‘ಝಳಕಿ ಗ್ರಾಮದ ವಿಠಲ ನಗರದಲ್ಲಿ 300ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 500 ಮನೆಗಳು ಇರುತ್ತವೆ. ಇಲ್ಲಿ ಸರಿಯಾಗಿ ವಿದ್ಯುತ್ ಸಂಪರ್ಕವಿಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ ಎಂದು ದೂರು ಸಲ್ಲಿಸಿರುತ್ತಾರೆ. ಈ ವಿಠಲ ನಗರದ ನಿವಾಸಿಗಳು ವಿದ್ಯುತ್ ಸಂಪರ್ಕದ ಕುರಿತು ತೀವ್ರವಾಗಿ ಪರಿಶೀಲಿಸಿ, ವಿದ್ಯುತ್ ಸಂಪರ್ಕವನ್ನು ನೀಡಲು ಕೋರುತ್ತೇನೆ’ ಎಂಬ ಸಂಸದ ರಮೇಶ ಜಿಗಜಿಣಗಿ ಅವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ನಗುವಿಗೆ ಕಾರಣವಾಗಿದೆ.