದರು.</p>.<p>ಬಡವರು, ನಿರ್ಗತಿಕರಿಗೆ ತಾವೇ ಜಮೀನು ಮಾಲೀಕರು ಎಂದು ಮೂಲ ಜಮೀನು ಮಾಲೀಕರ ಹೆಸರು ಹೇಳಿಸಿ, ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿ ನಕಲಿಯಾಗಿ ಸೃಷ್ಟಿಸಿದ ಆಧಾರ್ ಕಾರ್ಡ್ಗಳನ್ನು ಕೊಟ್ಟು ಖರೀದಿ ಮಾಡಿಸುತ್ತಿದ್ದರು ಎಂದರು.</p>.<p>ನಕಲಿಯಾಗಿ ಸೃಷ್ಟಿಸಿದ ಮಾಲೀಕರಿಂದ ಜನರು ಜಮೀನನ್ನು ಖರೀದಿಸದೇ ಇದ್ದಾಗ ತಮ್ಮ ಗುಂಪಿನಲ್ಲಿಯೇ ಒಬ್ಬನ ಹೆಸರಿನಲ್ಲಿ ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿ ಖರೀದಿ ಹಾಕಿಸಿಕೊಂಡು, ನಂತರ ಕೆಲವು ತಿಂಗಳಲ್ಲಿಯೇ ಬೇರೆ ಜನರ ಹೆಸರಿನಲ್ಲಿ ಖರೀದಿ ಹಾಕಿಸುತ್ತಿದ್ದರು ಎಂದು ಹೇಳಿದರು.</p>.<p>ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿನ ಕೆಲವು ಬಾಂಡ್ ರೈಟರ್ಗಳು ಮೋಸದಿಂದ ಭೂ ಕಬಳಿಸುವ ಗ್ಯಾಂಗ್ಗಳ ಗುಂಪಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರೇ ಖರೀದಿ ಕಾಗದಗಳನ್ನು ತಯಾರಿಸಿ, ಖರೀದಿಗೆ ಅವಶ್ಯಕತೆ ಇರುವ ಎಲ್ಲ ವ್ಯವಹಾರಗಳನ್ನು ಮಾಡಿ, ಖರೀದಿ ಕಾಗದಗಳನ್ನು ತಯಾರಿಸುತ್ತಿದ್ದರು ಎಂದರು.</p>.<p>ಯಾರು ಬ್ಯಾಂಕುಗಳ ಮುಖಾಂತರ ಮೂಲ ಭೂ ಮಾಲೀಕರಿಗೆ ಹಣವನ್ನು ಕೊಟ್ಟಿರುವುದು ಕಂಡುಬಂದಿರುವುದಿಲ್ಲ ಎಂದರು.</p>.<p>ಖರೀದಿ ಪತ್ರಗಳಲ್ಲಿ ಮೋಸ ಮಾಡುವವರ ಗುಂಪಿನಲ್ಲಿ ಇಬ್ಬರೂ ಇಲ್ಲವೇ, ಇಬ್ಬರಕ್ಕಿಂತ ಹೆಚ್ಚಿನವರು ಕೂಡಿಕೊಂಡು ಖರೀದಿ ಕಾಗದದಲ್ಲಿ ಸಾಕ್ಷಿದಾರ ಎಂದು ಸಹಿಗಳನ್ನು ಮಾಡುತ್ತಿದ್ದರು ಎಂದರು.</p>.<p>ಮೋಸ ಮಾಡುವ ಗ್ಯಾಂಗ್ನವರು ತಾವು ನಕಲಿಯಾಗಿ ಸೃಷ್ಟಿಸಿದ ಮಾಲೀಕರನ್ನು ಊರಿಗೆ ಬರದಂತೆ, ಹೊರ ರಾಜ್ಯದಲ್ಲಿ ಮತ್ತು ತಮ್ಮ ವಿಳಾಸದಲ್ಲಿ ಇರದಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.</p>.<p>ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಡಿಎಸ್ಪಿ ಪರಶುರಾಮ ಮನಗೂಳಿ, ಪಿಎಸ್ಐ ಐ.ಎಂ.ದುಂಡಸಿ, ಆರ್.ಎಸ್.ಭಂಗಿ, ಕಾನ್ಸ್ಟೇಬಲ್ ಐ.ಎಂ.ಪೆಂಡಾರಿ, ವೈ.ಬಿ.ಕಬಾಡೆ, ಎಸ್.ಪಿ. ಹುಣಸಿಕಟ್ಟಿ ಅವರನ್ನೊಳಗೊಂಡ ತನಿಖಾ ತಂಡ ಪ್ರಕರಣವನ್ನು ಪತ್ತೆ ಹಚ್ಚಿದೆ ಎಂದು ತಿಳಿಸಿದರು. </p>.<p>ಪ್ರೊಬೇಷನರಿ ಐಪಿಎಸ್ ಅಧಿಕಾರಿ ಇಶಿತಾ ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><blockquote>ಜಮೀನು ನಿವೇಶನ ಖರೀದಿ ವೇಳೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಇಂತಹ ಭೂಕಬಳಿಕೆ ಪ್ರಕರಣಗಳು ನಡೆದಿದ್ದರೇ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು.</blockquote><span class="attribution">ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಭೂ ಮಾಲೀಕರ ಹೆಸರಲ್ಲಿ ಖೊಟ್ಟಿ ಆಧಾರ್ ಕಾರ್ಡ್ಗಳನ್ನು ತಯಾರಿಸಿ ಮತ್ತು ನಕಲಿ ಭೂಮಾಲೀಕರನ್ನು ಸೃಷ್ಟಿಸಿ, ಆದರ ಆಧಾರದ ಮೇಲೆ ಜಿಲ್ಲೆಯಲ್ಲಿ ಭೂಮಿಯನ್ನು ಕಬಳಿಸುತ್ತಿದ್ದ 25 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ ತನಿಖಾ ತಂಡ ಯಶಸ್ವಿಯಾಗಿದೆ.</p>.<p>ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲೆಯಲ್ಲಿ 2022 ರಿಂದ 2024ರವರೆಗೆ ನಡೆದ ಒಟ್ಟು 27 ಭೂ ಕಬಳಿಕೆ ಪ್ರಕರಣಗಳು ತನಿಖೆ ನಡೆಸಿ, ಅದರಲ್ಲಿ 25 ಪ್ರಕರಣಗಳಿಗೆ ಸಂಬಂಧಿಸಿದಂತೆ 200 ಆರೋಪಿಗಳ ವಿರುದ್ಧ ಕೋರ್ಟ್ಗೆ ದೋಷಾರೋಪ ಪಟ್ಟಿ (ಚಾರ್ಜ್ ಸೀಟ್) ಸಲ್ಲಿಸಲಾಗಿದೆ ಎಂದು ಹೇಳಿದರು.</p>.<p>25 ಪ್ರಕರಣಗಳಲ್ಲಿ 158 ಎಕರೆ 13 ಗುಂಟೆ ಜಮೀನು ಹಾಗೂ 9 ಎನ್ಎ ಪ್ಲಾಟ್ಗಳನ್ನು ಮೋಸ ಹೋಗಿದ್ದ ಭೂಮಾಲೀಕರ ಸ್ವಾಧೀನಕ್ಕೆ ಹಿಂದಿರುಗಿಸಲಾಗಿದೆ. ಇನ್ನುಳಿದ ಎರಡು ಪ್ರಕರಣಗಳ ಬಗ್ಗೆ ‘ಬಿ’ ರಿಪೋರ್ಟ್ ಸಲ್ಲಿಸಲಾಗಿದೆ ಎಂದರು.</p>.<h3>9 ಮುಖ್ಯ ಆರೋಪಿಗಳು:</h3>.<p>ಭೂ ಕಬಳಿಕೆ ಪ್ರಕರಣಗಳಲ್ಲಿ ಭಾಗಿಯಾದ ವಿಜಯಪುರ ನಗರದ ಕಸ್ತೂರಿ ಕಾಲೊನಿಯ ಸುಧಾಕರ ಕಮಲಾಕರ, ಬಂಜಾರಾ ನಗರ ಕಾಶಿನಾಥ ರಾಠೋಡ, ಇಂಡಿ ತಾಲ್ಲೂಕಿನ ಹಳಗುಣಕಿಯ ಭೀಮರಾಯ ಕಟ್ಟಿಮನಿ, ಚಡಚಣ ತಾಲ್ಲೂಕಿನ ಧೂಳಖೇಡದ ಸುಧಾಕರ ಚರಾಟೆ, ವಿಜಯಪುರದ ಬಾಂಡ್ ರೈಟರ್ ದತ್ತಾತ್ರೆಯ ಶಿವಶರಣ, ರಫೀಕ್ ಲತೀಫ ತುರ್ಕಿ, ನಾಗಪ್ಪ ಕೊಲಕಾರ, ಬಾಪು ಕ್ಷೀರಸಾಗರ, ಸಾಂಗ್ಲಿಯ ಬಾಬುರಾವ್ ಕೋಳಿ ಅವರು ಗ್ಯಾಂಗ್ ಮಾಡಿಕೊಂಡು ಒಂದಕ್ಕಿಂತ ಹೆಚ್ಚು ಭೂ ಕಬಳಿಕೆ ಪ್ರಕರಣಗಳಲ್ಲಿ ಮುಖ್ಯ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದರು.</p>.<h3>ಯಾವ ರೀತಿ ಮೋಸ:</h3>.<p>ಬಹುತೇಕ ಆರೋಪಿಗಳು ಜಮೀನು ಮಾರಾಟ ಮಾಡಿ ಕಮಿಷನ್ ಪಡೆಯುವ ಏಜೆಂಟರು ಹಾಗೂ ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿ ಬಾಂಡ್ ರೈಟರ್ ಆಗಿದ್ದು, ಯಾರು ಜಮೀನುಗಳನ್ನು ಮಾರಾಟ ಮಾಡುತ್ತಾರೆ, ಆ ಜಮೀನುಗಳು ಎಲ್ಲಿವೆ ಎಂದು ಸುಲಭವಾಗಿ ತಿಳಿದುಕೊಂಡು, ಅವುಗಳ ದಾಖಲೆಗಳನ್ನು ತಾವೇ ಸಂಗ್ರಹಿಸುತ್ತಿದ್ದರು ಎಂದರು.</p>.<p>ವಯಸ್ಸಾದವರು, ಒಂಟಿಯಾಗಿ ವಾಸವಾಗಿರುವವರು ಮತ್ತು ಊರಲ್ಲಿ ಇರದೇ ಇರುವವರನ್ನು ಗುರಿಯಾಗಿಸಿಕೊಂಡು ಭೂಮಿ ಕಬಳಿಕೆ ಮಾಡುತ್ತಿದ್ದರು ಎಂದು ಹೇಳಿದರು.</p>.<p>ಆರೋಪಿಗಳು ತಮ್ಮ ಕೃತ್ಯಕ್ಕೆ ವಯಸ್ಸಾದ ನಿರ್ಗತಿಕ ಮತ್ತು ಬಡವರನ್ನು ಹುಡುಕಿ ಅವರಿಗೆ ಹಣದ ಆಮಿಷ ಒಡ್ಡಿ ಅವರ ಹೆಸರಲ್ಲಿ ಆಧಾರ್ ಕಾರ್ಡ್ಗಳನ್ನು ಪಡೆದುಕೊಂಡು, ಮೂಲ ಮಾಲೀಕರ ಹೆಸರನ್ನು ಬಡವರ ಮತ್ತು ನಿರ್ಗತಿಕರ ಆಧಾರ್ ಕಾರ್ಡ್ಗಳಲ್ಲಿ ಮಾಲೀಕರ ಹೆಸರಲ್ಲಿ ತಿದ್ದುಪಡಿ ಮಾಡುತ್ತಿದ್ದರು ಎಂದರು.</p>.<p>ಬಡವರು, ನಿರ್ಗತಿಕರಿಗೆ ತಾವೇ ಜಮೀನು ಮಾಲೀಕರು ಎಂದು ಮೂಲ ಜಮೀನು ಮಾಲೀಕರ ಹೆಸರು ಹೇಳಿಸಿ, ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿ ನಕಲಿಯಾಗಿ ಸೃಷ್ಟಿಸಿದ ಆಧಾರ್ ಕಾರ್ಡ್ಗಳನ್ನು ಕೊಟ್ಟು ಖರೀದಿ ಮಾಡಿಸುತ್ತಿದ್ದರು ಎಂದರು.</p>.<p>ನಕಲಿಯಾಗಿ ಸೃಷ್ಟಿಸಿದ ಮಾಲೀಕರಿಂದ ಜನರು ಜಮೀನನ್ನು ಖರೀದಿಸದೇ ಇದ್ದಾಗ ತಮ್ಮ ಗುಂಪಿನಲ್ಲಿಯೇ ಒಬ್ಬನ ಹೆಸರಿನಲ್ಲಿ ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿ ಖರೀದಿ ಹಾಕಿಸಿಕೊಂಡು, ನಂತರ ಕೆಲವು ತಿಂಗಳಲ್ಲಿಯೇ ಬೇರೆ ಜನರ ಹೆಸರಿನಲ್ಲಿ ಖರೀದಿ ಹಾಕಿಸುತ್ತಿದ್ದರು ಎಂದು ಹೇಳಿದರು.</p>.<p>ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿನ ಕೆಲವು ಬಾಂಡ್ ರೈಟರ್ಗಳು ಮೋಸದಿಂದ ಭೂ ಕಬಳಿಸುವ ಗ್ಯಾಂಗ್ಗಳ ಗುಂಪಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರೇ ಖರೀದಿ ಕಾಗದಗಳನ್ನು ತಯಾರಿಸಿ, ಖರೀದಿಗೆ ಅವಶ್ಯಕತೆ ಇರುವ ಎಲ್ಲ ವ್ಯವಹಾರಗಳನ್ನು ಮಾಡಿ, ಖರೀದಿ ಕಾಗದಗಳನ್ನು ತಯಾರಿಸುತ್ತಿದ್ದರು ಎಂದರು.</p>.<p>ಯಾರು ಬ್ಯಾಂಕುಗಳ ಮುಖಾಂತರ ಮೂಲ ಭೂ ಮಾಲೀಕರಿಗೆ ಹಣವನ್ನು ಕೊಟ್ಟಿರುವುದು ಕಂಡುಬಂದಿರುವುದಿಲ್ಲ ಎಂದರು.</p>.<p>ಖರೀದಿ ಪತ್ರಗಳಲ್ಲಿ ಮೋಸ ಮಾಡುವವರ ಗುಂಪಿನಲ್ಲಿ ಇಬ್ಬರೂ ಇಲ್ಲವೇ, ಇಬ್ಬರಕ್ಕಿಂತ ಹೆಚ್ಚಿನವರು ಕೂಡಿಕೊಂಡು ಖರೀದಿ ಕಾಗದದಲ್ಲಿ ಸಾಕ್ಷಿದಾರ ಎಂದು ಸಹಿಗಳನ್ನು ಮಾಡುತ್ತಿದ್ದರು ಎಂದರು.</p>.<p>ಮೋಸ ಮಾಡುವ ಗ್ಯಾಂಗ್ನವರು ತಾವು ನಕಲಿಯಾಗಿ ಸೃಷ್ಟಿಸಿದ ಮಾಲೀಕರನ್ನು ಊರಿಗೆ ಬರದಂತೆ, ಹೊರ ರಾಜ್ಯದಲ್ಲಿ ಮತ್ತು ತಮ್ಮ ವಿಳಾಸದಲ್ಲಿ ಇರದಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.</p>.<p>ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಡಿಎಸ್ಪಿ ಪರಶುರಾಮ ಮನಗೂಳಿ, ಪಿಎಸ್ಐ ಐ.ಎಂ.ದುಂಡಸಿ, ಆರ್.ಎಸ್.ಭಂಗಿ, ಕಾನ್ಸ್ಟೇಬಲ್ ಐ.ಎಂ.ಪೆಂಡಾರಿ, ವೈ.ಬಿ.ಕಬಾಡೆ, ಎಸ್.ಪಿ. ಹುಣಸಿಕಟ್ಟಿ ಅವರನ್ನೊಳಗೊಂಡ ತನಿಖಾ ತಂಡ ಪ್ರಕರಣವನ್ನು ಪತ್ತೆ ಹಚ್ಚಿದೆ ಎಂದು ತಿಳಿಸಿದರು. </p>.<p>ಪ್ರೊಬೇಷನರಿ ಐಪಿಎಸ್ ಅಧಿಕಾರಿ ಇಶಿತಾ ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><blockquote>ಜಮೀನು ನಿವೇಶನ ಖರೀದಿ ವೇಳೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಇಂತಹ ಭೂಕಬಳಿಕೆ ಪ್ರಕರಣಗಳು ನಡೆದಿದ್ದರೇ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು.</blockquote><span class="attribution">ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>