ಯಾವ ಧರ್ಮ ನಮ್ಮ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಗೌರವಿಸುತ್ತೋ ಆ ಧರ್ಮವನ್ನು ಯಾರು ಬೇಕಾದರು ಅನುಸರಿಸಬಹುದು. ಮತ್ತೊಬ್ಬರ ಹಕ್ಕು ಕಿತ್ತುಕೊಳ್ಳಲು ಮುತಾಲಿಕ್ ಯಾರು? ದೇಶದ ಸಂವಿಧಾನ 130 ಕೋಟಿ ಜನರ ಧರ್ಮಗ್ರಂಥವಿದ್ದಂತೆ ಅದನ್ನೇ ದಿಕ್ಕರಿಸಿ ಜಾತಿ, ಮತ ಪಂಥದ ಹೆಸರಿನಲ್ಲಿ ಸಮಾಜಘಾತುಕ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಪ್ರಮೋದ ಮುತಾಲಿಕ್ ಅವರನ್ನು ಸರ್ಕಾರ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.