ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕಡಕೋಳ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ತಾಯಿ, ಮಗಳು ಸಾವಿಗೀಡಾಗಿದ್ದಾರೆ.
ಹೊಲದಿಂದ ಮನೆಗೆ ಬರುವ ವೇಳೆ ಮರದಡಿಯಲ್ಲಿ ನಿಂತಿದ್ದಾಗ ಸಿಡಿಲು ಬಡಿದು ಮಹಾದೇವಿ ಭಜಂತ್ರಿ (43) ಮತ್ತು ಸೋನಿ ಭಜಂತ್ರಿ (12) ಸಾವಿಗೀಡಾಗಿದ್ದಾರೆ. ಮಹಾದೇವಿ ಪತಿ ಯಂಕಪ್ಪಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.