ಕೊಲ್ಹಾರ: ತಾಲ್ಲೂಕಿನ ಬಳೂತಿ ಜಾಕ್ವೆಲ್ ಬಳಿಯ ಕೃಷ್ಣಾ ನದಿ ದಡದಲ್ಲಿ ಭಾನುವಾರ ವಿಜಯಪುರ ಮೂಲದ ತಾಯಿ, ಮಗಳ ಶವ ಪತ್ತೆಯಾಗಿವೆ.
ಶಕುಂತಲಾ ಸಿದ್ದಣ್ಣ ಖೇಡ (50) ಹಾಗೂ ಗಂಗಾ ಉದಯ್ ಹುಣಶ್ಯಾಳ (22) ಮೃತ ತಾಯಿ, ಮಗಳು.
ತಾಯಿ ಶಕುಂತಲಾ ಅವರ ಪತಿ ಕಳೆದ ಒಂದೂವರೆ ವರ್ಷಗಳ ಹಿಂದೆ ತೀರಿಹೋಗಿದ್ದು, ತೀವ್ರವಾಗಿ ಮನನೊಂದಿದ್ದರು. ಮಗಳು ಗಂಗಾ ಮಾನಸಿಕ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ.
ಇಬ್ಬರು ಶನಿವಾರ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾನುವಾರ ಬಳೂತಿ ಜಾಕ್ವೆಲ್ ಬಳಿಯ ನದಿ ದಂಡೆಯಲ್ಲಿ ಶವಗಳು ದೊರೆತಿವೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.