<p><strong>ಚಡಚಣ</strong>: ‘ನಿರ್ಗತಿಕರು ಹಾಗೂ ಕುಟುಂಬಗಳಲ್ಲಿ ನಿರ್ಲಕ್ಷಿಸಲ್ಪಟ್ಟ ಜನರ ಜೀವನದಲ್ಲಿ ಆಶಾಕಿರಣವಾಗಿರುವ ಅನಾಥಾಶ್ರಮಗಳು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ’ ಎಂದು ಶಾಸಕ ವಿಠ್ಟಲ ಕಟಕಧೋಂಡ ಹೇಳಿದರು.</p>.<p>ತಾಲ್ಲೂಕಿನ ಮಣಂಕಲಗಿ ಗ್ರಾಮದಲ್ಲಿ ಸೋಮವಾರ ಮಾಹೇರ ಸಂಸ್ಥೆಯ 71ನೇ ಅನಾಥಾಶ್ರಮ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.</p>.<p>‘ಮಾಹೇರ ಸಂಸ್ಥೆಯ ಲೂಸಿ ಕುರಿಯನ್ ಅವರು ನಿರ್ಗತಿಕ ಜನ ಮತ್ತು ಅನಾಥ ಮಕ್ಕಳನ್ನು ಕರೆತಂದು ಅವರ ಊಟ, ವಸತಿ ಉಪಚಾರ, ಶಿಕ್ಷಣ ನೀಡುವದರೊಂದಿಗೆ ವೃತ್ತಿ ತರಬೇತಿ ನೀಡುತ್ತಿರುವುದು ಸಮಾಜಕ್ಕೆ ಮಾದರಿ’ ಎಂದರು.</p>.<p>ಮಾಹೇರ ಸಂಸ್ಥೆಯ ಸಂಸ್ಥಾಪಕಿ ಲೂಸಿ ಕುರಿಯನ್ ಮಾತನಾಡಿ, ‘ಸಂಸ್ಥೆಯು ಪ್ರಾರಂಭವಾಗಿ 28 ವರ್ಷಗಳಲ್ಲಿ ದೇಶದ 7 ರಾಜ್ಯಗಳಲ್ಲಿ 71 ಆಶ್ರಯ ತಾಣಗಳನ್ನು ರೂಪಿಸಿದೆ. ಇದಕ್ಕೆಲ್ಲ ಕಾರಣ ಭೂದಾನಿಗಳು ಮತ್ತು ದಾನಿಗಳು’ ಎಂದು ತಿಳಿಸಿದರು.</p>.<p>ಸಾನ್ನಿಧ್ಯ ವಹಿಸಿದ್ದ ತದ್ದೇವಾಡಿ ಮಹಾಂತೇಶ ಸ್ವಾಮೀಜಿ, ‘ಲೂಸಿ ಕುರಿಯನ್ ಅವರ ಸಾಮಾಜಿಕ ಚಿಂತನೆ, ಕಳಕಳಿ ಶ್ಲಾಘನೀಯ. ಅವರ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸೋಣ’ ಎಂದರು.</p>.<p>ಮುಖಂಡ ಎಚ್.ಆರ್.ಉಟಗಿ, ಶ್ರೀನಿವಾಸ ಕುಲಕರ್ಣಿ, ಭೂದಾನಿ ಗುರಲಿಂಗಪ್ಪ ಮಸಳಿ, ಬಿ.ಎಂ ಕೋರೆ, ಶಶಿಧರ ಕಲ್ಯಾಣಶೆಟ್ಟಿ, ಶ್ಯಾಮ ಪವಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಡಚಣ</strong>: ‘ನಿರ್ಗತಿಕರು ಹಾಗೂ ಕುಟುಂಬಗಳಲ್ಲಿ ನಿರ್ಲಕ್ಷಿಸಲ್ಪಟ್ಟ ಜನರ ಜೀವನದಲ್ಲಿ ಆಶಾಕಿರಣವಾಗಿರುವ ಅನಾಥಾಶ್ರಮಗಳು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ’ ಎಂದು ಶಾಸಕ ವಿಠ್ಟಲ ಕಟಕಧೋಂಡ ಹೇಳಿದರು.</p>.<p>ತಾಲ್ಲೂಕಿನ ಮಣಂಕಲಗಿ ಗ್ರಾಮದಲ್ಲಿ ಸೋಮವಾರ ಮಾಹೇರ ಸಂಸ್ಥೆಯ 71ನೇ ಅನಾಥಾಶ್ರಮ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.</p>.<p>‘ಮಾಹೇರ ಸಂಸ್ಥೆಯ ಲೂಸಿ ಕುರಿಯನ್ ಅವರು ನಿರ್ಗತಿಕ ಜನ ಮತ್ತು ಅನಾಥ ಮಕ್ಕಳನ್ನು ಕರೆತಂದು ಅವರ ಊಟ, ವಸತಿ ಉಪಚಾರ, ಶಿಕ್ಷಣ ನೀಡುವದರೊಂದಿಗೆ ವೃತ್ತಿ ತರಬೇತಿ ನೀಡುತ್ತಿರುವುದು ಸಮಾಜಕ್ಕೆ ಮಾದರಿ’ ಎಂದರು.</p>.<p>ಮಾಹೇರ ಸಂಸ್ಥೆಯ ಸಂಸ್ಥಾಪಕಿ ಲೂಸಿ ಕುರಿಯನ್ ಮಾತನಾಡಿ, ‘ಸಂಸ್ಥೆಯು ಪ್ರಾರಂಭವಾಗಿ 28 ವರ್ಷಗಳಲ್ಲಿ ದೇಶದ 7 ರಾಜ್ಯಗಳಲ್ಲಿ 71 ಆಶ್ರಯ ತಾಣಗಳನ್ನು ರೂಪಿಸಿದೆ. ಇದಕ್ಕೆಲ್ಲ ಕಾರಣ ಭೂದಾನಿಗಳು ಮತ್ತು ದಾನಿಗಳು’ ಎಂದು ತಿಳಿಸಿದರು.</p>.<p>ಸಾನ್ನಿಧ್ಯ ವಹಿಸಿದ್ದ ತದ್ದೇವಾಡಿ ಮಹಾಂತೇಶ ಸ್ವಾಮೀಜಿ, ‘ಲೂಸಿ ಕುರಿಯನ್ ಅವರ ಸಾಮಾಜಿಕ ಚಿಂತನೆ, ಕಳಕಳಿ ಶ್ಲಾಘನೀಯ. ಅವರ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸೋಣ’ ಎಂದರು.</p>.<p>ಮುಖಂಡ ಎಚ್.ಆರ್.ಉಟಗಿ, ಶ್ರೀನಿವಾಸ ಕುಲಕರ್ಣಿ, ಭೂದಾನಿ ಗುರಲಿಂಗಪ್ಪ ಮಸಳಿ, ಬಿ.ಎಂ ಕೋರೆ, ಶಶಿಧರ ಕಲ್ಯಾಣಶೆಟ್ಟಿ, ಶ್ಯಾಮ ಪವಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>